ಬ್ರೇಕಿಂಗ್ ನ್ಯೂಸ್
04-03-22 09:49 pm HK Desk news ದೇಶ - ವಿದೇಶ
ನವದೆಹಲಿ, ಮಾ.4:ಯುದ್ಧ ಪೀಡಿತ ಯುಕ್ರೇನ್ ದೇಶದಿಂದ 20 ಸಾವಿರಕ್ಕೂ ಹೆಚ್ಚು ಭಾರತೀಯರು ಹೊರ ಬಂದಿದ್ದು, ಅಲ್ಲಿನ ಗಡಿದಾಟಿ ಹೊರಬಂದಿದ್ದಾರೆ. ಅವರನ್ನು ಪೂರ್ತಿಯಾಗಿ ಭಾರತಕ್ಕೆ ಸ್ಥಳಾಂತರ ಮಾಡಲಾಗುವುದು. ಮುಂದಿನ 24 ಗಂಟೆಗಳಲ್ಲಿ 16 ವಿಮಾನಗಳು ಭಾರತೀಯರನ್ನು ಹೊತ್ತು ತರಲು ತಯಾರಾಗಿವೆ ಎಂದು ವಿದೇಶಾಂಗ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಎರಡು ದಿನಗಳ ಹಿಂದೆ ಭಾರತದ ರಾಯಭಾರ ಕಚೇರಿ ಮೂಲಕ ಯುಕ್ರೇನಲ್ಲಿ ಸಿಕ್ಕಿಬಿದ್ದಿರುವ ಎಲ್ಲ ಭಾರತೀಯರು ತಾವಿರುವಲ್ಲಿಂದ ಹೊರಬರಬೇಕು. ಸಮೀಪದ ಸೂಚಿತ ಪ್ರದೇಶಗಳಿಗೆ ನಡೆದುಕೊಂಡಾದರೂ ಬರಬೇಕು ಎಂದು ಸೂಚನೆ ನೀಡಲಾಗಿತ್ತು. ಅದರಂತೆ, ಕೀವ್ ಮತ್ತು ಖಾರ್ಕೀವ್ ನಗರದಲ್ಲಿ ಬಂಕರಿನಡಿ ಅವಿತುಕೊಂಡಿದ್ದ ಸಾವಿರಾರು ಮಂದಿ ಅಲ್ಲಿಂದ ಹೊರಬಂದು ನಡೆದುಕೊಂಡೇ ಸೂಚಿತ ಪ್ರದೇಶಗಳಿಗೆ ಬಂದಿದ್ದರು. ಅವರನ್ನು ರೈಲು, ಬಸ್ ಮೂಲಕ ಗಡಿ ಪ್ರದೇಶಗಳಿಗೆ ಕರೆತಂದು ಅಲ್ಲಿಂದ ಭಾರತಕ್ಕೆ ಸ್ಥಳಾಂತರಿಸಲು ಯೋಜನೆ ಹಾಕಲಾಗಿತ್ತು.
ಈ ನಡುವೆ, ಕೀವ್ ನಗರದಿಂದ ಹೊರಬರುತ್ತಿರುವ ಭಾರತೀಯರಿಗೆ ಯಾವುದೇ ಅಪಾಯ ಎದುರಾದರೂ, ಸ್ಥಳೀಯ ಗಡಿಗಳಲ್ಲಿರುವ ಗಾರ್ಡ್ ಗಳಿಗೆ ತಿಳಿಸುವಂತೆ ಇಂಡಿಯನ್ ಎಂಬಸ್ಸಿ ಕೋರಿದೆ. ಅಲ್ಲಿ ನಿಮ್ಮ ನೆರವಿಗೆ ಅಂಬುಲೆನ್ಸ್ ರೆಡಿ ಇದೆ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಇದೇ ವೇಳೆ, ಕೀವ್ ನಗರದಿಂದ ಪಾರಾಗಿ ಬರುತ್ತಿರುವ ಕೇರಳ ಮೂಲದ ನವ ದಂಪತಿ ಭಾರತ ಸರಕಾರದ ಆಪರೇಶನ್ ಗಂಗಾ ಕಾರ್ಯಾಚರಣೆಗೆ ಕೃತಜ್ಞತೆ ಹೇಳಿದ್ದಾರೆ. ಅಲ್ಲದೆ, ತಮ್ಮನ್ನು ಪಾರು ಮಾಡಿದ್ದಕ್ಕೆ ಕೃತಜ್ಞತೆ ಸೂಚಿಸುವುದಕ್ಕಾಗಿ ತಮ್ಮ ಹುಟ್ಟಬೇಕಾದ ಮಗುವಿಗೆ ಗಂಗಾ ಹೆಸರನ್ನೇ ಇಡುವುದಾಗಿ ತಿಳಿಸಿದ್ದಾರೆ.
