ಬ್ರೇಕಿಂಗ್ ನ್ಯೂಸ್
14-03-22 09:23 pm HK Desk news ದೇಶ - ವಿದೇಶ
ನವದೆಹಲಿ, ಮಾ.14: ಕಾಶ್ಮೀರ ಪಂಡಿತರ ಕುಟುಂಬಗಳನ್ನು ಹೀನಾಯವಾಗಿ ಹತ್ಯೆಗೈದು ಚಿತ್ರಹಿಂಸೆ ನೀಡಿ ಪಲಾಯನಗೈಯುವಂತೆ ಮಾಡಿದ್ದ 1990ರ ಕಾಲದ ನೈಜ ಕತೆಯನ್ನು ಆಧರಿಸಿದ ಕಾಶ್ಮೀರ್ ಫೈಲ್ಸ್ ಚಿತ್ರ ದೇಶಾದ್ಯಂತ ತೀವ್ರ ಸದ್ದು ಮಾಡ್ತಿದೆ. ಹಿಂದುಗಳ ಮಾರಣಹೋಮದ ಕತೆಯನ್ನು ಹೊಂದಿರುವುದರಿಂದ ಸಹಜವಾಗಿಯೇ ಹಿಂದು ಸಂಘಟನೆಗಳ ಕಾರ್ಯಕರ್ತರ ಆಕರ್ಷಣೆಗೂ ಕಾರಣವಾಗಿದೆ. 1990ರಲ್ಲಿ ಆಗಿಹೋದ ರಕ್ತಸಿಕ್ತ ಅಧ್ಯಾಯದ ಕತೆಯನ್ನು ಜನರು ಚಿತ್ರದ ಮೂಲಕ ನೋಡಿ ಕಣ್ಣೀರು ಹರಿಸುತ್ತಿದ್ದರೆ, ಚಿತ್ರದ ಬಗ್ಗೆ ಹಿಂದು ಕಾರ್ಯಕರ್ತರು ಸ್ಟೇಟಸ್ ಮೂಲಕ ಪ್ರಚಾರ ನೀಡುತ್ತಿದ್ದಾರೆ.
ಸಾಮಾಜಿಕ ಜಾಲತಾಣದ ಎಲ್ಲಿ ನೋಡಿದರೂ, ಕಾಶ್ಮೀರ್ ಫೈಲ್ಸ್ ಚಿತ್ರದ ಪರ-ವಿರೋಧದ ಅಭಿವ್ಯಕ್ತಿಗಳೇ ಕಾಣಸಿಗುತ್ತಿವೆ. ಕಾಶ್ಮೀರಿ ಪಂಡಿತರನ್ನು ಮುಸ್ಲಿಂ ಭಯೋತ್ಪಾದಕರು ಹೀನಾಯವಾಗಿ ಕೊಂದು ಹಾಕಿದ್ದು, ಮನೆಮಂದಿಯ ಎದುರೇ ಪತ್ನಿ, ಮಕ್ಕಳ ಅತ್ಯಾಚಾರ, ಕೊಲೆಗಳನ್ನು ಕಣ್ಣಿಗೆ ಕಟ್ಟಿದ ರೀತಿ ಕೊಟ್ಟಿರುವ ಚಿತ್ರಣ ದೇಶಾದ್ಯಂತ ಹಿಂದು ಕಾರ್ಯಕರ್ತರನ್ನು ಬಡಿದೆಬ್ಬಿಸಿದೆ. ಇದೇ ವೇಳೆ, ಬಿಜೆಪಿ ಆಡಳಿತದ ರಾಜ್ಯ ಸರಕಾರಗಳು ಕಾಶ್ಮೀರ್ ಫೈಲ್ಸ್ ಚಿತ್ರದ ರಾಜ್ಯವಾರು ತೆರಿಗೆಯನ್ನು ತೆಗದು ಹಾಕಿದ್ದು ತೆರಿಗೆ ರಹಿತವಾಗಿ ಜನರಿಗೆ ತೋರಿಸುವಂತೆ ಸಲಹೆ ಮಾಡಿದೆ.
