ಬ್ರೇಕಿಂಗ್ ನ್ಯೂಸ್
22-03-23 09:02 pm Mangalore Correspondent ಕರಾವಳಿ
ಮಂಗಳೂರು, ಮಾ.22 : ಹೊರ ಗುತ್ತಿಗೆ ನೌಕರರು, ಪೌರ ಕಾರ್ಮಿಕರು ತಮ್ಮ ನೇರ ನೇಮಕಾತಿ, ನೇರ ಪಾವತಿಗೆ ಆಗ್ರಹಿಸಿ ಮುಷ್ಕರ ನಡೆಸುತ್ತಿದ್ದು ಬುಧವಾರ ಹತ್ತನೇ ದಿನಕ್ಕೆ ಕಾಲಿಟ್ಟಿದೆ. ಇದರಿಂದಾಗಿ ನಗರ ಭಾಗದಲ್ಲಿ ತ್ಯಾಜ್ಯ ರಾಶಿ ಬೀಳುತ್ತಿದ್ದು ಮಂಗಳೂರು ಸ್ಮಾರ್ಟ್ ಸಿಟಿ ಗಬ್ಬು ನಾರುವಂತಾಗಿದೆ. ಅಪಾರ್ಟ್ಮೆಂಟ್, ಹೊಟೇಲ್ ಮುಂದೆ ರಾಶಿ ಬಿದ್ದ ತ್ಯಾಜ್ಯ ಸಂಗ್ರಹಕ್ಕೆ ಮಹಾನಗರ ಪಾಲಿಕೆಯಿಂದ ಪರ್ಯಾಯ ವ್ಯವಸ್ಥೆ ಮಾಡಿದರೂ, ರಸ್ತೆ ಬದಿಗಳಲ್ಲಿ ಕಸದ ರಾಶಿ ದಾರಿಹೋಕರ ಮೂಗಿಗೆ ವಿಚಿತ್ರ ವಾಸನೆ ಬಡಿಯತೊಡಗಿದೆ.
ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ಮಂಗಳೂರಿನ ಪಾಲಿಕೆಯಲ್ಲಿ 60 ವಾರ್ಡ್ಗಳಿಗೆ ಕಸ ಸಂಗ್ರಹದ ಹೊಣೆಯನ್ನು ಆಯಾ ಭಾಗದ ಕಾರ್ಪೊರೇಟರ್ ಗಳಿಗೆ ವಹಿಸಲಾಗಿದೆ. ಹೀಗಾಗಿ ಕಾರ್ಪೊರೇಟರ್ ಉಸ್ತುವಾರಿಯಲ್ಲಿ ಕಸ ಸಂಗ್ರಹದ ವಾಹನಗಳು ಓಡಾಡಿದರೂ ಪೂರ್ತಿಯಾಗಿ ಕಸ ತೆಗೆಯಲು ಸಾಧ್ಯವಾಗುತ್ತಿಲ್ಲ. ಒಂದು ವಾರದಿಂದ ಕಸದ ರಾಶಿ ಬಿದ್ದಿರುವುದು, ಕೆಲವು ಕಡೆ ರಸ್ತೆ ಬದಿಗಳಲ್ಲಿ ಕಸವನ್ನು ಸುರಿಯುವ ಕೃತ್ಯ ಏರಿಕೆ ಕಂಡಿದೆ.
ದೊಡ್ಡ ಕಟ್ಟಡ, ಹೋಟೆಲ್, ಕೆಲವು ಅಪಾರ್ಟ್ಮೆಂಟ್ ಆಸುಪಾಸಿನಲ್ಲಿ ಹೆಚ್ಚು ತ್ಯಾಜ್ಯ ಸಂಗ್ರಹವಾಗುತ್ತಿದ್ದು ತ್ಯಾಜ್ಯ ವಿಲೇವಾರಿ ಸವಾಲಾಗಿದೆ. ಜೊತೆಗೆ, ಮನೆ ಮನೆಯ ಕಸ ಸಂಗ್ರಹವೂ ಆಗುತ್ತಿಲ್ಲ. ಕಾರ್ಮಿಕರ ಮುಷ್ಕರಕ್ಕೆ ಬೆಂಬಲವಾಗಿ ಕಾಂಗ್ರೆಸ್ ಸೇರಿದಂತೆ ಸಮಾನ ಮನಸ್ಕರಿಂದ ಪ್ರತಿಭಟನೆ ನಡೆಯುತ್ತಿದ್ದು, ರಾಜ್ಯ ಸರ್ಕಾರಕ್ಕೆ ಕಗ್ಗಂಟು ಮಾಡಿದೆ.