ಇದೇ ವೇಳೆ, ಭಾರತದ ತೆರವು ಕಾರ್ಯಾಚರಣೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆ ವ್ಯಕ್ತವಾಗಿದ್ದು, ಬಾಂಗ್ಲಾದೇಶ ಮತ್ತು ನೇಪಾಳದಿಂದಲೂ ತಮ್ಮ ಜನರನ್ನು ಯುಕ್ರೇನ್ ದೇಶದಿಂದ ಪಾರು ಮಾಡುವಂತೆ ಮನವಿ ಕೇಳಿಬಂದಿದೆ. ಈ ಬಗ್ಗೆ ವಿದೇಶಾಂಗ ಇಲಾಖೆ ವಕ್ತಾರ ಅರಿಂದಮ್ ಬಾಗ್ಚಿ, ಅಲ್ಲಿನ ದೇಶಗಳ ಅಧಿಕಾರಿಗಳು ಮನವಿ ಮಾಡಿರುವುದಾಗಿ ಹೇಳಿದ್ದಾರೆ.
ಯುಕ್ರೇನ್ ಅಣು ಸ್ಥಾವರಕ್ಕೆ ದಾಳಿ
)
ಹಾಗಿದ್ದರೂ, ಯುಕ್ರೇನ್ ಮೇಲೆ ರಷ್ಯಾದ ದಾಳಿ ನಿಂತಿರಲಿಲ್ಲ. ನಿರ್ದಿಷ್ಟ ಪ್ರದೇಶ, ಕಟ್ಟಡಗಳನ್ನು ಗುರಿಯಾಗಿಸಿ ಬಾಂಬ್ ದಾಳಿ ನಡೆಸಲಾಗಿತ್ತು. ಶುಕ್ರವಾರ ಬೆಳಗ್ಗೆ ಯುರೋಪ್ ಖಂಡದಲ್ಲಿಯೇ ಅತಿ ದೊಡ್ಡದು ಎನ್ನಲಾದ ಯುಕ್ರೇನಿನ ಝಿಪೋರಿಜಿಯಾ ನಗರದಲ್ಲಿರುವ ಅಣು ಸ್ಥಾವರಕ್ಕೆ ರಷ್ಯಾ ಮಿಲಿಟರಿ ಬಾಂಬ್ ದಾಳಿ ನಡೆಸಿದೆ. ಇದರಿಂದ ಸ್ಥಳದಲ್ಲಿ ಬೆಂಕಿಯುಂಡೆಗಳು ಎದ್ದಿದ್ದು, ಅಣು ವಿಕಿರಣದಿಂದ ಭಾರೀ ಹಾನಿಯಾಗುವ ಸಾಧ್ಯತೆ ವ್ಯಕ್ತವಾಗಿದೆ. ಘಟನೆಯಲ್ಲಿ ಮೂವರು ಯುಕ್ರೇನ್ ಯೋಧರು ಮೃತಪಟ್ಟಿದ್ದಾರೆ ಎನ್ನಲಾಗುತ್ತಿದ್ದು ಇತರರು ಎಷ್ಟು ಮಂದಿ ಸಾವಿಗೀಡಾಗಿದ್ದಾರೆ ಎನ್ನುವ ಮಾಹಿತಿಯಿಲ್ಲ.
ಮತ್ತೊಂದು ಸಿರಿಯಾ ಮಾಡಲು ಬಿಡಲ್ಲ
ಇದೇ ವೇಳೆ, ಯುಕ್ರೇನ್ ದೇಶದ ವಿದೇಶಾಂಗ ಮಂತ್ರಿ ಡಿಮಿಟ್ರೋ ಕುಲೆಬಾ, ಯುಕ್ರೇನನ್ನು ಮತ್ತೊಂದು ಸಿರಿಯಾ ಮಾಡುವುದಕ್ಕೆ ಬಿಡುವುದಿಲ್ಲ. ನಾವು ಹೋರಾಟ ನಿಲ್ಲಿಸುವುದಿಲ್ಲ. ಹೋರಾಟ ನಡೆಸಿಯೇ ತೀರುತ್ತೇವೆ. ಆದರೆ ನಮಗೆ ತಿರುಗೇಟು ನೀಡಲು ಸಹಕಾರವೂ ಎಲ್ಲ ಕಡೆಯಿಂದ ಬರಬೇಕು. ಅದಕ್ಕಾಗಿ ವಿಶ್ವ ಸಮುದಾಯದಿಂದ ಸಹಾಯವನ್ನು ನಿರೀಕ್ಷೆ ಮಾಡುತ್ತೇವೆ ಎಂದು ಹೇಳಿದ್ದಾರೆ.
