ಜುವೆಲ್ಲರಿಯಿಂದ ಚಿನ್ನಾಭರಣ ಖರೀದಿಸಿ ವಂಚಿಸಿದ್ದ ಮಹಿಳೆ ಸೆರೆ

21-10-20 06:53 pm       Mangaluru Correspondent   ಕರಾವಳಿ

ಕೈಕಂಬದ ಜುವೆಲ್ಲರಿಯಿಂದ ಏಳು ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಖರೀದಿಸಿ, ನಕಲಿ ಚೆಕ್ ನೀಡಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಬಜ್ಪೆ ಪೊಲೀಸರು ಮಹಿಳೆಯೊಬ್ಬಳನ್ನು ಬಂಧಿಸಿದ್ದಾರೆ.

ಮಂಗಳೂರು, ಅಕ್ಟೋಬರ್ 21: ಕೈಕಂಬದ ಜುವೆಲ್ಲರಿಯಿಂದ ಏಳು ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಖರೀದಿಸಿ, ನಕಲಿ ಚೆಕ್ ನೀಡಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಬಜ್ಪೆ ಪೊಲೀಸರು ಮಹಿಳೆಯೊಬ್ಬಳನ್ನು ಬಂಧಿಸಿದ್ದಾರೆ.

ಬಂಧಿತ ಮಹಿಳೆಯನ್ನು ಕುಪ್ಪೆಪದವು ನಿವಾಸಿ ಫರೀದಾ ಬೇಗಂ ಎಂದು ಗುರುತಿಸಲಾಗಿದೆ. ಫರೀದಾ ಮತ್ತು ಆಕೆಯ ಪತಿ ಮುತ್ತೂರು ನಿವಾಸಿ ರಮೀಜ್ ಸೇರಿ ಜುವೆಲ್ಲರಿಯಿಂದ 7.3 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಖರೀದಿ ಮಾಡಿದ್ದರು. ಈ ವೇಳೆ, ಏಳು ಲಕ್ಷ ರೂ. ಮೊತ್ತಕ್ಕೆ ಚೆಕ್ ನೀಡಿದ್ದಾರೆ. ಜುವೆಲ್ಲರಿ ಸಿಬಂದಿ ಚೆಕ್ಕನ್ನು ಬ್ಯಾಂಕಿಗೆ ಹಾಕಿದಾಗ, ಬ್ಯಾಂಕಿನಲ್ಲಿ ಸಹಿಯ ವ್ಯತ್ಯಾಸ ಕಂಡುಬಂದಿದ್ದರಿಂದ ಹಣ ಡ್ರಾ ಮಾಡಲು ನಿರಾಕರಿಸಿದ್ದಾರೆ. ಹೀಗಾಗಿ ಜುವೆಲ್ಲರಿ ಸಿಬಂದಿ ಬಜ್ಪೆ ಠಾಣೆಗೆ ದೂರು ನೀಡಿದ್ದರು. ಪೊಲೀಸರು ತಪಾಸಣೆಗೆ ಮುಂದಾಗಿದ್ದಾಗ, ದಂಪತಿ ಪರಾರಿಯಾಗಿದ್ದರು.

ಇದೀಗ ಫರೀದಾಳನ್ನು ಮಂಗಳೂರಿನ ಉಳ್ಳಾಲದ ಮನೆಯೊಂದರಲ್ಲಿ ಬಂಧಿಸಲಾಗಿದೆ. ರಮೀಜ್ ತಲೆಮರೆಸಿಕೊಂಡಿದ್ದಾನೆ. ಪೊಲೀಸರು ಆತನ ಹುಡುಕಾಟದಲ್ಲಿದ್ದಾರೆ. ದಂಪತಿ ಪೊಲೀಸರ ಕಣ್ತಪ್ಪಿಸಿ ವಿದೇಶಕ್ಕೆ ಪರಾರಿಯಾಗುವ ಯತ್ನದಲ್ಲಿದ್ದರು ಎನ್ನುವ ಮಾಹಿತಿಯನ್ನು ಪೊಲೀಸರು ನೀಡಿದ್ದಾರೆ.

In relationship with an incident in which a couple had bought gold ornaments worth Rs seven lac from a jewellery store at Gurpur Kaikamba by issuing a fake cheque, a woman from Kuppepadavu involved with the crime was arrested from a house in Ullal Darmanagara by the Bajpe police.