ಬ್ರೇಕಿಂಗ್ ನ್ಯೂಸ್
04-04-23 01:21 pm Mangalore Correspondent ಕರಾವಳಿ
ಮಂಗಳೂರು, ಎ.4 : ಮಾನವೀಯ ಕಾರ್ಯಕ್ಕೆ ಮನಸ್ಸು ಮುಖ್ಯ ಅಂತಾರೆ. ಇಲ್ಲೊಬ್ಬರು ವೃದ್ಧ ಮಹಿಳೆ ತನ್ನ ಮನೆ ಬಳಿಯ ರೈಲು ಹಳಿಯಲ್ಲಿ ಬೃಹತ್ ಮರ ಬಿದ್ದಿರುವುದನ್ನು ಕಂಡು ತಾನೇ ತರಾತುರಿಯಲ್ಲಿ ಕೆಂಪು ವಸ್ತ್ರ ತೋರಿಸಿ ರೈಲು ನಿಲ್ಲಿಸಿ ಸಂಭಾವ್ಯ ಅನಾಹುತ ತಪ್ಪಿಸಿದ ಘಟನೆ ನಡೆದಿದೆ.
ಮಂಗಳೂರು ಹೊರವಲಯದ ಪಚ್ಚನಾಡಿ ಸಮೀಪದ ಮಂದಾರ ಬಳಿಯ ನಿವಾಸಿ, 70 ವರ್ಷದ ಚಂದ್ರಾವತಿ ಸಮಯ ಪ್ರಜ್ಞೆ ಮೆರೆದ ಮಹಿಳೆ. ಮನೆ ಬಳಿಯ ತೋಟಕ್ಕೆ ತೆರಳಿದ್ದ ಮಹಿಳೆ ರೈಲು ಹಳಿಗೆ ಮರ ಬಿದ್ದಿರುವುದನ್ನು ಗಮನಿಸಿದ್ದಾರೆ. ಮನೆಗೆ ತೆರಳಿ ಅಕ್ಕಪಕ್ಕದವರನ್ನು ಫೋನ್ ಮಾಡಿ ಕರೆಯೋಣ ಎಂದು ದಾಪುಗಾಲು ಹಾಕುತ್ತಿದ್ದಾಗಲೇ ಮಹಿಳೆಗೆ ರೈಲಿನ ಹಾರನ್ ಕೇಳಿಸಿತ್ತು.
ಕೂಡಲೇ ಮನೆಗೆ ತೆರಳಿದ ಮಹಿಳೆ, ಕೆಂಪು ಬಟ್ಟೆಯನ್ನು ಹಿಡಿದು ರೈಲು ಹಳಿಯತ್ತ ಓಡಿದ್ದಾರೆ. ರೈಲು ಬರುತ್ತಿದ್ದ ಜಾಗದಿಂದ ಇನ್ನೊಂದು ಬದಿಯ ಹಳಿಯಲ್ಲಿ ನಿಂತು ಕೆಂಪು ಬಟ್ಟೆ ತೋರಿಸಿ ಅಪಾಯದ ಮುನ್ಸೂಚನೆ ನೀಡಿದ್ದಾರೆ. ಇದನ್ನು ಗಮನಿಸಿದ ಲೋಕೋ ಪೈಲಟ್ ರೈಲನ್ನು ನಿಧಾನಗೊಳಿಸಿದ್ದು ಹತ್ತಿರ ಬಂದಂತೆ ಮುಂದೆ ಹಳಿಗೆ ಅಡ್ಡಲಾಗಿ ಮರ ಬಿದ್ದಿರುವುದು ಕಂಡುಬಂದಿದೆ. ಆನಂತರ, ರೈಲು ನಿಲ್ಲಿಸಿ ರೈಲ್ವೇ ಸಿಬಂದಿ ಮತ್ತು ಸ್ಥಳೀಯರು ಸೇರಿ ಮರವನ್ನು ಕಡಿದು ತೆರವುಗೊಳಿಸಿದ್ದಾರೆ.
