ಬ್ರೇಕಿಂಗ್ ನ್ಯೂಸ್
05-09-22 01:34 pm Source: Vijayakarnataka ಸಿನಿಮಾ
ಕನ್ನಡ ಸಿನಿಮಾಗಳಿಗೆ ಇತ್ತೀಚೆಗೆ ಪರಭಾಷೆಗಳಲ್ಲಿ ಬೇಡಿಕೆ ಸೃಷ್ಟಿಯಾಗುತ್ತಿವೆ. ಕೆಲ ವಾರಗಳ ಹಿಂದೆ ಬಿಡುಗಡೆಯಾದ ‘ಲವ್ 360’ ಸಿನಿಮಾ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದ್ದು, ಈಗ ಈ ಸಿನಿಮಾ ತಮಿಳು ಮತ್ತು ತೆಲುಗಿಗೆ ರಿಮೇಕ್ ಆಗುತ್ತಿದೆ ಎಂದು ಸುದ್ದಿಯಾಗಿದೆ.
ಶಶಾಂಕ್ ನಿರ್ದೇಶನ ಮಾಡಿದ್ದ ಈ ಸಿನಿಮಾ ಹೊಸತನದ ಕಥೆಯಿಂದ ಗಮನ ಸೆಳೆದಿತ್ತು. ಈ ಸಿನಿಮಾ ಮೂಲಕ ಪ್ರವೀಣ್ ಎಂಬ ಯುವಕ ನಾಯಕರಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಈ ಸಿನಿಮಾವನ್ನು ಈಗ ತೆಲುಗಿನ ಖ್ಯಾತ ನಿರ್ಮಾಣ ಸಂಸ್ಥೆ ಮತ್ತು ನಿರ್ಮಾಪಕರು ರಿಮೇಕ್ ಮಾಡಲು ಆಸಕ್ತಿ ತೋರಿಸಿದ್ದಾರೆ. ಶಶಾಂಕ್ ಅವರಿಗೆ ನಿರ್ದೇಶನ ಮಾಡಲು ಆಫರ್ ಸಹ ನೀಡಿದ್ದಾರಂತೆ.
‘ಲವ್ 360 ಸಿನಿಮಾದ ಕಥೆ ಮತ್ತು ಮೇಕಿಂಗ್ ಅನ್ನು ಇಷ್ಟಪಟ್ಟು ತೆಲುಗಿನ ಖ್ಯಾತ ನಿರ್ಮಾಣ ಸಂಸ್ಥೆ ರಿಮೇಕ್ ಮಾಡಲು ಮುಂದೆ ಬಂದಿದೆ. ತಮಿಳಿಗೂ ಸಹ ಒಂದಷ್ಟು ಮಂದಿ ಕೇಳಿದ್ದಾರೆ. ಸದ್ಯದಲ್ಲೇ ಎಲ್ಲವೂ ಫೈನಲ್ ಆಗಲಿದೆ’ಎಂದು ಹೇಳುತ್ತಾರೆ ಶಶಾಂಕ್.
ಜನ ಗೆಲ್ಲಿಸಿದ ಸಿನಿಮಾ ಈ ಸಿನಿಮಾ ಬಿಡುಗಡೆಯಾಗಿ ಮೊದಲ ಮೂರು ದಿನಗಳ ಕಾಲ ನಿರೀಕ್ಷಿತ ಮಟ್ಟದ ಕಲೆಕ್ಷನ್ ಮಾಡಲಿಲ್ಲ ಎಂದು ಶಶಾಂಕ್ ಬೇಸರದಿಂದ ವಿಡಿಯೊವೊಂದನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದರು. ಆ ವಿಡಿಯೊ ವೈರಲ್ ಆಗಿ ಸಿನಿಮಾಗೆ ಜನ ಬರಲಾರಂಭಿಸಿದರು. ವಿಶೇಷ ಎಂದರೆ ಸಿನಿಮಾ ಉತ್ತಮ ಕಲೆಕ್ಷನ್ ಮಾಡಿದ್ದಲ್ಲದೆ, ಜನಮನವನ್ನು ಸಹ ಗೆದ್ದಿತು. ಹಾಗಾಗಿ ಶಶಾಂಕ್ ಕನ್ನಡಿಗರಿಗೆ ಧನ್ಯವಾದ ಹೇಳಿ ಒಂದು ವಿಡಿಯೊವನ್ನು ಹರಿ ಬಿಟ್ಟಿದ್ದಾರೆ.
