ಬ್ರೇಕಿಂಗ್ ನ್ಯೂಸ್
03-03-22 07:42 pm HK Desk news ದೇಶ - ವಿದೇಶ
ನವದೆಹಲಿ, ಮಾ.3:ಯುದ್ಧಪೀಡಿತ ಉಕ್ರೇನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳನ್ನು ತುರ್ತಾಗಿ ರಕ್ಷಣೆ ಮಾಡಲು ಭಾರತ ಸರಕಾರಕ್ಕೆ ಸೂಚನೆ ನೀಡಬೇಕೆಂಬ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ಎನ್.ವಿ.ರಮಣ, ನಾವು ರಷ್ಯಾವನ್ನು ಯುದ್ಧ ನಿಲ್ಲಿಸಿ ಅಂತ ಹೇಳೋಕೆ ಆಗುತ್ತಾ ಎಂದು ವ್ಯಂಗ್ಯವಾಗಿ ಪ್ರಶ್ನೆ ಮಾಡಿದ್ದಾರೆ.
ಈ ವಿಚಾರದ ಬಗ್ಗೆ ನಾವು ಏನು ಮಾಡೊಕ್ಕಾಗುತ್ತದೆ. ನಾಳೆ, ನೀವು ರಷ್ಯಾ ಅಧ್ಯಕ್ಷ ಪುತಿನ್ ಮೇಲೆ ಆದೇಶ ನೀಡುವಂತೆ ಕೇಳಿಕೊಳ್ಳಬಹುದು. ನಾವು ರಷ್ಯಾವನ್ನು ಯುದ್ಧ ನಿಲ್ಲಿಸುವಂತೆ ಹೇಳೋಕೆ ಆಗತ್ತಾ.. ನಾವು ಅಲ್ಲಿ ಸಿಕ್ಕಿಬಿದ್ದಿರುವ ವಿದ್ಯಾರ್ಥಿಗಳು ಮತ್ತು ಇನ್ನಿತರ ಜನರ ಬಗ್ಗೆ ಕರುಣೆ ಹೊಂದಿದ್ದೇವೆ. ಅವರನ್ನು ರಕ್ಷಣೆ ಮಾಡುವ ಕೆಲಸವನ್ನು ಭಾರತ ಸರಕಾರ ಮಾಡುತ್ತಿದೆ ಎಂದು ಮುಖ್ಯ ನ್ಯಾಯಾಧೀಶರು ಪ್ರತಿಕ್ರಿಯೆ ನೀಡಿದ್ದಾರೆ.
ಉಕ್ರೇನಿನ ಮಾಲ್ದೋವಾ ನಗರ ಮತ್ತು ರೊಮೇನಿಯಾ ಗಡಿಯಲ್ಲಿ ಸಿಕ್ಕಿಬಿದ್ದಿರುವ 24 ವರ್ಷದ ಫಾತಿಮಾ ಅಹನಾ ಎಂಬ ಹುಡುಗಿಯ ಪೋಷಕರು ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ಮಾಲ್ದೋವಾ ನಗರದ ಒಡೆಸ್ಸಾ ಯುನಿವರ್ಸಿಟಿಯಲ್ಲಿ ವ್ಯಾಸಂಗ ಮಾಡುತ್ತಿದ್ದ 250 ಭಾರತೀಯ ವಿದ್ಯಾರ್ಥಿಗಳು ರೊಮೇನಿಯಾ ಗಡಿಯಲ್ಲಿ ಸಿಕ್ಕಿಬಿದ್ದಿದ್ದಾರೆ. ಆರು ದಿನಗಳಿಂದ ಅಲ್ಲಿ ಸಿಲುಕಿರುವ ಅವರಿಗೆ ರೊಮೇನಿಯಾ ಪ್ರವೇಶಕ್ಕೆ ಅನುಮತಿ ಸಿಕ್ಕಿರಲಿಲ್ಲ. ಅವರಿಗೆ ರೊಮೇನಿಯಾ ಮೂಲಕ ಭಾರತಕ್ಕೆ ಬರಲು ಸಾಧ್ಯವಾಗುವಂತೆ ಅನುಮತಿ ದೊರಕಿಸಬೇಕೆಂದು ಅರ್ಜಿಯಲ್ಲಿ ಕೇಳಿಕೊಳ್ಳಲಾಗಿತ್ತು.