ರೈಲು ಹಳಿಗೆ ಮರ ಬಿದ್ದಿದ್ದನ್ನ ಕಂಡು ಸಂಭಾವ್ಯ ಅನಾಹುತ ತಪ್ಪಿಸಿದ ವೃದ್ಧ ಮಹಿಳೆಯನ್ನು ಸ್ಥಳೀಯರು ಮತ್ತು ರೈಲು ಸಿಬಂದಿ ಪ್ರಶಂಸೆ ಮಾಡಿದ್ದಾರೆ. ಮಂಗಳೂರು- ಮುಂಬೈ ಸಂಚರಿಸುವ ಮತ್ಸ್ಯಗಂಧ ಎಕ್ಸ್ಪ್ರೆಸ್ ರೈಲು ಅದಾಗಿದ್ದು ವೇಗವಾಗಿ ಮರದ ಮೇಲಿನಿಂದ ತೆರಳುತ್ತಿದ್ದರೆ ಹಳಿ ತಪ್ಪುವ ಅಪಾಯ ಇತ್ತು.
Mangalore 70 year old woman averts major train accident at Pachanady betweens Padil Jokatte. Chandravati, who lives in Mandara near Pachanady, noticed a tree had fallen on the train track just as the Matsyagandha train was making its way from Mangaluru to Mumbai.
05-09-26 04:53 pm
HK News Staffer
400 ಪಶು ವೈದ್ಯಾಧಿಕಾರಿಗಳ ನೇಮಕಾತಿ ಹಗರಣ ; ಪ್ರತಿ ಹ...
02-09-26 05:06 pm
ಬಿಗ್ ಬಾಸ್ ಸೀಸನ್ 13 ಆರಂಭಕ್ಕೂ ಮುನ್ನ ಸಂಕಷ್ಟ ; ಪ...
31-08-26 08:29 pm
ಇಸ್ಲಾಂ ಶ್ರೇಷ್ಠ ಧರ್ಮ, ನಾನು ಮಠ ಮಂದಿರ ಹೋಗಲ್ಲ, ಹಜ...
30-08-26 10:09 pm
ADGP Chandrashekhar, Seemanth Kumar Singh: ಅಧ...
30-08-26 07:31 pm
05-09-26 11:55 am
HK News Staffer
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
ಹಾರಾಟದ ವೇಳೆ ಪೈಲೆಟ್ ಅಸ್ವಸ್ಥ ; ದೋಹಾ - ಬೆಂಗಳೂರು...
03-09-26 07:27 pm
ಅಯೋಧ್ಯೆ ರಾಮ ಮಂದಿರಕ್ಕೆ ನೂತನ ಸಿಇಓ ಆಗಿ ನಿವೃತ್ತ ಏ...
02-09-26 08:31 pm
ಸ್ಲೀಪರ್ ಬಸ್ನಲ್ಲಿ ಬಾಲಕಿ ಮೇಲೆ ಅತ್ಯಾಚಾರ ; ಎಚ್ಚೆ...
02-09-26 07:16 pm
05-09-26 04:58 pm
HK News Staffer
ಬೆಂಗಳೂರು-ಮಂಗಳೂರು ವಂದೇ ಭಾರತ್ಗೆ ಮತ್ತೊಂದು ಟೆಸ್ಟ...
05-09-26 11:59 am
ಕೆಆರ್ ಐಡಿಎಲ್ ಕಮಿಷನ್ ಆರೋಪದಿಂದ ಮಾನಸಿಕ ಕಿರುಕುಳ,...
04-09-26 04:44 pm
Blinkit Raid, Mangalore: ಬ್ಲಿಂಕ್ ಇಟ್ ಆನ್ಲೈನ್...
03-09-26 10:19 pm
ಮುಂದಿನ ಬಾರಿ ಅಶೋಕ ರೈ ವಿರುದ್ಧ ತಾನೇ ಸ್ಪರ್ಧಿಸುತ್ತ...
03-09-26 09:10 pm
05-09-26 08:58 pm
HK News Staffer
ಶಿವಮೊಗ್ಗ ; ಕಾರಿನಲ್ಲಿ ಜಿಂಕೆ ಮಾಂಸ ಮಾರಾಟ ಯತ್ನ ;...
05-09-26 04:55 pm
ಬಡ್ಡಿ ಕಟ್ಟದಿದ್ದಕ್ಕೆ ಮಹಿಳೆಯನ್ನು ಅಪಹರಿಸಿ ಹಲ್ಲೆ...
05-09-26 03:08 pm
ಅಷ್ಟಮಿ ಭಜನಾ ಕಾರ್ಯಕ್ರಮದಲ್ಲಿ ಹೃದಯಾಘಾತ ; ತೊಕ್ಕೂರ...
05-09-26 02:04 pm
ತ್ರಿಶೂರ್ ನಲ್ಲಿ ಗುರುವಾಯೂರು ದರ್ಶನ ಮುಗಿಸಿ ಹೊರಟಿದ...
05-09-26 01:13 pm