‘ಕನ್ನಡಿಗರು ಸಿನಿಮಾವನ್ನು ಗೆಲ್ಲಿಸಿದ್ದಾರೆ. ಒಳ್ಳೆಯ ಕಂಟೆಂಟ್ ಇರುವ ಸಿನಿಮಾಗಳನ್ನು ಮಾಡಿದರೆ ಎಂದಿಗೂ ಅವರು ಕೈ ಬಿಡುವುದಿಲ್ಲ ಎಂಬುದನ್ನು ನಿರೂಪಿಸಿದ್ದಾರೆ. ‘ಲವ್ 360’ ತಂಡದಿಂದ ಸಿನಿಮಾ ನೋಡಿದ ಎಲ್ಲರಿಗೂ ಧನ್ಯವಾದ. ಈ ಸಿನಿಮಾ ಹಿಟ್ ಆಗಲು ಹಲವು ಕಾರಣಗಳಿವೆ. ಸಿನಿಮಾದಲ್ಲಿನ ಹಾಡುಗಳು ಮತ್ತು ನನ್ನ ಕಥಾ ನಾಯಕ ಪ್ರವೀಣ್ ಮತ್ತು ನಾಯಕಿ ರಚನಾ ಇಂದರ್ ಅವರ ನಟನೆಯೂ ಕಾರಣ’ ಎಂದು ಹೇಳಿದ್ದಾರೆ ಶಶಾಂಕ್.ಒಟ್ಟಾರೆ ಕನ್ನಡಿಗರು ಇಷ್ಟಪಟ್ಟ ಸಿನಿಮಾಗಳು ಪರಭಾಷೆಗೂ ಹೋಗುತ್ತಿರುವುದು ಸಹಜವಾಗಿ ಕನ್ನಡ ಸಿನಿಮಾ ಪ್ರೇಮಿಗಳಿಗೆ ಸಂತಸವಾಗಿದೆ.
"ರಿಮೇಕ್ಗಾಗಿ ಬೇಡಿಕೆ ಬಂದಿದೆ. ಸದ್ಯದಲ್ಲೇ ಯಾರು ಮಾಡುತ್ತಾರೆ ಎಂಬ ಬಗ್ಗೆ ವಿವರ ನೀಡುತ್ತೇವೆ" ಎಂದಿದ್ದಾರೆ ನಿರ್ದೇಶಕ ಶಶಾಂಕ್
Demand For Director Shashank Love 360 Movie Remake
25-04-24 11:07 pm
Bangalore Correspondent
Cm Siddaramaiah Neha house visit: ಹುಬ್ಬಳ್ಳಿ ;...
25-04-24 10:57 pm
Shivaraj Tangadagi, Janardhana Reddy: ಶಿವರಾಜ...
25-04-24 09:57 pm
CID team, Neha house Hubballi: ಹುಬ್ಬಳ್ಳಿ ನೇಹಾ...
25-04-24 02:19 pm
Mallikarjun Kharge speech at Kalaburgi: ಮತ ಹಾ...
24-04-24 11:14 pm
25-04-24 03:49 pm
HK News Desk
Groom electrocuted in Rajasthan: ರೆಸಾರ್ಟ್ ನಲ್...
24-04-24 05:01 pm
Pm Modi, Muslims: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ...
22-04-24 10:37 pm
ಮದುವೆ ಮುಗಿಸಿ ವಾಪಾಸ್ ಆಗುವ ವೇಳೆ ಭೀಕರ ಅಪಘಾತ ; ಓ...
21-04-24 03:23 pm
Surya Tilak, Ram Lallas forehead in Ayodhya:...
17-04-24 08:42 pm
25-04-24 10:01 pm
Mangalore Correspondent
Mangalore Loksabha elections: ದಕ್ಷಿಣ ಕನ್ನಡ ಲೋ...
25-04-24 09:50 pm
Blood donation, KMC manipal: ಲೋಕಸಭಾ ಚುನಾವಣೆಯ...
25-04-24 08:45 pm
Banta Brigade, Mangalore, Brijesh Chowta: ಬಂಟ...
25-04-24 02:42 pm
Vishwa Hindu Parishad, Vhp, Mangalore: ರಾಜ್ಯದ...
25-04-24 12:59 pm
25-04-24 10:18 pm
Mangalore Correspondent
Bangalore crime, Dacoity gang, 40 lakhs, robb...
25-04-24 03:33 pm
Gang raped in Bengaluru: ಬೆಂಗಳೂರಿನಲ್ಲಿ ಯುವತಿ...
25-04-24 12:19 pm
Glide touist bus, Mangalore, crime: ಬೆಂಗಳೂರು...
24-04-24 10:48 pm
ಗಿಫ್ಟ್ ವಿಚಾರದಲ್ಲಿ ಕಿರಿಕ್ ; ಅಣ್ಣ ತಂಗಿಯ ಮದುವೆಗೆ...
24-04-24 05:39 pm