ಈ ಬಗ್ಗೆ ಭಾರತದ ರಾಯಭಾರ ಕಚೇರಿಯಿಂದ ಸ್ಪಂದನೆ ಸಿಕ್ಕಿರಲಿಲ್ಲ. ಹೀಗಾಗಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಭಾರತ ಸರಕಾರಕ್ಕೆ ನಿರ್ದೇಶನ ನೀಡಬೇಕೆಂದು ಅರ್ಜಿಯಲ್ಲಿ ಹೇಳಲಾಗಿತ್ತು. ತುರ್ತಾಗಿ ಪರಿಗಣಿಸಿ ವಿಚಾರಣೆ ಮಾಡಬೇಕೆಂದು ಮುಖ್ಯ ನ್ಯಾಯಾಧೀಶರಿಗೆ ಅರ್ಜಿ ಸಲ್ಲಿಸಲಾಗಿತ್ತು. ಗುರುವಾರ ಬೆಳಗ್ಗೆ ಅರ್ಜಿಯನ್ನು ಪರಿಗಣಿಸಿದ ನ್ಯಾಯಾಧೀಶರು, ಈ ವಿಚಾರದಲ್ಲಿ ಕೋರ್ಟ್ ಮಧ್ಯಪ್ರವೇಶ ಮಾಡಲು ಬರುತ್ತಾ.. ನಾವು ರಷ್ಯಾ ಅಧ್ಯಕ್ಷ ಪುತಿನ್ ಮೇಲೆ ಏನಾದರೂ ಆರ್ಡರ್ ಮಾಡೋಕೆ ಆಗುತ್ತಾ ಎಂದು ವಕೀಲರನ್ನು ಕೇಳಿದರು. ಕೊನೆಗೆ, ಈ ವಿಚಾರದ ಬಗ್ಗೆ ಭಾರತ ಸರಕಾರ ಅಟಾರ್ನಿ ಜನರಲ್ ಅವರ ಅಭಿಪ್ರಾಯ ಕೇಳಿದರು.
ಎಜಿ ಕೆ.ಕೆ. ವೇಣುಗೋಪಾಲ್ ಪ್ರತಿಕ್ರಿಯಿಸಿ, ಈಗಾಗಲೇ ಭಾರತ ಸರಕಾರದ ಕಡೆಯಿಂದ ನಾಲ್ಕು ಸಚಿವರ ನೇತೃತ್ವದಲ್ಲಿ ತಂಡವನ್ನು ಕಳಿಸಿಕೊಡಲಾಗಿದೆ. ಸದ್ರಿ ಪ್ರಕರಣದಲ್ಲಿ ಅಲ್ಲಿನ ಗಡಿಯಲ್ಲಿ ವಿದ್ಯಾರ್ಥಿಗಳು ಯಾಕೆ ಸ್ಥಗಿತ ಆಗಿದ್ದಾರೆ ಎನ್ನುವುದು ಗೊತ್ತಿಲ್ಲ. ಎಲ್ಲ ಕಡೆಯಿಂದ ರಕ್ಷಣಾ ಕಾರ್ಯಾಚರಣೆ ಮಾಡಲಾಗುತ್ತಿದೆ ಎಂದು ಹೇಳಿದರು. ಅಲ್ಲಿ ಸಿಕ್ಕಿಬಿದ್ದಿರುವ ವಿದ್ಯಾರ್ಥಿಗಳ ರಕ್ಷಣೆಗಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿ, ರಕ್ಷಣಾ ಕಾರ್ಯ ನಡೆಸುವಂತೆ ಕೋರ್ಟ್ ಅಟಾರ್ನಿ ಜನರಲ್ ಅವರಿಗೆ ಸೂಚನೆ ನೀಡಿದೆ
Can we ask [Russian President Vladimir] Putin to stop the war?," asked Chief Justice of India NV Ramana while hearing a plea seeking direction to the government to provide relief to Indian students stranded in war-hit Ukraine.