ರಾಜ್ಯದೆಲ್ಲೆಡೆಯ ನಗರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ನೌಕರರ ನೇರಪಾವತಿಗೆ ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಯುತ್ತಿದೆ. ಸ್ಥಳಕ್ಕೆ ಭೇಟಿ ನೀಡಿದ ಕರ್ನಾಟಕ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ.ಶಿವಣ್ಣ ಕೋಟೆ, ಹೊರಗುತ್ತಿಗೆ ಕಾರ್ಮಿಕರ ಜತೆ ಮಾತುಕತೆ ನಡೆಸಿಕೊಂಡು ಮಹತ್ವದ ನಿರ್ಧಾರಗಳಿಗೆ ಆದೇಶ ಕೊಡಿಸುವ ಭರವಸೆ ನೀಡಿದ್ದಾರೆ. ಕಸದ ವಾಹನ ಚಾಲಕರು, ಯುಜಿಡಿ ಕಾರ್ಮಿಕರು ಸೇರಿದಂತೆ ಎಲ್ಲರನ್ನು ನೇರಪಾವತಿಗೆ ತರಲು ಮಾ.24ರಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿಅಂಗೀಕಾರ ಪಡೆಯಲಾಗುವುದು ಎಂದಿದ್ದಾರೆ.
Sanitation workers protest steps into 10th day, Mangalore city filled with garbage, residents face issues.
26-07-24 10:39 pm
HK News Desk
Greater Bengalore, DK Shivakumar: ರಾಮನಗರ ಇನ್ನ...
26-07-24 09:58 pm
MUDA Scam, Byrathi Suresh: ಕೇಂದ್ರ ಸಚಿವ ಕುಮಾರಸ...
26-07-24 09:27 pm
Shalini Rajneesh, Rajneesh Goyal: ಮುಖ್ಯ ಕಾರ್ಯ...
26-07-24 09:00 pm
Bangalore bike wheelie: ಬೆಂಗಳೂರಿನಲ್ಲಿ ಹೆಚ್ಚಾಯ...
26-07-24 08:50 pm
26-07-24 05:51 pm
HK News Desk
ಬಯಲು ಶೌಚಕ್ಕೆ ಹೋದವನ ಕತ್ತಿಗೆ ಸುತ್ತಿಕೊಂಡ 13 ಅಡಿ...
25-07-24 01:03 pm
ನೇಪಾಳ ; ಟೇಕಾಫ್ ವೇಳೆ ರನ್ ವೇನಲ್ಲೇ ಹೊತ್ತಿ ಉರಿದ...
24-07-24 01:48 pm
ಪ್ಯಾರಿಸ್ ಒಲಿಂಪಿಕ್ಸ್ ಗೆ ಭಯೋತ್ಪಾದಕ ದಾಳಿ ಬೆದರಿಕೆ...
24-07-24 12:25 pm
IAS Wife Suicide, Rowdy, Crime; ರೌಡಿ ಹಿಂದೆ ಓಡ...
23-07-24 08:45 pm
27-07-24 02:09 pm
Mangalore Correspondent
Ankola Landslide, Eshwar Malpe team: ಅಂಕೋಲಾ ಗ...
27-07-24 01:47 pm
ಎಡಕುಮೇರಿ ಬಳಿ ರೈಲು ಹಳಿಗೆ ಭೂಕುಸಿತ ; ಮಂಗಳೂರು- ಬೆ...
26-07-24 10:24 pm
Mangalore rain, Uchila, Someshwara beach: ಸೋಮ...
26-07-24 09:06 pm
Mangalore Liquid Lounge News: ವಿದ್ಯಾರ್ಥಿಗಳೇ ಬ...
26-07-24 05:07 pm
26-07-24 03:42 pm
Bangalore Correspondent
Mangalore Jail Raid: ನಸುಕಿನಲ್ಲಿ ಮಂಗಳೂರು ಜೈಲಿಗ...
25-07-24 11:44 am
Shivamogga Murder News: ಪ್ರೀತಿಸಿದ ಯುವತಿಯನ್ನೇ...
24-07-24 06:45 pm
Bangalore PG Murder: ಬೆಂಗಳೂರು ; ಲೇಡಿಸ್ ಪಿಜಿಗೆ...
24-07-24 05:09 pm
Ramnagara rape, crime: ಐಸ್ಕ್ರೀಮ್ ಕೊಡಿಸೋ ನೆಪ...
23-07-24 03:03 pm