ಬ್ರೇಕಿಂಗ್ ನ್ಯೂಸ್
22-03-23 03:26 pm Mangaluru Correspondent ಕರಾವಳಿ
ಮಂಗಳೂರು, ಮಾ.22: ನಗರದ ಪಂಪ್ವೆಲ್ ಮೇಲ್ಸೇತುವೆಯ ಒಂದು ಭಾಗದಲ್ಲಿ ರಸ್ತೆ ಕುಗ್ಗುತ್ತಾ ಹೋಗಿದ್ದರಿಂದ ಹೆದ್ದಾರಿ ಇಲಾಖೆಯಿಂದ ತುರ್ತು ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಬುಧವಾರ ಮಧ್ಯಾಹ್ನ ಎಕ್ಕೂರು ಕಡೆಯಿಂದ ಮೇಲ್ಸೇತುವೆಗೆ ಎಂಟ್ರಿ ಕೊಡುವಲ್ಲಿ ರಸ್ತೆಯನ್ನು ಬ್ಲಾಕ್ ಮಾಡಿಸಿ ಹೆಚ್ಚುವರಿಯಾಗಿ ಡಾಮರು ಹಾಕಲಾಗಿದೆ.
ನಂತೂರಿನಿಂದ ಮೇಲ್ಸೇತುವೆ ಕಳೆದು ಇಂಡಿಯಾನ ಆಸ್ಪತ್ರೆಯ ಮುಂಭಾಗದ ಪ್ರದೇಶದಲ್ಲಿ ರಸ್ತೆಯ ತಳಪಾಯ ಕುಸಿದಿದ್ದು, ಕುಗ್ಗುತ್ತಾ ಹೋಗಿತ್ತು. ಇದರಿಂದಾಗಿ ಮಳೆ ನೀರು ನಿಲ್ಲುವುದು ಒಂದೆಡೆಯಾದರೆ, ವೇಗದಲ್ಲಿ ಬರುತ್ತಿದ್ದ ವಾಹನಗಳು ಅಲ್ಲಿ ಕುಸಿತದಿಂದಾಗಿ ಉಂಟಾಗಿದ್ದ ಕೃತಕ ಹಂಪ್ಸ್ ನಿಂದ ಅಪಘಾತಕ್ಕೆ ಕಾರಣವಾಗುತ್ತಿತ್ತು. ಹೀಗಾಗಿ ರಸ್ತೆಯ ಎರಡೂ ಭಾಗದಲ್ಲಿ ರಸ್ತೆಯನ್ನು ಮತ್ತೊಮ್ಮೆ ಡಾಮರು ಹಾಕಿಸಿ ಎತ್ತರಿಸಿದ್ದಾರೆ.




ರಸ್ತೆಯ ತಳಪಾಯದ ಕೆಲಸ ಸರಿಯಾಗಿ ಆಗದೇ ಇರುವುದು ಈ ರೀತಿ ಕುಸಿಯಲು ಕಾರಣ. ಕಳಪೆ ಕಾಮಗಾರಿ, ಪಂಪ್ವೆಲ್ ಸೇತುವೆಯ ಕೆಲಸ ವಿಳಂಬವಾಗಿದ್ದಕ್ಕೆ ವಿರೋಧಿ ಕೂಗೆದ್ದಿದ್ದರಿಂದ ಎರಡು ವರ್ಷಗಳ ಹಿಂದೆ ತುರ್ತಾಗಿ ಬಿಟ್ಟು ಕೊಡಲಾಗಿತ್ತು. ಈಗ ಎರಡೇ ವರ್ಷದಲ್ಲಿ ರಸ್ತೆಯ ಭಾಗ ಕುಸಿದು ನಿಂತಿದ್ದು ಅಲ್ಲಿ ಡಾಮರು ಹಾಕಿ ಎತ್ತರಿಸಲಾಗಿದೆ. ರಸ್ತೆಯ ಉದ್ದಕ್ಕೂ ಆ ರೀತಿಯ ಉಬ್ಬು ತಗ್ಗುಗಳಿದ್ದು, ವಾಹನ ಸವಾರಿ ಸಂದರ್ಭ ಇದು ಅನುಭವಕ್ಕೆ ಬರುತ್ತದೆ. ಕಾಮಗಾರಿ ಸಲುವಾಗಿ ಮೇಲ್ಸೇತುವೆಯಲ್ಲಿ ವಾಹನಗಳನ್ನು ತಡೆದಿದ್ದರಿಂದ ಸರ್ವಿಸ್ ರಸ್ತೆಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು.
Road collapses at Pumpwell bridge in Mangalore, vehicles diverted to the service road
02-11-25 11:09 pm
HK News Desk
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
'ನವೆಂಬರ್ ಕ್ರಾಂತಿ' ಮುನ್ಸೂಚನೆ ನೀಡಿದ್ದ ರಾಜಣ್ಣ ಅಖ...
31-10-25 06:02 pm
ಧರ್ಮಸ್ಥಳ ಕೇಸ್ ; ಮಹೇಶ್ ಶೆಟ್ಟಿ ತಿಮರೋಡಿ ತಂಡದ ಮೇಲ...
30-10-25 11:00 pm
02-11-25 11:12 pm
HK News Desk
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
ಭಾರತ ಮೂಲದ ಅನಿಲ್ ಕುಮಾರ್ ಬೊಲ್ಲಗೆ 240 ಕೋಟಿ ಮೊತ್ತ...
28-10-25 10:23 pm
02-11-25 10:23 pm
Mangalore Correspondent
ಮಂಗಳೂರು ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಕೂಟಕ್ಕೆ ತೆ...
02-11-25 06:57 pm
ವೆನ್ಲಾಕ್, ಲೇಡಿಗೋಷನ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ...
02-11-25 06:51 pm
ಪುತ್ತೂರಿನಲ್ಲಿ ಆಟೋ - ಕಾರು ಮುಖಾಮುಖಿ ಡಿಕ್ಕಿ ; ಆಟ...
01-11-25 11:05 pm
ಉಡುಪಿ - ಕಾಸರಗೋಡು 440 ಕೆವಿ ವಿದ್ಯುತ್ ಲೈನ್ ; ಕೃಷ...
01-11-25 11:02 pm
01-11-25 07:25 pm
HK News Desk
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm
ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ; 11 ಆರೋಪಿಗಳ ವಿರುದ್...
31-10-25 10:57 pm
ಮುಂಬೈನಲ್ಲಿ 17 ಮಕ್ಕಳನ್ನು ಒತ್ತೆಯಾಳಾಗಿಸಿದ್ದ ವ್ಯಕ...
31-10-25 12:55 pm