ಬರೋಬ್ಬರಿರ 30 ವರ್ಷಗಳ ಬಳಿಕ ದೆಹಲಿ, ಹರ್ಯಾಣದಲ್ಲಿ ನೆಲೆ ಕಂಡುಕೊಂಡಿದ್ದ ಕಾಶ್ಮೀರಿ ಪಂಡಿತರ ಕುಟುಂಬಗಳು ಮತ್ತೆ ಕಾಶ್ಮೀರದತ್ತ ಪಯಣ ಬೆಳೆಸಲು ಅವಕಾಶ ಸಿಕ್ಕಿರುವಾಗಲೇ ಈ ರೀತಿಯ ಚಿತ್ರ ಬಂದಿರುವುದು ವಿಶೇಷ. ಕಾಶ್ಮೀರದಲ್ಲಿ ಕಳೆದ ಎರಡು ವರ್ಷಗಳಲ್ಲಿ ಕೇಂದ್ರಾಡಳಿತ ಆಗಿ ಸೇನಾ ಕಾರ್ಯಾಚರಣೆ ಹೆಚ್ಚಿರುವುದರಿಂದ ಉಗ್ರರ ಉಪಟಳವನ್ನು ತಕ್ಕಮಟ್ಟಿಗೆ ನಿಗ್ರಹಿಸಲಾಗಿದೆ. ಇದರ ಜೊತೆಗೇ, ಕೇಂದ್ರ ಗೃಹ ಸಚಿವ ಅಮಿತ್ ಷಾ, ಕಾಶ್ಮೀರದ ಮೂಲ ನಿವಾಸಿಗಳನ್ನು ಅಲ್ಲಿಯೇ ಪುನರ್ವಸತಿ ಮಾಡಿಕೊಳ್ಳಲು ಅವಕಾಶ ನೀಡಲಾಗುವುದು ಎಂದು ಹೇಳಿಕೆ ನೀಡಿದ್ದರು. ಹೀಗಾಗಿ ಅಳಿದುಳಿದ ಕಾಶ್ಮೀರಿ ಕುಟುಂಬಗಳು ತಮ್ಮ ಮೂಲವನ್ನು ಅರಸಿಕೊಂಡು ಹೊರಟಿವೆ. ಇಂಥ ಸಂದರ್ಭದಲ್ಲಿಯೇ ಕಾಶ್ಮೀರ್ ಫೈಲ್ಸ್ ಹೆಸರಲ್ಲಿ ಅಲ್ಲಿನ ಮಾರಣಹೋಮದ ಚಿತ್ರಣವನ್ನು ಕತೆಯಾಗಿಸಿ ಕಟ್ಟಿಕೊಟ್ಟು ಚಿತ್ರದ ಮೂಲಕ ಜನರಿಗೆ ನೀಡಲಾಗಿದೆ.
ಕಾಶ್ಮೀರದಲ್ಲಿದ್ದ ಪಂಡಿತರ ಕುಟುಂಬಗಳಿಗೆ ಯಾವ ರೀತಿ ಚಿತ್ರಹಿಂಸೆ ನೀಡಲಾಗಿತ್ತು, ಅವರು ಬಳಿಕ ತಮ್ಮ ಜೀವ ಉಳಿಸುವುದಕ್ಕಾಗಿ ಯಾಕಾಗಿ ಗುಳೇ ಎದ್ದು ಹೊರಟರು ಅನ್ನುವುದನ್ನೇ ಮುಖ್ಯ ಕತೆಯನ್ನಾಗಿಸಿ ತೋರಿಸಲಾಗಿದೆ. ಅಲ್ಲದೆ, ಆಗಿನ ರಾಜ್ಯ ಸರಕಾರ ಮತ್ತು ಕೇಂದ್ರದ ಆಡಳಿತಗಳು ಕಾಶ್ಮೀರಿಗಳ ನರಮೇಧಕ್ಕೆ ಯಾವ ರೀತಿ ಸಹಕಾರಿಯಾಗಿತ್ತು ಅನ್ನೋದನ್ನೂ ಪರೋಕ್ಷವಾಗಿ ತೋರಿಸಿದ್ದಾರೆ. ಹೀಗಾಗಿ ಒಂದು ಕಡೆಯಿಂದ ಎಡಪಂಥೀಯರು, ಮುಸ್ಲಿಂ ಸಂಘಟನೆಗಳಿಂದ ಆಕ್ರೋಶ ಕೇಳಿಬರುತ್ತಲೇ, ಮತ್ತೊಂದು ಕಡೆಯಿಂದ ಭಾರೀ ಜನಮೆಚ್ಚುಗೆಯೂ ಕೇಳಿಬಂದಿದೆ. ನೈಜಕತೆಯನ್ನು ಇದ್ದ ರೀತಿಯಲ್ಲೇ ತೋರಿಸಿದ ಗಂಡುಗಲಿ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಮತ್ತು ಅದನ್ನು ಅಪ್ಟಟ ಚಿತ್ರವಾಗಿಸಿದ ಅನುಪಮ್ ಖೇರ್ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ. ಬಿಜೆಪಿ ರಾಜ್ಯ ಸರಕಾರಗಳು ಆರು ತಿಂಗಳ ಮಟ್ಟಿಗೆ ಈ ಚಿತ್ರಕ್ಕೆ ತೆರಿಗೆ ಹಾಕಬೇಡಿ ಎಂದು ಹೇಳಿರುವುದು ಈ ಚಿತ್ರವನ್ನು ಜನರ ಮನಪಟಲಕ್ಕೆ ತಲುಪಿಸುವ ಮತ್ತು ಕೋಮು ಧ್ರುವೀಕರಣದ ತಂತ್ರಗಾರಿಕೆಯೂ ಇದರ ಹಿಂದಿರುವಂತೆ ಕಾಣುತ್ತಿದೆ.
