ಗಣರಾಜ್ಯ ಹಿನ್ನೆಲೆ ರಾಜಧಾನಿ ದೆಹಲಿಯಲ್ಲಿ ಹೈಎಲರ್ಟ್ ; ಅನಾಥ ಬ್ಯಾಗಿನಲ್ಲಿ ಬಾಂಬ್ ಪತ್ತೆ

14-01-22 05:39 pm       HK Desk news   ದೇಶ - ವಿದೇಶ

ಗಣರಾಜ್ಯೋತ್ಸವಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ ರಾಜಧಾನಿ ದೆಹಲಿಯಲ್ಲಿ ಅತ್ಯಾಧುನಿಕ ಐಇಡಿ ಸ್ಫೋಟಕ ಪತ್ತೆಯಾಗಿದ್ದು, ಆತಂಕ ಮೂಡಿಸಿದೆ.

ನವದೆಹಲಿ, ಜ.14 : ಗಣರಾಜ್ಯೋತ್ಸವಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ ರಾಜಧಾನಿ ದೆಹಲಿಯಲ್ಲಿ ಅತ್ಯಾಧುನಿಕ ಐಇಡಿ ಸ್ಫೋಟಕ ಪತ್ತೆಯಾಗಿದ್ದು, ಆತಂಕ ಮೂಡಿಸಿದೆ.

ಬೆಳಗ್ಗೆ 10.20ರ ಸುಮಾರಿಗೆ ಪೂರ್ವ ದೆಹಲಿಯ ಗಾಜಿಪುರ್ ಮಾರ್ಕೆಟ್ ಪ್ರದೇಶದಲ್ಲಿ ಅನಾಥ ಬ್ಯಾಗ್ ಇರುವ ಬಗ್ಗೆ ಅಗ್ನಿಶಾಮಕ ದಳಕ್ಕೆ ಮಾಹಿತಿ ಬಂದಿತ್ತು. ಕೂಡಲೇ ಅಗ್ನಿಶಾಮಕ ಸಿಬಂದಿ ಸ್ಥಳಕ್ಕೆ ಆಗಮಿಸಿದ್ದರು. ಜೊತೆಗೆ ಎನ್ಎಸ್ ಜಿಯ ಬಾಂಬ್ ನಿಷ್ಕ್ರಿಯ ದಳ, ಭಯೋತ್ಪಾದಕ ವಿರೋಧಿ ದಳದ ಪೊಲೀಸರು ಕೂಡ ಸ್ಥಳಕ್ಕೆ ಬಂದಿದ್ದರು. ಕೂಡಲೇ ಸ್ಥಳದಿಂದ ಜನರನ್ನು ತೆರವು ಮಾಡಲಾಯ್ತು.

ಬಳಿಕ ಬಾಂಬ್ ನಿಷ್ಕ್ರಿಯ ತಂಡದ ಸದಸ್ಯರು ಬ್ಯಾಗ್ ಓಪನ್ ಮಾಡಿ, ಅದರಲ್ಲಿದ್ದ ಐಇಡಿ ಸ್ಫೋಟಕವನ್ನು ತೆಗೆದು ವಶಕ್ಕೆ ಪಡೆದಿದ್ದಾರೆ. ಭಾರೀ ಸಂಖ್ಯೆಯಲ್ಲಿ ಪೊಲೀಸರು ಸ್ಥಳವನ್ನು ಸುತ್ತುವರಿದಿದ್ದರು. ಭಯೋತ್ಪಾದನಾ ವಿರೋಧಿ ದಳದ ವಿಶೇಷ ತಂಡ ಈ ಬಗ್ಗೆ ಪ್ರಕರಣ ದಾಖಲಿಸಿದ್ದು, ತನಿಖೆ ಆರಂಭಿಸಿದೆ.

ಜನವರಿ 26ರ ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ರಾಜಧಾನಿಯಲ್ಲಿ ಅಲರ್ಟ್ ಇದ್ದು, ಅದರ ನಡುವೆ ವಿಚ್ಛಿದ್ರಕಾರಿ ಶಕ್ತಿಗಳು ವಿಧ್ವಂಸಕ ಕೃತ್ಯಕ್ಕೆ ಸಂಚು ಹೂಡಿವೆ. ಇದರ ಪ್ರತೀಕವಾಗಿ ಬಾಂಬ್ ಪತ್ತೆಯಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಸುದ್ದಿಸಂಸ್ಥೆಗೆ ಪ್ರತಿಕ್ರಿಯಿಸಿದ್ದಾರೆ.

Ahead of Republic day, an improvised explosive device (IED) was recovered from Ghazipur Flower Market in East Delhi on Friday, triggering panic among the people. A Fire Department Official informed that a call was received around 10.20 AM regarding an unattended bag lying at the Ghazipur flower market in the city after which they swung into action.