ಹಳಿ ತಪ್ಪಿದ ಬಿಕಾನೇರ್ ಎಕ್ಸ್ ಪ್ರೆಸ್ ರೈಲು ; 5 ಮಂದಿ ಸಾವು, 60ಕ್ಕೂ ಹೆಚ್ಚು ಮಂದಿಗೆ ಗಾಯ, ಉನ್ನತ ಮಟ್ಟದ ತನಿಖೆಗೆ ಆದೇಶ

13-01-22 09:05 pm       HK Desk news   ದೇಶ - ವಿದೇಶ

ಪಶ್ಚಿಮ ಬಂಗಾಳದ ಜಲಪಾಯಿ ಗುರಿ ಜಿಲ್ಲೆಯಲ್ಲಿ ಬಿಕಾನೇರ್ – ಗುವಾಹಟಿ ಎಕ್ಸ್ ಪ್ರೆಸ್ ರೈಲು ಹಳಿ ತಪ್ಪಿದ್ದು, 12 ಬೋಗಿಗಳು ಉರುಳಿ ಬಿದ್ದು ಕನಿಷ್ಠ ಐದು ಮಂದಿ ಸಾವಿಗೀಡಾಗಿದ್ದಾರೆ. 60ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಕೊಲ್ಕತ್ತಾ, ಜ.13 : ಪಶ್ಚಿಮ ಬಂಗಾಳದ ಜಲಪಾಯಿ ಗುರಿ ಜಿಲ್ಲೆಯಲ್ಲಿ ಬಿಕಾನೇರ್ – ಗುವಾಹಟಿ ಎಕ್ಸ್ ಪ್ರೆಸ್ ರೈಲು ಹಳಿ ತಪ್ಪಿದ್ದು, 12 ಬೋಗಿಗಳು ಉರುಳಿ ಬಿದ್ದು ಕನಿಷ್ಠ ಐದು ಮಂದಿ ಸಾವಿಗೀಡಾಗಿದ್ದಾರೆ. 60ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ರಾಜಸ್ಥಾನದ ಬಿಕಾನೇರ್ ನಿಂದ ಹೊರಟಿದ್ದ ರೈಲು ಬಿಹಾರದ ಪಾಟ್ನಾ ಮೂಲಕ ಅಸ್ಸಾಮ್ ರಾಜಧಾನಿ ಗುವಾಹಟಿಗೆ ತೆರಳುತ್ತಿತ್ತು. ಪಶ್ಚಿಮ ಬಂಗಾಳ ರಾಜ್ಯದ ಜಲಪಾಯಿ ಗುರಿ ಜಿಲ್ಲೆಯ ಮೈನಾಗುರಿ ಎಂಬಲ್ಲಿಂದ ಸಾಗುತ್ತಿದ್ದಾಗ ಗುರುವಾರ ಸಂಜೆ 5.15 ಗಂಟೆಗೆ ರೈಲು ಹಳಿ ತಪ್ಪಿದ್ದು, ಒಂದರ ಮೇಲೊಂದು ಬಿದ್ದಿದೆ.

ರೈಲಿನಲ್ಲಿ ಸುಮಾರು 1200 ಪ್ರಯಾಣಿಕರು ಇದ್ದರು ಎನ್ನಲಾಗುತ್ತಿದೆ. ಬಿಕಾನೇರ್ ನಿಂದ 177 ಮಂದಿ ಪ್ರಯಾಣಿಸುತ್ತಿದ್ದರೆ ಪಾಟ್ನಾ ಜಂಕ್ಷನ್ನಿಂದ 98 ಮಂದಿ ರೈಲು ಹತ್ತಿದ್ದರು. ಹಲವಾರು ಮಂದಿ ಗಾಯಗೊಂಡಿದ್ದಾರೆಂದು ಹೇಳಲಾಗುತ್ತಿದ್ದು, ಅವರನ್ನು ಜಲಪಾಯಿಗುರಿ ಆಸ್ಪತ್ರೆಗೆ ಒಯ್ಯಲಾಗಿದೆ. ಸಿಲಿಗುರಿಯ ಎನ್ ಡಿಆರ್ ಎಫ್ ತಂಡ ಸ್ಥಳಕ್ಕಾಗಮಿಸಿದ್ದು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ.  

ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಘಟನೆ ಬಗ್ಗೆ ನಿಗಾ ವಹಿಸಿದ್ದು, ಉನ್ನತ ಮಟ್ಟದ ತನಿಖೆಗೆ ಆದೇಶ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಘಟನೆ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಜೊತೆ ಕರೆ ಮಾಡಿ ಮಾತುಕತೆ ನಡೆಸಿದ್ದಾರೆ. ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಪರಿಹಾರವನ್ನು ರೈಲ್ವೇ ಇಲಾಖೆ ಘೋಷಣೆ ಮಾಡಿದೆ. 

As many as 12 bogies of the Bikaner-Guwahati Express have derailed in West Bengal's Jalpaiguri district. Five people have lost their lives in the accident. Rescue operations are underway.