ಬ್ರೇಕಿಂಗ್ ನ್ಯೂಸ್
11-03-22 03:15 pm HK Desk news ದೇಶ - ವಿದೇಶ
ಲಕ್ನೋ, ಮಾ.11 : ಉತ್ತರ ಪ್ರದೇಶ ಚುನಾವಣೆಯಲ್ಲಿ ಕೇವಲ ಒಂದು ಸ್ಥಾನ ಗಳಿಸಿರುವ ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ, ಈ ಫಲಿತಾಂಶದಿಂದ ಕಾರ್ಯಕರ್ತರು ಕುಗ್ಗುವುದು ಬೇಡ. ನಾವು ಮುಂದಿನ ದಿನಗಳಲ್ಲಿ ಮತ್ತೆ ತಿರುಗಿ ಬೀಳಲಿದ್ದೇವೆ ಎಂದು ಹೇಳಿದ್ದಾರೆ.
ಉತ್ತರ ಪ್ರದೇಶ ಚುನಾವಣೆ ಫಲಿತಾಂಶದ ಹಿನ್ನೆಲೆಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿರುವ ಮಾಯಾವತಿ, ನಾವು ನಿರೀಕ್ಷೆ ಮಾಡದ ರೀತಿ ಫಲಿತಾಂಶ ಬಂದಿದೆ. ಹಾಗೆಂದು ನಾವು ಇದರಿಂದ ಧೃತಿಗೆಡಬಾರದು. ನಾವು ಈ ಫಲಿತಾಂಶದಿಂದ ಪಾಠ ಕಲಿಯಬೇಕು. ಫಲಿತಾಂಶವನ್ನು ಸವಾಲಾಗಿ ಸ್ವೀಕರಿಸಿ, ಪಕ್ಷ ಸಂಘಟನೆಗೆ ಮತ್ತಷ್ಟು ಪ್ರಯತ್ನ ಪಡಬೇಕು. ಮುಂದೆ ಅಧಿಕಾರಕ್ಕೆ ಬರುವಂತೆ ಕೆಲಸ ಮಾಡಬೇಕು ಎಂದು ಹೇಳಿದ್ದಾರೆ.
ಪಕ್ಷವು ಕಠಿಣ ದಿನಗಳನ್ನು ಎದುರಿಸುತ್ತಿದೆ. ಹಿಂದೆ ಬಿಜೆಪಿ ಕೂಡ ಕಠಿಣ ಪರಿಸ್ಥಿತಿಯಲ್ಲೇ ಇತ್ತು. ಆದರೆ ಹಂತ ಹಂತವಾಗಿ ಮೇಲೆದ್ದು ಬಂದಿದೆ. 2017ರ ಮೊದಲು ಬಿಜೆಪಿಗೂ ಉತ್ತಮ ಸ್ಥಿತಿ ಇರಲಿಲ್ಲ. ಬಿಜೆಪಿಗೆ ಆಗ ಯಾವ ಸ್ಥಿತಿಯಿತ್ತೋ ಅದೇ ಸ್ಥಿತಿ ಈಗ ಕಾಂಗ್ರೆಸಿನದ್ದಾಗಿದೆ. ಉತ್ತರ ಪ್ರದೇಶದ ಫಲಿತಾಂಶ ನಮಗೆಲ್ಲ ಪಾಠ ಆಗಬೇಕು. ಹೇಗೆ ಸವಾಲನ್ನು ಸ್ವೀಕರಿಸಿ ಮುಂದೆ ಬರಬೇಕು ಅನ್ನುವುದನ್ನು ಕಲಿಯಬೇಕು ಎಂದು ಮಾಯಾವತಿ ಸಲಹೆ ಮಾಡಿದ್ದಾರೆ.
