ಬ್ರೇಕಿಂಗ್ ನ್ಯೂಸ್
15-02-22 12:38 pm HK Desk news ದೇಶ - ವಿದೇಶ
ಕೊಚ್ಚಿ , ಫೆ.15 : ಕೊರೊನಾ ಲಾಕ್ಡೌನ್ ಸಂಕಷ್ಟದಿಂದ ತೀವ್ರ ನಷ್ಟಕ್ಕೆ ತುತ್ತಾದ ಬಸ್ ಮಾಲೀಕರೊಬ್ಬರು ಕೇಜಿಗೆ 45 ರೂ.ನಂತೆ ತಮ್ಮ ಬಸ್ ಗಳನ್ನು ಗುಜರಿ ಬೆಲೆಗೆ ಮಾರಾಟಕ್ಕಿಟ್ಟಿದ್ದಾರೆ.
ಎರಡು ವರ್ಷಗಳ ಸತತ ಲಾಕ್ಡೌನ್ ಕಾರಣದಿಂದ ಬೇಸತ್ತ ಮಾಲೀಕ ತನ್ನಲ್ಲಿರುವ ವಾಹನಗಳನ್ನು ಗುಜರಿ ದರಕ್ಕೆ ಮಾರಾಟ ಮಾಡಲು ಮುಂದಾಗಿದ್ದಾರೆ. ಕೊಚ್ಚಿಯಲ್ಲಿ ರಾಯಲ್ ಟ್ರಾವೆಲ್ಸ್ ಹೆಸರಿನಲ್ಲಿ ಟೂರಿಸ್ಟ್ ವಾಹನಗಳನ್ನು ನಡೆಸುತ್ತಿರುವ ರಾಯ್ಸನ್ ಜೋಸೆಫ್ ಈ ರೀತಿಯ ನಿರ್ಧಾರಕ್ಕೆ ಬಂದವರು. ಈಗ ಉಳಿದಿರುವ ಹತ್ತು ಬಸ್ ಗಳ ಪೈಕಿ ಮೂರನ್ನು ಸದ್ಯಕ್ಕೆ ಕೇಜಿ ರೂ. 45 ರಂತೆ ಮಾರಾಟಕ್ಕೆ ಇಟ್ಟಿದ್ದಾರೆ.

ಕೊರೊನಾ ವೈರಸ್ ಸೋಂಕಿನಿಂದಾಗಿ ಟ್ರಾವೆಲ್ ಏಜನ್ಸಿಗೆ ತುಂಬ ನಷ್ಟವಾಗಿದೆ. ಈಗ ಸ್ವಲ್ಪ ಮಟ್ಟಿಗೆ ಸುಧಾರಣೆ ಆದರೂ, ಜನರು ಬಾಡಿಗೆ ವಾಹನಗಳತ್ತ ಬರುವುದಿಲ್ಲ. ಹೆಚ್ಚಿನವರು ಸ್ವಂತ ವಾಹನಗಳಲ್ಲಿ ತೆರಳುತ್ತಿದ್ದಾರೆ. ಬಸ್ ಗಳಿಗಂತೂ ಜನರೇ ಇಲ್ಲವಾಗಿದೆ ಎಂದು ರಾಯ್ಸನ್ ಹೇಳುತ್ತಾರೆ. ಈ ಟೂರಿಸ್ಟ್ ಬಿಸಿನೆಸ್ ಮುಂದುವರಿಸಲು ಸಾಧ್ಯವಿಲ್ಲ. ಈಗಾಗಲೇ ಇಪ್ಪತ್ತು ಬಸ್ ಗಳಲ್ಲಿ ಹತ್ತನ್ನು ಮಾರಿದ್ದೇನೆ. ಉಳಿದಿರುವ ಬಸ್ ಗಳನ್ನು ಕೂಡ ಗುಜರಿ ರೇಟಿಗೆ ಮಾರಾಟಕ್ಕೆ ಮುಂದಾಗಿದ್ದೇನೆ. ನನ್ನ ಕುಟುಂಬ ಬದುಕಲು ಇದರ ಹೊರತು ಬೇರೆ ಗತಿಯಿಲ್ಲ. ನಮ್ಮ ನೌಕರರು ಕೂಡ ಸಂಕಷ್ಟದಲ್ಲಿದ್ದಾರೆ ಎಂದು ರಾಯ್ಸನ್ ತನ್ನ ಕಷ್ಟ ಹೇಳಿಕೊಂಡಿದ್ದಾರೆ.


ಲಾಕ್ಡೌನ್ ಇದ್ದಾಗ ಬುಕ್ ಆಗಿದ್ದ ಟೂರನ್ನು ನಡೆಸಬಹುದೇ ಎನ್ನುವ ಬಗ್ಗೆಯೂ ಕ್ಲಾರಿಟಿ ಇಲ್ಲ. ಇತ್ತೀಚೆಗೆ ಕೋವಳಂ ಟೂರಿಗೆ ಹೊರಟಿದ್ದ ಬಸ್ಸನ್ನು ಕೊನೆ ಕ್ಷಣದಲ್ಲಿ ರದ್ದು ಮಾಡಲಾಗಿತ್ತು. ಪೊಲೀಸರು ನಮ್ಮ ಬಸ್ ಮೇಲೆ ನಾಲ್ಕು ಸಾವಿರ ದಂಡ ಹಾಕಿದ್ದರು. ಇದರ ಹೊರತಾಗಿ ವರ್ಷಕ್ಕೆ ಹತ್ತು ಹಲವು ತೆರಿಗೆಯನ್ನು ಪಾವತಿ ಮಾಡಬೇಕು. ಪ್ರತೀ ಬಸ್ ಮೇಲೆ ವರ್ಷಕ್ಕೆ 40 ಸಾವಿರ ರೋಡ್ ಟ್ಯಾಕ್ಸ್ ಕಟ್ಟಬೇಕು. ಇದೆಲ್ಲವನ್ನೂ ಮಾಡಿಕೊಂಡು ಬಿಸಿನೆಸ್ ಇಲ್ಲದೆ ಬಸ್ ನಡೆಸುವುದು ಹೇಗೆ ಎಂದು ಕೇಳುತ್ತಾರೆ ರಾಯ್ಸನ್.
Because of the Covid-19 pandemic, many businesses have run into a loss. A similar event took place with a Luxury bus owner in Kochi, Kerala Where, a distraught Kochi bus owner made his intentions apparent by planning to sell his remaining ten luxury coaches for Rs 45 per kilo. Things have been tough for Kochi resident Royson Joseph, and before the pandemic, he had 20 buses of various sizes. Now, after two years, he is left with ten buses. The Contract Carriage Owners Association (CCOA) is in severe circumstances after two years of the Covid-19 outbreak. In Kerala, the CCOA has 3,500 members who own around 14,000 buses.
08-04-26 02:09 pm
HK News Staffer
Mallikarjun Kharge: ಆರ್ಎಸ್ಎಸ್ ಮತ್ತು ಬಿಜೆಪಿ...
07-04-26 07:26 pm
ಏಪ್ರಿಲ್ 9ಕ್ಕೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ;...
07-04-26 03:51 pm
ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಶಾಕ್ ; ಬಳ್ಳಾರಿ,...
07-04-26 12:37 pm
ಇನ್ನೆರಡು ವರ್ಷ ಸಿದ್ದರಾಮಯ್ಯ ಅವರೇ ಸಿಎಂ, ಹೈಕಮಾಂಡ್...
06-04-26 08:51 pm
08-04-26 02:39 pm
HK News Staffer
ಅಮೆರಿಕ–ಇರಾನ್ ನಡುವೆ 2 ವಾರಗಳ ಕದನ ವಿರಾಮ ಘೋಷಣೆ; ಟ...
08-04-26 10:36 am
ಇರಾನ್ ಗೆ ಆರ್ಥಿಕ ನೆರವಿಗೆ ಮುಂದಾಗಿದ್ದ ಕಾಶ್ಮೀರಿಗಳ...
07-04-26 10:44 pm
ಇರಾನ್ ನಾಗರಿಕತೆ ಇಂದು ರಾತ್ರಿಯೇ ಅಂತ್ಯವಾಗಲಿದೆ, 47...
07-04-26 09:52 pm
Pakistan News, Fuel Crisis: ಇಂಧನ ಬಿಕ್ಕಟ್ಟು ;...
07-04-26 08:01 pm
07-04-26 01:22 pm
HK News Staffer
ಧರ್ಮಸ್ಥಳ ಬಂಗ್ಲೆಗುಡ್ಡೆ ಕಾಡಿನಲ್ಲಿ ಅಪರಿಚಿತ ಶವ ಪತ...
06-04-26 07:58 pm
ಉಡುಪಿ ; ಬಾವಿಗೆ ಬಿದ್ದು ಮೂರು ದಿನ ನರಳಾಡಿತ್ತು ವೃದ...
06-04-26 07:43 pm
ಕೇರಳಕ್ಕೆ ಅಕ್ರಮ ಜಾನುವಾರು ಸಾಗಣೆ; ಕಡಬದಲ್ಲಿ ಪೊಲೀಸ...
03-04-26 11:43 am
ಧರ್ಮಸ್ಥಳ ಎಐ ವಿಡಿಯೋ ಪ್ರಕರಣ; ಯೂಟ್ಯೂಬರ್ ಎಂ.ಡಿ....
02-04-26 02:43 pm
08-04-26 05:53 pm
HK News Staffer
Gurupura Accident, Mangalore: ಮೂಡುಬಿದ್ರೆ ಎಕ್ಸ...
08-04-26 04:29 pm
Mangalore Crime, Bunder Murder: ಮೀನುಗಾರಿಕೆ ದಕ...
08-04-26 01:06 pm
Manoj Kodikere, Chetan Padil: ಕುಂದಾಪುರಕ್ಕೆ ಅಪ...
07-04-26 10:15 pm
Arif Murder Case, Mangalore: ಟ್ಯಾಬ್ಲೆಟ್ ಆರೀಫ್...
07-04-26 06:18 pm