ಬ್ರೇಕಿಂಗ್ ನ್ಯೂಸ್
26-04-22 10:05 pm HK News Desk ದೇಶ - ವಿದೇಶ
ಕರಾಚಿ, ಎ.26: ಪಾಕಿಸ್ಥಾನದ ಕರಾಚಿ ಯೂನಿವರ್ಸಿಟಿ ಕ್ಯಾಂಪಸ್ ಸಮೀಪದಲ್ಲಿ ಬಾಂಬ್ ಸ್ಫೋಟ ಸಂಭವಿಸಿದ್ದು, ಮೂವರು ಚೀನಾ ಪ್ರಜೆಗಳು ಸೇರಿ ನಾಲ್ವರು ಸ್ಥಳದಲ್ಲೇ ಸಾವು ಕಂಡಿದ್ದಾರೆ. ಮಹಿಳೆಯೊಬ್ಬಳು ತನ್ನನ್ನು ಆತ್ಮಹತ್ಯಾ ಬಾಂಬರ್ ಆಗಿ ಸ್ಫೋಟಿಸಿಕೊಂಡಿದ್ದಾಳೆ ಎನ್ನಲಾಗುತ್ತಿದ್ದು ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ.
ಕರಾಚಿ ಯೂನಿವರ್ಸಿಟಿ ಸಮೀಪದ ಕನ್ಫ್ಯೂಶಿಯಸ್ ಇನ್ಸಿಟ್ಯೂಟ್ ಕಟ್ಟಡದ ಬಳಿ ವ್ಯಾನ್ ನಲ್ಲಿ ಬಾಂಬ್ ಸ್ಫೋಟ ಸಂಭವಿಸಿದೆ. ಪ್ರತ್ಯೇಕವಾದಿ ಸಂಘಟನೆ ಕೃತ್ಯ ನಡೆಸಿರುವುದಾಗಿ ಪಾಕಿಸ್ಥಾನದ ಡಾನ್ ನ್ಯೂಸ್ ಟಿವಿ ವರದಿ ಮಾಡಿದೆ. ವ್ಯಾನ್ ನಲ್ಲಿ ಚೀನಾ ಮೂಲದ ಮೂವರು ಉಪನ್ಯಾಸಕರನ್ನು ಕರಾಚಿ ಯೂನಿವರ್ಸಿಟಿಯಿಂದ ಕರೆತರಲಾಗುತ್ತಿತ್ತು. ಚೀನಾದ ಉಪನ್ಯಾಸಕರು ಯೂನಿವರ್ಸಿಟಿಯಲ್ಲಿ ಚೀನೀ ಭಾಷೆಯನ್ನು ಬೋಧಿಸುತ್ತಿದ್ದರು. ಕೆಲಸ ಮುಗಿಸಿ ವ್ಯಾನಿನಲ್ಲಿ ಮರಳುತ್ತಿದ್ದಾಗ ಬಾಂಬ್ ಸ್ಫೋಟ ನಡೆದಿದೆ. ವ್ಯಾನ್ ನಲ್ಲಿ ಏಳರಿಂದ ಎಂಟು ಮಂದಿ ಇದ್ದರೆಂದು ಸ್ಥಳೀಯ ಪೊಲೀಸರು ತಿಳಿಸಿದ್ದು, ಮೃತರ ಸಂಖ್ಯೆ ಖಚಿತಗೊಂಡಿಲ್ಲ. ಜಂಗ್ ಎನ್ನುವ ಉರ್ದು ಪತ್ರಿಕೆಯೊಂದು ರಿಮೋಟ್ ಕಂಟ್ರೋಲ್ ಮೂಲಕ ಬಾಂಬ್ ಸ್ಫೋಟಿಸಲಾಗಿದೆ ಎಂದು ಹೇಳಿದೆ.
ಕಳೆದ ಜುಲೈ ತಿಂಗಳಲ್ಲಿ ಚೀನೀಯರಿದ್ದ ಬಸ್ಸಿನಲ್ಲಿ ಬಾಂಬ್ ಸ್ಫೋಟಗೊಂಡು 9 ಮಂದಿ ಚೀನೀಯರು ಮೃತಪಟ್ಟಿದ್ದರು. ಬಸ್ಸಿನಲ್ಲಿ ಚೀನಾದ ಇಂಜಿನಿಯರ್ ಗಳನ್ನು ಖೈಬರ್ ಪಂಕ್ತುಕ್ವಾ ಪ್ರಾಂತದ ಡ್ಯಾಮ್ ಪ್ರದೇಶಕ್ಕೆ ಒಯ್ಯುತ್ತಿದ್ದಾಗ ಬಾಂಬ್ ದಾಳಿ ಆಗಿತ್ತು. ಘಟನೆಯಲ್ಲಿ 9 ಚೀನೀಯರು ಸೇರಿ 13 ಜನ ಸತ್ತಿದ್ದರು. ಆನಂತರ, ಕೆಲವು ದಿನಗಳ ಬಳಿಕ ಮೋಟರ್ ಸೈಕಲ್ ನಲ್ಲಿ ತೆರಳುತ್ತಿದ್ದ ಇಬ್ಬರು ಚೀನೀಯರ ಮೇಲೆ ಬೆಂಕಿ ಹಾಕಿ, ಸುಡಲಾಗಿತ್ತು. ಇಬ್ಬರು ಕೂಡ ಜೀವಂತ ಸಾವು ಕಂಡಿದ್ದರು. ಪಾಕಿಸ್ಥಾನದಲ್ಲಿ ಚೀನೀಯರು ರಸ್ತೆ ಮಾರ್ಗ, ಬಂದರು ನಿರ್ಮಿಸುತ್ತಿರುವುದರಿಂದ ಅಲ್ಲಿನ ಸ್ಥಳೀಯ ಪ್ರತ್ಯೇಕತವಾದಿ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದು ಚೀನೀಯರನ್ನು ಟಾರ್ಗೆಟ್ ಮಾಡಿ ಕೊಲ್ಲುತ್ತಿದ್ದಾರೆ.
Four people, including three Chinese nationals, were killed and several others injured in an explosion in a van near the Confucius Institute at Pakistan's Karachi University on Tuesday, reports said. The attack was carried out by a woman suicide bomber, according to news agency AFP.
14-07-25 01:43 pm
HK News Desk
Dr B Saroja Devi Death: 17ನೇ ವಯಸ್ಸಲ್ಲೇ ಚಿತ್ರರ...
14-07-25 12:50 pm
Mantralaya, Tungabhadra River, drowning: ತುಂಬ...
13-07-25 08:37 pm
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
Shivamogga Jail News, Mobile phone: ಶಿವಮೊಗ್ಗ...
12-07-25 10:47 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
14-07-25 07:56 pm
Mangalore Correspondent
Mangalore, Help: ಅಪಘಾತದಲ್ಲಿ ಬಡ ಮಹಿಳೆಯ ತಲೆಗೆ ತ...
13-07-25 11:13 pm
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
Mangalore DK Transport, DK Group Alwyn Joel N...
13-07-25 07:00 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm