ಬ್ರೇಕಿಂಗ್ ನ್ಯೂಸ್
02-02-22 09:04 pm HK Desk news ದೇಶ - ವಿದೇಶ
ನೋಯ್ಡಾ, ಫೆ.2 : ಸಮಾಜವಾದಿ ಪಾರ್ಟಿ ಪ್ರಾಬಲ್ಯದ ಕನೌಜ್ ಜಿಲ್ಲೆಯ ಸುಗಂಧ ದ್ರವ್ಯಗಳ ಉತ್ಪಾದಕರಿಂದ ತೊಡಗಿದ್ದ ಐಟಿ ಅಧಿಕಾರಿಗಳ ದಾಳಿ ಕಾರ್ಯಾಚರಣೆ ನೋಯ್ಡಾದಲ್ಲಿ ಮಾಜಿ ಐಪಿಎಸ್ ಅಧಿಕಾರಿ ಕಚೇರಿ ವರೆಗೆ ಬಂದು ನಿಂತಿದೆ. ವಾರದ ಹಿಂದೆ ಕನೌಜ್ ನಲ್ಲಿ ದಾಳಿ ನಡೆಸಿದ್ದ ಅಧಿಕಾರಿಗಳು ಅಲ್ಲಿನ ಜುವೆಲ್ಲರಿ ಮಾಲಕರು, ಸುಗಂಧ ದ್ರವ್ಯ ತಯಾರಕ ಕಂಪನಿಗಳ ಮಾಲೀಕರ ಮನೆಯಲ್ಲಿ ನಡುಕ ಹುಟ್ಟಿಸಿದ್ದರು.
ಇದೀಗ 1983ರ ಬ್ಯಾಚ್ ಐಪಿಎಸ್ ಅಧಿಕಾರಿ ರಾಮನಾರಾಯಣ್ ಸಿಂಗ್ ಗೆ ಸೇರಿದ ಕಚೇರಿಯ ನೆಲ ಅಂತಸ್ತಿನಲ್ಲಿ ದಾಳಿ ನಡೆಸಿರುವ ಅಧಿಕಾರಿಗಳು 700ಕ್ಕೂ ಹೆಚ್ಚು ಲಾಕರ್ ಗಳನ್ನು ಪತ್ತೆ ಮಾಡಿದ್ದಾರೆ. ಅದರಲ್ಲಿ ಭಾರೀ ಪ್ರಮಾಣದ ಹಳೆ ನೋಟು ಸೇರಿದಂತೆ ಕೋಟ್ಯಂತರ ನಗದು ರಾಶಿ ಪತ್ತೆಯಾಗಿದೆ. ನಾಲ್ಕು ಮೆಷಿನ್ ತಂದಿಟ್ಟು ನೋಟು ಎಣಿಕೆ ನಡೆಯುತ್ತಿದ್ದು, 5.8 ಕೋಟಿ ಮೌಲ್ಯದ ನಗದು ಪತ್ತೆಯಾಗಿದೆ ಎಂಬ ಮಾಹಿತಿಯಿದೆ.
ಮಾನಸಂ ನೋಯ್ಡಾ ವಾಲ್ಟ್ ಹೆಸರಿನಲ್ಲಿ ಕಚೇರಿಯಿದ್ದು, ಅದನ್ನು ಆರ್.ಎನ್. ಸಿಂಗ್ 2027ರಲ್ಲಿ ಪೊಲೀಸ್ ಸೇವೆಯಿಂದ ನಿವೃತ್ತಿಯಾದ ಬಳಿಕ ಆರಂಭಿಸಿದ್ದರು. ಇದಲ್ಲದೆ, ಅಧಿಕಾರಿಯ ಮಗ ಮತ್ತು ಪತ್ನಿಯ ಹೆಸರಲ್ಲಿ ಹಲವು ಲಾಕರ್ ಗಳು ಪತ್ತೆಯಾಗಿವೆ. ಅನಾಮಧೇಯ ಹೆಸರಿನಲ್ಲಿ ಲಾಕರ್ ಗಳಿದ್ದು, 18ರಿಂದ 20 ಲಾಕರ್ ಗಳಲ್ಲಿ ನಗದು ಮತ್ತು ಚಿನ್ನಾಭರಣಗಳು ಪತ್ತೆಯಾಗಿವೆ. 2017ರಲ್ಲಿ ಆರ್.ಎನ್. ಸಿಂಗ್ ನಿವೃತ್ತಿಯಾಗಿದ್ದು, ಅದೇ ಸಂದರ್ಭದಲ್ಲಿ ಪತ್ನಿ ಹೆಸರಲ್ಲಿ ಕಚೇರಿ ತೆರೆಯಲಾಗಿತ್ತು. ಮಗನ ಹೆಸರಲ್ಲಿದ್ದ ಲಾಕರಿನಲ್ಲಿ ಅನಧಿಕೃತ ನಗದು ಪತ್ತೆಯಾಗಿದ್ದು, ಆತನಿಗೂ ರಾಜಕೀಯ ಪಕ್ಷದ ನಾಯಕರಿಗೂ ಸಂಪರ್ಕ ಇದೆಯಾ ಎನ್ನುವ ಬಗ್ಗೆ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.
