ಬ್ರೇಕಿಂಗ್ ನ್ಯೂಸ್
04-04-22 01:39 pm HK Desk news ದೇಶ - ವಿದೇಶ
ಕೊಲಂಬೋ, ಎ.4: ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ತೀವ್ರ ಆರ್ಥಿಕ ಬಿಕ್ಕಟ್ಟಿನಿಂದಾಗಿ ಜನರು ಬೀದಿಗೆ ಇಳಿದಿದ್ದಾರೆ. ದೇಶಾದ್ಯಂತ ಜನರ ಆಕ್ರೋಶ ಹೆಚ್ಚುತ್ತಲೇ ಮಹಿಂದ್ರಾ ರಾಜಪಕ್ಸ ಸರಕಾರದ 26 ಸಚಿವರು ಸಾಮೂಹಿಕ ರಾಜಿನಾಮೆ ನೀಡಿದ್ದಾರೆ. ಭಾನುವಾರ ರಾತ್ರಿ ನಾಟಕೀಯ ಬೆಳವಣಿಗೆ ನಡೆದಿದ್ದು, ಅಧ್ಯಕ್ಷ ಮತ್ತು ಪ್ರಧಾನಿ ವಿರುದ್ಧ ಜನಾಕ್ರೋಶ ವ್ಯಕ್ತವಾಗಿದ್ದರೂ ಅವರನ್ನು ಬಿಟ್ಟು ಸರಕಾರದ ಸಚಿವರು ದಿಢೀರ್ ರಾಜಿನಾಮೆ ನೀಡಿದ್ದು ಕುತೂಹಲ ಮೂಡಿಸಿದೆ.
ಶ್ರೀಲಂಕಾ ಸರಕಾರದಲ್ಲಿ ಅಣ್ಣ ತಮ್ಮಂದಿರು ಸೇರಿದಂತೆ ರಾಜಪಕ್ಸ ಕುಟುಂಬದವರೇ ಪ್ರಮುಖ ಹುದ್ದೆಯಲ್ಲಿದ್ದಾರೆ. ಪ್ರಧಾನಿ ಮಹೀಂದ್ರಾ ರಾಜಪಕ್ಸ ಆಗಿದ್ದರೆ, ಅವರ ಕಿರಿಯ ಸೋದರ ಅಧ್ಯಕ್ಷ ಗೊಟಬಾಯ ರಾಜಪಕ್ಸ ಅಧ್ಯಕ್ಷ ಹುದ್ದೆಯಲ್ಲಿದ್ದಾರೆ. ಇವರ ಪತ್ನಿ, ಮಕ್ಕಳು ಸಚಿವ ಸ್ಥಾನ ಸೇರಿದಂತೆ ಇನ್ನಿತರ ಪ್ರಮುಖ ಹುದ್ದೆಯಲ್ಲಿದ್ದಾರೆ. ಹಿಂದಿನಿಂದಲೂ ಭ್ರಷ್ಟಾಚಾರ, ಅಧಿಕಾರ ಹಿಡಿಯುವುದಕ್ಕಾಗಿ ಜನರನ್ನು ಓಲೈಸಲು ಉಚಿತ ಯೋಜನೆಗಳನ್ನು ಪ್ರಕಟಿಸಿದ್ದು ಲಂಕನ್ನರಿಗೆ ಈಗ ಮುಳುವಾಗಿದೆ.
ಭಾನುವಾರ ದಿಢೀರ್ ಬೆಳವಣಿಗೆಯಲ್ಲಿ ಸಭಾನಾಯಕ ಹಾಗೂ ಶಿಕ್ಷಣ ಸಚಿವ ದಿನೇಶ್ ಗುಣವರ್ಧನ ನೇತೃತ್ವದಲ್ಲಿ 26 ಸಚಿವರು ತಮ್ಮ ಸ್ಥಾನಗಳಿಗೆ ರಾಜಿನಾಮೆ ನೀಡಿದ್ದಾರೆ. ಆದರೆ ಜನರ ಆಕ್ರೋಶ ಇಡೀ ಸರಕಾರದ ಮೇಲಿದ್ದರೂ, ಪ್ರಧಾನಿ ತಮ್ಮ ಕುರ್ಚಿಗಂಟಿಕೊಂಡು ಕುಳಿತಿದ್ದಾರೆ. ಸಚಿವ ಸಂಪುಟ ಸದಸ್ಯರು ರಾಜಿನಾಮೆ ನೀಡಿರುವುದರಿಂದ ಇನ್ನು ಹೊಸ ಸಂಪುಟ ರಚಿಸುವ ಸಾಧ್ಯತೆಯಿದೆ. ಶನಿವಾರ, ಭಾನುವಾರ ದೇಶಾದ್ಯಂತ ಕರ್ಫ್ಯೂ ಹೇರಿ, ಜನರನ್ನು ಹತೋಟಿಯಲ್ಲಿಡಲು ಪ್ರಯತ್ನಿಸಿದರೂ ಜನರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಅಧ್ಯಕ್ಷ, ಪ್ರಧಾನಿ ಮತ್ತು ಸಚಿವರ ಮನೆ ಎದುರಿನಲ್ಲಿ ಪಕ್ಷ ಭೇದ ಮರೆತು ಜನರು ಪ್ರತಿಭಟನೆ ನಡೆಸಿದ್ದಾರೆ. ಜನರನ್ನು ಹತ್ತಿಕ್ಕಲು ಪೊಲೀಸರು ತೊಡಗಿದ್ದು, ನೂರಾರು ಮಂದಿಯನ್ನು ಬಂಧಿಸಿದ್ದಾರೆ.
