ಬ್ರೇಕಿಂಗ್ ನ್ಯೂಸ್
01-01-22 01:39 pm HK Desk news ದೇಶ - ವಿದೇಶ
ನವದೆಹಲಿ, ಜ.1 : ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತಕ್ಕೆ ಬಂದ ಬಳಿಕ ಮೊದಲ ಬಾರಿಗೆ ಭಾರತ ನೆರವಿನ ಹಸ್ತ ಚಾಚಿದೆ. ಕೋವಿಡ್ ಸೋಂಕಿನ ವಿರುದ್ಧ ನೀಡಲಾಗುವ ಹೈದ್ರಾಬಾದಿನ ಬಯೋಟೆಕ್ ಕಂಪನಿ ಉತ್ಪಾದಿಸಿದ ಒಂದು ಮಿಲಿಯನ್ ಕೋವ್ಯಾಕ್ಸಿನ್ ಲಸಿಕೆಯನ್ನು ಭಾರತ ಅಫ್ಘಾನಿಸ್ತಾನಕ್ಕೆ ಕಳಿಸಿಕೊಟ್ಟಿದೆ.
ಮೊದಲ ಹಂತದಲ್ಲಿ ಇರಾನ್ ಏರ್ವೇಸ್ ವಿಮಾನದಲ್ಲಿ 5 ಲಕ್ಷ ಲಸಿಕೆ ಹೋಗಿದ್ದರೆ, ಮುಂದಿನ ವಾರದಲ್ಲಿ ಮತ್ತೆ ಐದು ಲಕ್ಷ ಲಸಿಕೆ ಅಫ್ಘಾನ್ ತಲುಪಲಿದೆ. ಕಳೆದ ಸೆಪ್ಟಂಬರ್ ನಲ್ಲಿ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ ಬಂದ ಬಳಿಕ ಭಾರತದಿಂದ ನೀಡಲಾಗುತ್ತಿದ್ದ ನೆರವನ್ನು ನಿಲ್ಲಿಸಲಾಗಿತ್ತು.
ವ್ಯಾಕ್ಸಿನ್ ಮೈತ್ರಿ ಪ್ರೋಗ್ರಾಮ್ ಹೆಸರಲ್ಲಿ ಭಾರತವು ಹಿಂದುಳಿದ ರಾಷ್ಟ್ರಗಳಿಗೆ ತನ್ನಲ್ಲಿ ತಯಾರಿಸಿದ ಕೋವಿಡ್ ಲಸಿಕೆಯನ್ನು ನೀಡುತ್ತಿದೆ. ಈಗಾಗ್ಲೇ ಹಲವು ರಾಷ್ಟ್ರಗಳಿಗೆ ಭಾರತದಿಂದ ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಲಸಿಕೆಯನ್ನು ನೀಡಲಾಗಿದೆ. ಆದರೆ, ಅಫ್ಘಾನಿಸ್ತಾನಕ್ಕೆ ಮೊದಲ ಬಾರಿಗೆ ಈ ರೀತಿಯ ಮೈತ್ರಿಯಡಿ ಲಸಿಕೆ ನೀಡಲಾಗಿದೆ. ಬಾಂಗ್ಲಾದೇಶ, ನೇಪಾಳ, ಮ್ಯಾನ್ಮಾರ್, ಭೂತಾನ್, ಮಾರಿಷಸ್, ಶ್ರೀಲಂಕಾ, ಮಾಲ್ದೀವ್ಸ್, ಸೌತ್ ಆಫ್ರಿಕಾ, ಬ್ರೆಜಿಲ್, ಮೊರಕ್ಕೋ, ನೈಜೀರಿಯಾ ಮತ್ತು ಡಿಆರ್ ಕಾಂಗೋ ದೇಶಗಳು ಭಾರತದ ಲಸಿಕೆಯ ಪ್ರಯೋಜನವನ್ನು ಪಡೆದಿವೆ.
ಭಾರತ್ ಬಯೋಟೆಕ್ ಕಂಪನಿಯು ತಿಂಗಳಿಗೆ 70 ಮಿಲಿಯನ್ ಲಸಿಕೆಯನ್ನು ಉತ್ಪಾದಿಸುತ್ತಿದೆ. ಹೈದ್ರಾಬಾದ್, ಪುಣೆ, ಅಕಲೇಶ್ವರ್, ಕರ್ನಾಟಕದ ಮಾಲೂರಿನಲ್ಲಿ ಬಯೋಟೆಕ್ ಉತ್ಪಾದನಾ ಘಟಕಗಳಿವೆ. ಕೋವ್ಯಾಕ್ಸಿನ್ ಲಸಿಕೆಗೆ ಕಳೆದ ನವೆಂಬರ್ ತಿಂಗಳಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಅಂಗೀಕಾರ ಸಿಕ್ಕಿದ ಬಳಿಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರೀ ಬೇಡಿಕೆ ಕಂಡುಬಂದಿದೆ. ಕೋವ್ಯಾಕ್ಸಿನ್ ಬಳಸಲು ಈಗಾಗ್ಲೇ 20 ದೇಶಗಳು ತಮ್ಮಲ್ಲಿ ಒಪ್ಪಿಗೆ ನೀಡಿದ್ದು, ಸದ್ಯದಲ್ಲೇ 50ಕ್ಕೂ ದೇಶಗಳಲ್ಲಿ ಕೋವ್ಯಾಕ್ಸಿನ್ ಬಳಕೆಗೆ ಬರುವ ನಿರೀಕ್ಷೆಯಿದೆ.
India is providing 1 million doses of its indigenous Covid-19 vaccine, Covaxin, produced by Hyderabad-based Bharat Biotech, to Taliban-controlled Afghanistan.
12-09-25 08:26 pm
HK News Desk
Yatnal, Maddur: ರಾಜ್ಯದಲ್ಲಿ ಹೊಸ ಹಿಂದು ಪಾರ್ಟಿ ಕ...
12-09-25 03:04 pm
ಸಾಹಸಸಿಂಹ ವಿಷ್ಣುವರ್ಧನ್, ಹಿರಿಯ ನಟಿ ಬಿ.ಸರೋಜಾದೇವಿ...
11-09-25 10:11 pm
ಈದ್ ಮೆರವಣಿಗೆ : ಶಿವಮೊಗ್ಗದಲ್ಲಿ ಪಾಕಿಸ್ತಾನ್ ಜಿಂದಾ...
09-09-25 10:52 pm
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
12-09-25 11:33 am
HK News Desk
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
12-09-25 10:58 pm
Mangalore Correspondent
Mahesh Vikram Hegde Arrested, Post Card Kanna...
12-09-25 09:25 pm
Sameer Md, Dharmasthala: ವಿದೇಶದಿಂದ ಫಂಡ್ ಬಂದಿ...
12-09-25 08:53 pm
RTI Dharmasthala Hostels, Mahesh Thimarodi: ಧ...
12-09-25 07:43 pm
Mangalore Road Accident, Pothole, Survery: ರಸ...
12-09-25 05:34 pm
12-09-25 11:07 pm
Mangalore Correspondent
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm
Mangalore Police, Arrest: ಉರ್ವಾದಲ್ಲಿ ಪೊಲೀಸ್ ಕ...
11-09-25 09:13 pm
Mangalore Fake Documents, Crime, Arrest: ಸರ್ಕ...
11-09-25 08:52 pm