24-02-26 08:06 pm
HK News Staffer
ಮಲಯಾಳಿಗಳ ಬಹುಕಾಲದ ಬೇಡಿಕೆಗೆ ಕೊನೆಗೂ ಅಸ್ತು ಎಂದ ಕೇ...
24-02-26 07:54 pm
ಬೆಂಗಳೂರಿನ ತರಕಾರಿಗಳಲ್ಲಿ ಅತಿ ಹೆಚ್ಚು ರಾಸಾಯನಿಕ ಪತ...
24-02-26 03:51 pm
ನಾಯಕತ್ವ ಬದಲಾವಣೆ- ಸಂಪುಟ ಪುನಾರಚನೆಗೆ ಒತ್ತಾಯಿಸಿ 3...
23-02-26 05:15 pm
ಮಕ್ಕಳು ತಮ್ಮನ್ನು ನೋಡಿಕೊಳ್ತಿಲ್ಲ ಎಂಬ ನೋವು ; ಕೊಡಗ...
23-02-26 12:35 pm
24-02-26 01:21 pm
HK News Desk
ನೀವು ಮೋದಿಯನ್ನು ನಿಂದಿಸುತ್ತೀರಿ, ಕಂಬಳಿ ಪಡೆಯಲು ಹಕ...
23-02-26 06:57 pm
ಕಠ್ಮಂಡು ಬಳಿ ಭೀಕರ ಬಸ್ ದುರಂತ ; ತ್ರಿಶೂಲಿ ನದಿಗೆ ಬ...
23-02-26 04:45 pm
ದೇಶದಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು ; ತಮಿಳುನಾಡು,...
22-02-26 06:19 pm
ಲವ್ ಜಿಹಾದ್’ ತಡೆಗೆ ಗುಜರಾತ್ ನಲ್ಲಿ ವಿವಾಹ ನೋಂದಣಿ...
21-02-26 05:01 pm
24-02-26 10:39 pm
HK News Staffer
Mangalore Ullal, Ratnagiri Accident: ಮಹಾರಾಷ್ಟ...
24-02-26 09:50 pm
Vitla News, Mangalore: ವಿಟ್ಲ ಬಳಿಯ ಗುರುಕುಲ ವಿದ...
23-02-26 08:20 pm
Mangalore, Belthangady: ಆಂಬುಲೆನ್ಸ್ ನಲ್ಲೇ ಮಗುವ...
23-02-26 12:19 pm
Mangalore, Thokottu: ವಿದ್ಯುತ್ ಆಘಾತಕ್ಕೊಳಗಾಗಿ ಯ...
23-02-26 12:00 pm
24-02-26 10:07 pm
Mangaluru Staffer
ಕ್ರಿಕೆಟ್ ಆಟದ ದ್ವೇಷದಲ್ಲಿ ಸಹಪಾಠಿಗೆ ಹಲ್ಲೆ ; ಎಸ್ಸ...
24-02-26 06:01 pm
ನೀಟ್ ಪರೀಕ್ಷೆಗೆ ಒತ್ತಡ ಹೇರಿದ್ದಕ್ಕೆ ತಂದೆಯನ್ನೇ ಕೊ...
24-02-26 01:50 pm
ಶಿವಮೊಗ್ಗದಲ್ಲಿ SSLC ವಿದ್ಯಾರ್ಥಿಯ ಮರ್ಡರ್ ; ಗಾಂಜ...
24-02-26 01:34 pm
ಐಡಿಎಫ್ಸಿ ಫಸ್ಟ್ ಬ್ಯಾಂಕಿನಲ್ಲಿ 590 ಕೋಟಿ ಹಗರಣ ;...
23-02-26 10:44 pm