ನಮ್ಮ ಬಗ್ಗೆ ವಿರೋಧ ಪಕ್ಷಗಳು ನೆಗೆಟಿವ್ ಕ್ಯಾಂಪೇನ್ ಮಾಡಿದ್ದು ಮುಳುವಾಯ್ತು ಎಂದು ಹೇಳಿದ ಮಾಯಾವತಿ, ಬಿಎಸ್ಪಿ ಎಂದರೆ ಬಿಜೆಪಿಯ ಬೀ ಟೀಮ್ ಎಂದು ಅಪಪ್ರಚಾರ ನಡೆಸಿದರು. ಆದರೆ ಸತ್ಯ ತದ್ವಿರುದ್ಧವಾಗಿತ್ತು. ಬಿಜೆಪಿ ಮತ್ತು ಬಿಎಸ್ಪಿ ನಡುವಿನ ಹೋರಾಟ ಕೇವಲ ರಾಜಕೀಯವಾಗಿ ಮಾತ್ರ ಅಲ್ಲ. ಸೈದ್ಧಾಂತಿಕವಾಗಿ ಅಷ್ಟೇ ಮುಖ್ಯ. ಜನರು ಬಿಎಸ್ಪಿಯನ್ನು ದೂರವಿಡಲು ಬಿಜೆಪಿ ಮತ ಕೊಟ್ಟಿದ್ದಾರೆ. ಬಿಎಸ್ಪಿ ಪಕ್ಷದ ಬಗ್ಗೆ ವಿರೋಧದಿಂದಾಗಿ ಬಿಜೆಪಿಗೆ ಓಟು ಕೊಟ್ಟಿಲ್ಲ. ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರಬೇಕೆಂದು ಮತ ನೀಡಿದ್ದಾರೆ. ಆದರೆ ರಾಜಕಾರಣದಲ್ಲಿ ಸೋಲು- ಗೆಲುವು ಸಹಜ. ಪಕ್ಷದ ನಾಯಕರು ಸಂದರ್ಭಕ್ಕೆ ತಕ್ಕಂತೆ ಒಗ್ಗಿಕೊಂಡು ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವತ್ತ ಕೆಲಸ ಮಾಡಬೇಕಿದೆ ಎಂದು ಮಾಯಾವತಿ ಹೇಳಿದ್ದಾರೆ.
The Bahujan Samaj Party managed to win only one of the 403 assembly seats in Uttar Pradesh. Following the party’s dismal performance in the UP polls, BSP chief Mayawati urged party workers to not feel discouraged and promised a comeback in the future.
15-09-25 08:53 pm
Bangalore Correspondent
Actor Upendra, Wife Priyanka, Cyber Fraud, Ha...
15-09-25 04:45 pm
Pratap Simha, Banu Mushtaq: ಬಾನು ಮುಷ್ತಾಕ್ ದಸರ...
15-09-25 03:39 pm
Bommai, SIT, Dharmasthala, Bommai: ನಿರೀಕ್ಷೆಗೆ...
14-09-25 05:18 pm
ವಾಹನ ಸವಾರರಿಗೆ ಶೇ.50 ರಿಯಾಯಿತಿ ಆಫರ್ ಎಫೆಕ್ಟ್ ...
13-09-25 10:38 pm
16-09-25 02:46 pm
HK News Desk
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
ಮಿಜೋರಾಂ ರಾಜ್ಯದಲ್ಲಿ ಮೊದಲ ರೈಲು ಮಾರ್ಗ ಪ್ರಧಾನಿ ಮೋ...
13-09-25 03:25 pm
15-09-25 08:28 pm
Mangalore Correspondent
Mangalore Accident, Saudi, Ullal: ಸೌದಿ ಅರೇಬಿಯ...
15-09-25 02:08 pm
ಬಂಗ್ಲೆಗುಡ್ಡೆ ಕಾಡಿನಲ್ಲಿ ಸ್ಥಳ ಶೋಧಕ್ಕೆ ಎಸ್ಐಟಿ ಸಿ...
15-09-25 01:58 pm
Mangalore, Ullal News, Boat: ಕೈಕೊಟ್ಟ ಇಂಜಿನ್ ;...
15-09-25 11:27 am
Vittal Gowda, Mangalore, Dharmasthala: ವಿಠಲ ಗ...
14-09-25 10:55 pm
15-09-25 10:47 pm
Bangalore Correspondent
Udupi, Surat Murder, Arrest: ವೃದ್ಧ ದಂಪತಿಯನ್ನು...
14-09-25 06:01 pm
Mangalore Fake Aadhar, RTC Scam, Police: ಆರೋಪ...
13-09-25 11:36 am
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm