ಬ್ರೇಕಿಂಗ್ ನ್ಯೂಸ್
10-05-22 01:50 pm HK Desk News ದೇಶ - ವಿದೇಶ
ನವದೆಹಲಿ, ಮೇ 10: ಭಾರತದ ಕೊರೊನಾ ಸನ್ನಿವೇಶಗಳನ್ನು ಹಿಡಿದಿಟ್ಟ ಖ್ಯಾತ ಫೋಟೋ ಜರ್ನಲಿಸ್ಟ್ ಆಗಿದ್ದ ದಿವಂಗತ ಡ್ಯಾನಿಶ್ ಆಲಿಗೆ ಪ್ರತಿಷ್ಠಿತ ಪುಲಿಟ್ಜರ್ ಪ್ರಶಸ್ತಿ ನೀಡಲಾಗಿದೆ. ರಾಯ್ಟರ್ಟ್ ಸುದ್ದಿ ಸಂಸ್ಥೆಯ ಪತ್ರಕರ್ತರಾದ ಅದ್ನಾನ್ ಅಬಿದಿ, ಸನ್ನಾ ಇರ್ಶಾದ್ ಮಟ್ಟೂ ಮತ್ತು ಅಮಿತ್ ದವೆ ಅವರಿಗೂ ಪುಲಿಟ್ಜರ್ ಪ್ರಶಸ್ತಿ ಘೋಷಿಸಲಾಗಿದೆ.
ಭಾರತ ಮೂಲದ ಡ್ಯಾನಿಶ್ ಆಲಿ ರಾಯ್ಟರ್ಟ್ ಸಂಸ್ಥೆಯಲ್ಲಿ ಸೀನಿಯರ್ ಫೋಟೋಗ್ರಾಫರ್ ಆಗಿದ್ದರು. ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ಕಾಲೇಜಿನಲ್ಲಿ ಪದವಿ ಪಡೆದಿದ್ದ ಡ್ಯಾನಿಶ್, ಆಬಳಿಕ ಸಮೂಹ ಸಂವಹನ ವಿಚಾರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು.

2018ರಲ್ಲಿ ರೋಹಿಂಗ್ಯಾ ನಿರಾಶ್ರಿತರ ಕುರಿತು ಡ್ಯಾಕ್ಯುಮೆಂಟರಿ ಮಾಡಿದ ಡ್ಯಾನಿಶ್ ಆಲಿ ನೇತೃತ್ವದ ತಂಡಕ್ಕೆ ಫೀಚರ್ ಫೋಟೋಗ್ರಫಿಗಾಗಿ ಪುಲಿಟ್ಜರ್ ಪ್ರಶಸ್ತಿ ನೀಡಲಾಗಿತ್ತು. 2021ರಲ್ಲಿ ಅಫ್ಘಾನಿಸ್ತಾನ- ತಾಲಿಬಾನಿಗಳ ಸಂಘರ್ಷದ ಕವರೇಜ್ ಮಾಡುವುದಕ್ಕಾಗಿ ತೆರಳಿದ್ದ ಡ್ಯಾನಿಶ್ ಆಲಿಯನ್ನು ತಾಲಿಬಾನಿ ಉಗ್ರರು ಹತ್ಯೆ ಮಾಡಿದ್ದರು. ಪಾಕಿಸ್ಥಾನ ಗಡಿಭಾಗ ಸ್ಪಿನ್ ಬೋಲ್ಡಾಕ್ ಎಂಬ ಪ್ರದೇಶದಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಡ್ಯಾನಿಶ್ ಆಲಿ, ಜರ್ಮನ್ ಮೂಲದ ಯುವತಿಯನ್ನು ಮದುವೆಯಾಗಿದ್ದು ಇಬ್ಬರು ಮಕ್ಕಳನ್ನು ಹೊಂದಿದ್ದರು.