ನವಭಾರತ್ ಟೈಮ್ಸ್ ವರದಿ ಪ್ರಕಾರ, ನಗದು ಪತ್ತೆಯಾದ ಹತ್ತು ಲಾಕರ್ ಗಳು ಯಾರದ್ದೆಂದು ತಿಳಿದಿಲ್ಲ. ಸೋಮವಾರ, ಮಂಗಳವಾರ ಎರಡು ದಿನ ಪರ್ಯಂತ ನೋಟು ಎಣಿಕೆ ಮಾಡಲಾಗಿದ್ದು, ಮೂರು ಯಂತ್ರಗಳಲ್ಲಿ ನಿರಂತರ ಕೆಲಸ ಮಾಡಿದ್ದರಿಂದ ಮೆಷಿನ್ ಹ್ಯಾಂಗ್ ಆಗಿತ್ತಂತೆ. ಐಟಿ ದಾಳಿ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಪೊಲೀಸ್ ಅಧಿಕಾರಿ ಆರ್.ಎನ್. ಸಿಂಗ್, ನಿವೃತ್ತಿಯ ಬಳಿಕ ಸ್ವಗ್ರಾಮಕ್ಕೆ ತೆರಳಿ ಉಳಿದುಕೊಂಡಿದ್ದೇನೆ. ನೋಯ್ಡಾದಲ್ಲಿ ಸಂಸ್ಥೆ ಆರಂಭಿಸಿದ್ದು ಅಲ್ಲಿ ಖಾಸಗಿ ಲಾಕರ್ ಸೌಲಭ್ಯ ನೀಡಲಾಗಿತ್ತು. ಅದರಲ್ಲಿ ಎರಡು ಲಾಕರ್ ನನ್ನ ಹೆಸರಲ್ಲಿತ್ತು. ಕುಟುಂಬದ ಚಿನ್ನಾಭರಣ ಬಿಟ್ಟರೆ ಅದರಲ್ಲಿ ಬೇರೇನೂ ಇರಲಿಲ್ಲ. ನಗದು ಪತ್ತೆಯಾಗಿರುವ ಬಗ್ಗೆ ತಿಳಿದಿಲ್ಲ ಎಂದು ಹೇಳಿದ್ದಾರೆ.
ಉತ್ತರ ಪ್ರದೇಶ ಚುನಾವಣೆಯಲ್ಲಿ ಕಪ್ಪು ಹಣ ವಿತರಣೆಯಾಗುವ ಮಾಹಿತಿ ಹಿನ್ನೆಲೆಯಲ್ಲಿ ಐಟಿ ಅಧಿಕಾರಿಗಳು ವಿವಿಧೆಡೆ ದಾಳಿ ನಡೆಸಿದ್ದರು. ಮೊದಲಿಗೆ ಕನೌಜ್ ಜಿಲ್ಲೆಯ ಎಸ್ಪಿ ಎಂಎಲ್ಸಿ ಪಿಯೂಷ್ ಜೈನ್ ಮತ್ತು ಪರ್ಫ್ಯೂಮ್ ತಯಾರಕ ಪುಷ್ಪರಾಜ್ ಜೈನ್ ಮನೆಯ ಮೇಲೆ ದಾಳಿ ನಡೆದಿತ್ತು.
The income tax department’s raids that began from perfume traders in Uttar Pradesh’s Kannauj has now reached Noida. This time shockingly it does not involve a businessman but a 1983 batch IPS officer of UP cadre. Officials have found Rs 5.8 crore cash kept in several private lockers, which they say, are likely to be unaccounted for.
04-05-25 02:27 pm
Bangalore Correspondent
Suhas Shetty Murder, Parameshwar: ಸುಹಾಸ್ ಶೆಟ್...
04-05-25 01:18 pm
Karkala Mla Sunil Kumar, Parameshwar: ಆ್ಯಂಟಿ...
03-05-25 09:38 pm
Shivanand Patil, U T Khader: ಯತ್ನಾಳ್ ಸವಾಲು ಸ್...
02-05-25 10:00 pm
U T Khader, Suhas Shetty Murder, Fazil, Manga...
02-05-25 08:44 pm
30-04-25 06:59 pm
HK News Desk
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
03-05-25 10:57 pm
Mangalore Correspondent
ಬಜರಂಗಿ ಸುಹಾಸ್ ಶೆಟ್ಟಿ ಹತ್ಯೆಗೆ ಕಳಸದವರು ಬಂದಿದ್ದೇ...
03-05-25 10:43 pm
U T Khader, Satish Kumapla, Mangalore, Suhas,...
03-05-25 10:13 pm
Mangalore, Stabbing, Suhas Shetty Murder, Arr...
03-05-25 08:39 pm
Mangalore, Animal Welfare: ಪ್ರಾಣಿ ಸಂರಕ್ಷಣೆ ಜಾ...
03-05-25 06:57 pm
03-05-25 02:16 pm
Mangalore Correspondent
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm