ರಷ್ಯಾ ಬಾಂಬ್ ದಾಳಿ ; ಕಾರ್ಕೀವ್ ನಗರದಲ್ಲಿದ್ದ ಹಾವೇರಿ ಮೂಲದ ವಿದ್ಯಾರ್ಥಿ ದುರಂತ ಸಾವು ! 

01-03-22 04:02 pm       HK Desk news   ದೇಶ - ವಿದೇಶ

ಉಕ್ರೇನ್ ಹಾಗೂ ರಷ್ಯಾ ನಡುವಿನ ಸಂಘರ್ಷದಲ್ಲಿ ಕರ್ನಾಟಕ ಮೂಲದ ವಿದ್ಯಾರ್ಥಿ ಸಾವನ್ನಪ್ಪಿದ ಘಟನೆ ನಡೆದಿದೆ.

ನವದೆಹಲಿ, ಮಾ.1: ಉಕ್ರೇನ್ ಹಾಗೂ ರಷ್ಯಾ ನಡುವಿನ ಸಂಘರ್ಷದಲ್ಲಿ ಕರ್ನಾಟಕ ಮೂಲದ ವಿದ್ಯಾರ್ಥಿ ಸಾವನ್ನಪ್ಪಿದ ಘಟನೆ ನಡೆದಿದೆ.

ಹಾವೇರಿ ಜಿಲ್ಲೆಯ ರಾಣೆಬೇನ್ನೂರು ತಾಲೂಕಿನ ಚಳಗೇರಿ ಗ್ರಾಮದ ನವೀನ್ ಮೃತಪಟ್ಟಿದ್ದಾರೆ ಎಂದು ಉಕ್ರೇನ್‍ನಲ್ಲಿರುವ ಕನ್ನಡಿಗ ವಿದ್ಯಾರ್ಥಿಗಳು ತಿಳಿಸಿದ್ದಾರೆ.
ಕಾರ್ಕಿವ್‍ ನಗರದಲ್ಲಿ ನಾಲ್ಕನೇ ವರ್ಷದ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದ ನವೀನ್ ಗ್ಯಾನಗೌಡ್ರು ಅಗತ್ಯ ವಸ್ತುಗಳನ್ನು ತರಲೆಂದು ಹೊರಗೆ ಹೋಗಿದ್ದರು. ತರಕಾರಿಗಾಗಿ ಲೈನಿನಲ್ಲಿ ನಿಂತಿದ್ದ ವೇಳೆ ಷೆಲ್ ದಾಳಿ ನಡೆದಿದ್ದು ಸ್ಥಳದಲ್ಲಿದ್ದ ನವೀನ್ ಮೃತಪಟ್ಟಿದ್ದಾರೆ.‌

ಈ ಬಗ್ಗೆ ವಿದೇಶಾಂಗ ಇಲಾಖೆಯ ಅಧಿಕಾರಿಗಳು ಖಚಿತಪಡಿಸಿಲ್ಲ. ಆದರೆ ಸಾವಿನ ಬಗ್ಗೆ ಸಿಎಂ ಬೊಮ್ಮಾಯಿ ದೃಢಪಡಿಸಿದ್ದು ನವೀನ್ ಕುಟುಂಬದ ಜೊತೆಗೆ ಮಾತನಾಡಿದ್ದಾರೆ. ನವೀನ್ ತಂದೆ ಶೇಖರ ಗೌಡ ಜೊತೆಗೆ ಫೋನ್ ಮಾಡಿ ಸಾಂತ್ವನ ಹೇಳಿದ್ದಾರೆ. 

ನವೀನ್ ಸಾವಿನ ಬಗ್ಗೆ ಕರ್ನಾಟಕದ ನೋಡಲ್ ಅಧಿಕಾರಿ ಮನೋಜ್ ಹೇಳಿಕೆ ನೀಡಿದ್ದು ಹೇಗೆ ಸಾವು ಆಗಿದೆ ಎನ್ನುವುದು ಗೊತ್ತಾಗಿಲ್ಲ ಎಂದಿದ್ದಾರೆ. ನವೀನ್ ಸಾವಿನೊಂದಿಗೆ ಕನ್ನಡಿಗ ವಿದ್ಯಾರ್ಥಿಗಳ ಬಗ್ಗೆ ಆತಂಕ ಹೆಚ್ಚಿದೆ. ಹಾವೇರಿ ಜಿಲ್ಲೆಯ 20 ಕ್ಕು ಹೆಚ್ಚು ಮಂದಿ ಉಕ್ರೇನ್ ದೇಶದಲ್ಲಿದ್ದಾರೆ.

One Indian student was killed in the war in Ukraine . Identified as Naveen from Karnataka, his friends said they had left for the train station to leave for Lviv, in order to reach the western border. MEA spokesperson Arindam Bagchi confirmed the killing, and tweeted, “With profound sorrow we confirm that an Indian student lost his life in shelling in Kharkiv this morning. The Ministry is in touch with his family.We convey our deepest condolences to the family.