Vivek Agnihotri’s The Kashmir Files opened to a massive opening in the box office when it released this Friday. Helmed by Anupam Kher, the film highlights the atrocities against Kashmiri Pandits in the 1990s when they were killed, persecuted and forced to leave their homes overnight.
16-05-24 10:37 pm
HK News Desk
Hassan News, Drowning: ಹಾಸನ ; ಕೆರೆಯಲ್ಲಿ ಈಜಲು...
16-05-24 07:17 pm
Anjali Murder, Hubballi Neha father donates 1...
16-05-24 06:02 pm
Gym trainer, suicide, Crime: ವಿಡಿಯೋ ಕಾಲ್ ನಲ್ಲ...
16-05-24 12:22 pm
ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿ, ಜೆಡಿಎಸ್ಸಿ...
16-05-24 12:11 am
16-05-24 04:30 pm
HK News Desk
PM Modi, Hindu-Muslim: ನಾನೆಂದಿಗೂ ಹಿಂದು- ಮುಸ್ಲ...
15-05-24 02:05 pm
Dog kills 5 Month Old Baby in Hyderabad: ಐದು...
14-05-24 07:21 pm
PM narendra modi in varanasi: ಮೋದಿಯಿಂದ ಗಂಗೆಗೆ...
14-05-24 05:40 pm
Couple Caught Kissing in Odisha: ಕಿಕ್ಕಿರಿದು ತ...
14-05-24 04:09 pm
16-05-24 09:59 pm
Mangalore Correspondent
Mangalore NIA, Terror, Ammar Abdul Rahiman, I...
16-05-24 05:38 pm
Mangalore accident, Kallapu: ಹೆದ್ದಾರಿ ಕ್ರಾಸ್...
16-05-24 02:48 pm
Puttur News, Hospital: ಜ್ವರ ಎಂದು ದಾಖಲಾಗಿದ್ದ ವ...
16-05-24 12:37 pm
ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಾರೀ ಮಳೆ ; ತೋಟಕ್ಕೆ ತೆ...
16-05-24 12:02 am
16-05-24 10:23 pm
Mangalore Correspondent
Mangalore News, Harekala sand mining, crime:...
16-05-24 09:50 pm
ನಾಯಿ ಜೊತೆ ವಾಕಿಂಗ್ ತೆರಳಿದ್ದಾಗ ದೊಣ್ಣೆಯಲ್ಲಿ ಯದ್ವ...
16-05-24 09:31 pm
International espionage case, NIA : ಇಸ್ರೇಲ್ ದ...
16-05-24 06:32 pm
Hubballi Anjali Murder, police inspector Chik...
16-05-24 01:42 pm