India’s Ministry of External Affairs on Friday said over 20,000 Indians have left the Ukraine border since advisories were issued due to Russia’s military aggression against Ukraine, adding 16 flights are scheduled for evacuation of stranded Indian in the next 24 hours.
15-12-25 02:23 pm
Bangalore Correspondent
ಹೊಟೇಲಿನಲ್ಲಿ ಡ್ರಿಂಕ್ಸ್ ಪಾರ್ಟಿ ಮಾಡುತ್ತಿದ್ದಾಗ ಪೊ...
15-12-25 02:20 pm
MLA Shamanur Shivashankarappa Death: ದೇಶದ ಅತಿ...
14-12-25 11:37 pm
Deputy Chief Minister, D.K. Shivakumar: ನೀವು...
14-12-25 03:19 pm
ನೀವು ನಮ್ಮ ಪ್ರತಿನಿಧಿ ಹೊರತು ಯಜಮಾನರಲ್ಲ, ಮಂತ್ರಿಗಳ...
14-12-25 02:37 pm
14-12-25 07:20 pm
HK News Desk
ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆ ; ಯುಡಿಎಫ್ ಅತಿ ಹೆ...
13-12-25 08:34 pm
ಕಾರ್ತಿಗೈ ದೀಪೋತ್ಸವ ವಿವಾದ ; ಮಸೀದಿಯವರೇ ಆಕ್ಷೇಪಿಸಿ...
12-12-25 11:00 pm
ಮೋದಿ ಉತ್ತರಾಧಿಕಾರಿ ಯಾರು ? ಆರೆಸ್ಸೆಸ್ ನಿರ್ಧರಿಸುತ...
11-12-25 04:24 pm
ಮಂಗಳೂರು ಏರ್ಪೋರ್ಟ್ಗೆ ವಿದೇಶಿ ನೇರ ವಿಮಾನ ವ್ಯವಸ್...
11-12-25 02:09 pm
14-12-25 05:48 pm
Mangalore Correspondent
ಕೇಶವನ ಬದುಕು ಬದಲಿಸಿದ ರಕ್ತಬೀಜ ! ಅಸುರೀತನದ ಜೀವನಕ್...
13-12-25 11:02 pm
ಕೆಂಜಾರು ಬಳಿ ಗೋವುಗಳನ್ನು ಕಡಿದು ಹತ್ಯೆ ; ಪೊದೆಯಲ್ಲ...
13-12-25 04:36 pm
ಸತತ ನಾಲ್ಕು ಗಂಟೆ ಸ್ಕೇಟಿಂಗ್ ನಲ್ಲಿ ಶಾಸ್ತ್ರೀಯ ನೃತ...
12-12-25 10:28 pm
ದೈವ ನರ್ತನದ ಬಗ್ಗೆ ನಮಗೆ ಸಂಶಯಗಳಿಲ್ಲ, ಗ್ರಾಮ ದೈವಕ್...
12-12-25 07:32 pm
15-12-25 12:19 pm
Udupi Correspondent
Bangalore crime, Fake Police: ಪೊಲೀಸ್ ಸಮವಸ್ತ್ರ...
15-12-25 11:42 am
ಬೆಂಗಳೂರಿನಿಂದ ಎಂಡಿಎಂಎ ಡ್ರಗ್ಸ್ ಪೂರೈಕೆ ; ಸಾಗಣೆ ವ...
14-12-25 11:10 pm
ಟೀಮ್ ಎಸ್ಡಿಪಿಐ ಹೆಸರಲ್ಲಿ ಹಿಂದುಗಳ ಬಗ್ಗೆ ನಿಂದಿಸಿ...
14-12-25 09:12 pm
Illegal Cattle Transport Case: ಅಕ್ರಮ ಗೋಸಾಗಾಟ...
14-12-25 08:35 pm