![]()
ಡ್ಯಾನಿಶ್ ಆಲಿ, ರಾಯ್ಟರ್ಸ್ ಸಂಸ್ಥೆಯಲ್ಲಿ ಫೋಟೋಗ್ರಾಫರ್ ಆಗಿದ್ದುಕೊಂಡು ಜಾಗತಿಕ ವಿದ್ಯಮಾನಗಳ ಛಾಯಾಗ್ರಹಣಕ್ಕಾಗಿ ನಾನಾ ದೇಶಗಳನ್ನು ಸುತ್ತಿದ್ದರು. ಅಫ್ಘಾನಿಸ್ತಾನ, ಇರಾಕ್ ಯುದ್ಧಗಳು, ರೋಹಿಂಗ್ಯಾ ಮುಸ್ಲಿಮರ ಸಂಘರ್ಷ, ಹಾಂಗ್ ಕಾಂಗ್ ಪ್ರತಿಭಟನೆ, ನೇಪಾಳಿ ಭೂಕಂಪ ಹೀಗೆ ಜಾಗತಿಕ ಪ್ರಮುಖ ವಿದ್ಯಮಾನಗಳ ಛಾಯಾಗ್ರಹಣದ ಮೂಲಕ ವಿಶ್ವದ ಗಮನ ಸೆಳೆದಿದ್ದರು. ಇದೀಗ ಕೋವಿಡ್ ಸಂದರ್ಭದಲ್ಲಿ ಭಾರತದ ದೆಹಲಿ ಮತ್ತಿತರ ಕಡೆ ಎದುರಾಗಿದ್ದ ಸನ್ನಿವೇಶಗಳ ಫೀಚರ್ ಫೋಟೋಗ್ರಫಿಗಾಗಿ ಡ್ಯಾನಿಶ್ ಆಲಿಗೆ ಮರಣೋತ್ತರವಾಗಿ ಪುಲಿಟ್ಜರ್ ಪ್ರಶಸ್ತಿ ಘೋಷಿಸಲಾಗಿದೆ.
Journalist Danish Siddiqui, who lost his life while covering the conflict situation in Afghanistan, has been awarded the Pulitzer Prize for feature photography for his coverage of the Covid situation in India. Along with him, Reuters journalists Adnan Abidi, Sanna Irshad Mattoo, and Amit Dave were also honoured with the Pulitzer Prize.
12-09-26 09:40 pm
HK News Staffer
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
ಐಎಎಸ್ ತೇರ್ಗಡೆಯಾಗಿದ್ದ ಕೇರಳದ ಮೊದಲ ಬುಡಕಟ್ಟು ಮಹಿಳ...
12-09-26 05:53 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
13-09-26 08:10 pm
HK News
AI Centre in Madiyala: ಮಡಿಯಾಲದಲ್ಲಿ ಎಐ ಉನ್ನತ ಶ...
13-09-26 07:53 pm
ಬೆಳ್ತಂಗಡಿ ; ಹೆಬ್ಬಾವನ್ನು ನುಂಗಿ ಮನೆಯ ತೋಟದಲ್ಲಿ ಅ...
12-09-26 03:09 pm
ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ; ಮೂಲಸೌಲಭ್ಯ, ಕೈಗಾ...
12-09-26 10:53 am
ಅ.1ರಿಂದ ಮಂಗಳೂರು ರೈಲ್ವೇ ಆಡಳಿತ ಬದಲು ; ಪಾಲಕ್ಕಾಡ್...
11-09-26 10:58 pm
12-09-26 07:41 pm
HK News Staffer
ಕ್ರಿಪ್ಟೊ ಕರೆನ್ಸಿ ಹೆಸ್ರಲ್ಲಿ ಡಾಕ್ಟರ್ ಗೆ ಮಹಿಳೆಯಿ...
11-09-26 06:38 pm
ಜಾಮೀನು ಪಡೆಯಲು ನಕಲಿ ಆಧಾರ್ ಕಾರ್ಡ್ ಹಾಜರು ; ಉಡು...
11-09-26 01:09 pm
ಬೈಕ್ಗೆ ಡಿಕ್ಕಿ ಹೊಡೆದ ಕಾರು ; ಚಾಮರಾಜನಗರದಲ್ಲಿ ಮೂ...
11-09-26 10:14 am
ಕುಂದಾಪುರದಲ್ಲಿ 8 ಶಾಲಾ ಮಕ್ಕಳ ಬಲಿ ಪಡೆದ ಭೀಕರ ಅಪಘಾ...
10-09-26 08:16 pm