ಕಡೆಗೂ ತೈಲದ ಬರೆ ಇಳಿಕೆ ; ಪೆಟ್ರೋಲಿಗೆ 8 ರೂ., ಡೀಸೆಲಿಗೆ 6 ರೂ. ಕೇಂದ್ರ ಅಬಕಾರಿ ಸುಂಕ ಇಳಿಕೆ

21-05-22 10:20 pm       HK News Desk   ದೇಶ - ವಿದೇಶ

ತೈಲ ದರ ಏರಿಕೆಯಾಗಿ ಗ್ರಾಹಕನ ಕೈ ಸುಡುತ್ತಿರುವಾಗಲೇ ಕೇಂದ್ರದ ಮೋದಿ ಸರಕಾರ ಮತ್ತೆ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕಡಿತ ಮಾಡಿದೆ.

ನವದೆಹಲಿ, ಮೇ 21: ತೈಲ ದರ ಏರಿಕೆಯಾಗಿ ಗ್ರಾಹಕನ ಕೈ ಸುಡುತ್ತಿರುವಾಗಲೇ ಕೇಂದ್ರದ ಮೋದಿ ಸರಕಾರ ಮತ್ತೆ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕಡಿತ ಮಾಡಿದೆ. ಪೆಟ್ರೋಲಿಗೆ 8 ರೂ. ಮತ್ತು ಡೀಸೆಲಿಗೆ 6 ರೂ. ನಂತೆ ತೆರಿಗೆ ಕಡಿತ ಮಾಡಲಾಗಿದ್ದು, ಪೆಟ್ರೋಲ್ ಲೀಟರಿಗೆ 9.5 ರೂ. ಹಾಗೂ ಡೀಸೆಲ್ ಲೀಟರಿಗೆ 7 ರೂ. ದರ ಇಳಿಕೆಯಾಗಲಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರಕಾರ ಬಡವರು ಮತ್ತು ಜನಸಾಮಾನ್ಯರಿಗೆ ಸಹಾಯ ಮಾಡಲು ಬದ್ಧವಿದ್ದು, ಇನ್ನಷ್ಟು ಕಲ್ಯಾಣ ಕಾರ್ಯಕ್ರಮಗಳನ್ನು ಪ್ರಕಟಿಸಲಿದೆ. ಜನಸಾಮಾನ್ಯರ ಆಶೋತ್ತರಗಳನ್ನು ಈಡೇರಿಸಲು ಎಲ್ಲ ರೀತಿಯ ನೆರವುಗಳನ್ನು ನೀಡಲಿದೆ. ಈಗ ಅಬಕಾರಿ ಸುಂಕ ಕಡಿತ ಮಾಡಿರುವುದರ ಪ್ರಯೋಜನವನ್ನು ಎಲ್ಲ ರಾಜ್ಯಗಳು ಜನರಿಗೆ ತಲುಪಿಸಬೇಕು. ಕಳೆದ ಬಾರಿ ನವೆಂಬರ್ ತಿಂಗಳಲ್ಲಿ ತೆರಿಗೆ ಇಳಿಸದ ರಾಜ್ಯಗಳು ಕೂಡ ಈಗ ತೆರಿಗೆ ಇಳಿಕೆಯನ್ನು ಮಾಡಬೇಕೆಂದು ನಿರ್ಮಲಾ ಸೀತಾರಾಮನ್ ಮನವಿ ಮಾಡಿದ್ದಾರೆ. ಅಬಕಾರಿ ಸುಂಕ ಇಳಿಕೆಯಿಂದಾಗಿ ಕೇಂದ್ರ ಸರಕಾರಕ್ಕೆ ವರ್ಷದಲ್ಲಿ ಒಂದು ಲಕ್ಷ ಕೋಟಿ ರೂಪಾಯಿ ಹೊರೆ ಬೀಳಲಿದೆ.

PM Modi said on rising prices of petrol and diesel - Hindi Tezz Buzz |  Lifestyle | Health | Tech | National Update

Nirmala Sitharaman - Wikipedia

ಪ್ರಧಾನ ಮಂತ್ರಿ ಉಜ್ವಲಾ ಯೋಜನೆಯಡಿ ಕೇಂದ್ರ ಸರಕಾರ ದೇಶದ 90 ಲಕ್ಷ ಗ್ರಾಹಕರಿಗೆ ಪ್ರತೀ ಸಿಲಿಂಡರಿಗೆ 200 ರೂಪಾಯಿ ಸಬ್ಸಿಡಿ ನೀಡುತ್ತಿದೆ. ಇದಕ್ಕಾಗಿ 6100 ಕೋಟಿ ರೂಪಾಯಿ ವ್ಯಯಿಸಲಾಗುತ್ತಿದೆ. ಇದಲ್ಲದೆ, ಪ್ಲಾಸ್ಟಿಕ್ ಉತ್ಪನ್ನಗಳಿಗೆ ಬಳಸುವ ಕಚ್ಚಾ ವಸ್ತುಗಳು ಮತ್ತು ಸ್ಟೀಲ್ ಹಾಗೂ ಕಬ್ಬಿಣದ ಕಚ್ಚಾ ವಸ್ತುಗಳ ಮೇಲಿನ ಆಮದು ಸುಂಕವನ್ನು ಇಳಿಸಲಾಗಿದೆ. ಇದರಿಂದ ಉತ್ಪನ್ನಗಳ ಬೆಲೆಗಳು ಇಳಿಕೆಯಾಗಿ ಜನರಿಗೆ ಲಾಭ ದೊರಕಲಿದೆ ಎಂದು ಸಚಿವೆ ನಿರ್ಮಲಾ ತಿಳಿಸಿದ್ದಾರೆ.

pradhan mantri ujjwala yojana 14 lakh families will get benefit of pradhan  mantri ujjwala yojana in jharkhand these are important documents for the  beneficiaries grj | Pradhan Mantri Ujjwala Yojana : झारखंड

ಜಗತ್ತು ಕಷ್ಟದ ದಿನಗಳನ್ನು ಎದುರಿಸುತ್ತಿದೆ. ಕೋವಿಡ್ ಸೋಂಕಿನ ಬಳಿಕ ಚೇತರಿಕೆ ಹಾದಿಯಲ್ಲಿದೆ. ಉಕ್ರೇನ್ ಯುದ್ಧದಿಂದಾಗಿ ಕೆಲವು ವಸ್ತುಗಳ ಪೂರೈಕೆ ಮತ್ತು ಸರಬರಾಜಿನಲ್ಲಿ ಸಮಸ್ಯೆ ಆಗಿತ್ತು. ಇದರ ಕಾರಣದಿಂದಾಗಿ ಹಲವು ರಾಷ್ಟ್ರಗಳ ಆರ್ಥಿಕತೆಯ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿದೆ ಎಂದು ಅವರು ತಿಳಿಸಿದ್ದಾರೆ.

Prime Minister Narendra modi Saturday said the slew of economic measures, especially the cut in excise duty on fuel prices, taken by the government will provide relief to the citizens and further ‘Ease of Living’. Soon after Union Finance Minister Nirmala sitharaman announced the steps, PM Modi took to Twitter, saying: “It is always people first for us! Today’s decisions, especially the one relating to a significant drop in petrol and diesel prices will positively impact various sectors, provide relief to our citizens and further ‘Ease of Living.’”