ವಿಶೇಷ ಅಂದರೆ, ರಾಜಿನಾಮೆ ನೀಡಿದ ಸಚಿವರಲ್ಲಿ ಪ್ರಧಾನಿ ಮಹಿಂದ್ರಾ ರಾಜಪಕ್ಷ ಪುತ್ರ ನಮಲ್ ರಾಜಪಕ್ಷ ಕೂಡ ಸೇರಿದ್ದಾರೆ. ಸರಕಾರದ ವೈಫಲ್ಯ, ಹಣದುಬ್ಬರದಿಂದಾಗಿ ತೈಲ ಇನ್ನಿತರ ವಸ್ತುಗಳನ್ನು ಆಮದು ಮಾಡಿಕೊಳ್ಳಲು ಸಾಧ್ಯವಾಗದೇ ಇರುವುದು, ಇದರಿಂದ ಜನರು ಗ್ಯಾಸ್, ಪೆಟ್ರೋಲಿಗಾಗಿ ಸರದಿ ನಿಂತಿರುವುದು, ಅಗತ್ಯ ಸಾಮಗ್ರಿಗಳಿಗೆ ವಿಪರೀತ ಬೆಲೆ ಆಗಿರುವುದರಿಂದ ಜನರು ಸರಕಾರದ ವಿರುದ್ಧ ತೀವ್ರ ಆಕ್ರೋಶಿತರಾಗಿದ್ದಾರೆ.
ಈ ನಡುವೆ ಮಾಜಿ ಸಚಿವ ವಿಮಲ್ ವೀರವಂಸ ಲಂಕಾ ಅಧ್ಯಕ್ಷರನ್ನು ಭೇಟಿ ಮಾಡಿದ್ದು, ಲಂಕಾದ ಬಿಕ್ಕಟ್ಟನ್ನು ನಿರ್ವಹಿಸಲು ಸರಕಾರವನ್ನು ವಿಸರ್ಜಿಸಿ ತಾತ್ಕಾಲಿಕ ನೆಲೆಯಲ್ಲಿ ಸರ್ವಪಕ್ಷಗಳ ಹಂಗಾಮಿ ಸರಕಾರ ನೇಮಿಸುವಂತೆ ಸಲಹೆ ಮಾಡಿದ್ದಾರೆ. ಆದರೆ ಶ್ರೀಲಂಕಾ ಸರಕಾರ ಒಂದೇ ಕುಟುಂಬದ ಹಿಡಿತದಲ್ಲಿರುವುದರಿಂದ ಅಧಿನಾಯಕರು ತಮ್ಮ ಅಧಿಕಾರ ಬಿಟ್ಟುಕೊಡಲು ಸಿದ್ಧರಿಲ್ಲ.
People are taking to the streets after a severe financial crisis in the island nation of Sri Lanka. The resignation of the 26 ministers of the government of Mahindra Rajapaksa has led to mass resignation.
14-07-25 10:44 pm
Bangalore Correspondent
Shiradi Ghat Accident, Car: ಶಿರಾಡಿ ಘಾಟ್ ; ರಸ್...
14-07-25 01:43 pm
Dr B Saroja Devi Death: 17ನೇ ವಯಸ್ಸಲ್ಲೇ ಚಿತ್ರರ...
14-07-25 12:50 pm
Mantralaya, Tungabhadra River, drowning: ತುಂಬ...
13-07-25 08:37 pm
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
14-07-25 09:55 pm
Mangalore Correspondent
Mrpl leakgae, Death, Fight: ಅನಿಲ ಸೋರಿಕೆಯಿಂದ ಇ...
14-07-25 07:56 pm
Mangalore, Help: ಅಪಘಾತದಲ್ಲಿ ಬಡ ಮಹಿಳೆಯ ತಲೆಗೆ ತ...
13-07-25 11:13 pm
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm