ತೋಟಕ್ಕೆ ಕಾಡಾನೆ ಹಿಂಡು ; ತಿಂದು ತೇಗಿದ ಬಳಿಕ ಮರಿ ಬಿಟ್ಟುಹೋದ ತಾಯಾನೆ !

30-10-20 12:06 pm       Mangalore Correspondent   ಕರಾವಳಿ

ಆನೆಗಳ ಹಿಂಡು ತೋಟದಿಂದ ಮರಳಿ ಕಾಡಿಗೆ ಹೋಗುವ ವೇಳೆಗೆ ಮರಿಯಾನೆ ಉಳಿದು ಬಿಟ್ಟಿದೆ.

ಬೆಳ್ತಂಗಡಿ, ಅಕ್ಟೋಬರ್ 30: ತೋಟಕ್ಕೆ ನುಗ್ಗಿದ ಕಾಡಾನೆಗಳ ಹಿಂಡಿನಲ್ಲಿದ್ದ ಆನೆಮರಿ ವಾಪಸ್ ಹೋಗಲಾಗದೆ ತೋಟದಲ್ಲಿ ಉಳಿದು ಬಿಟ್ಟ ಘಟನೆ ತಾಲೂಕಿನ ಕಡಿರುದ್ಯಾವರದಲ್ಲಿ ನಡೆದಿದೆ. 

ಕಡಿರುದ್ಯಾವರ ಗ್ರಾಮದ ಡೀಕಯ್ಯ ಗೌಡ ಎಂಬವರ ತೋಟಕ್ಕೆ ನಿನ್ನೆ ರಾತ್ರಿ ಆನೆಗಳ ಹಿಂಡು ನುಗ್ಗಿದ್ದು ಅಡಿಕೆ ತೋಟವನ್ನು ನಾಶ ಮಾಡಿದೆ. ಆದರೆ ಆನೆಗಳ ಹಿಂಡು ತೋಟದಿಂದ ಮರಳಿ ಕಾಡಿಗೆ ಹೋಗುವ ವೇಳೆಗೆ ಮರಿಯಾನೆ ಉಳಿದು ಬಿಟ್ಟಿದೆ. ಆನೆಯ ಮರಿ ತೋಟದಲ್ಲೇ ಉಳಿದು ತಾಯಿ ಆನೆಗಾಗಿ ಕರೆಯುತ್ತಾ ಊಳಿಡುತ್ತಿರುವುದು ಕಂಡುಬಂದಿದೆ. 

ಡೀಕಯ್ಯ ಗೌಡರು ಬೆಳಗ್ಗೆ ತೋಟಕ್ಕೆ ಹೋದಾಗ, ಆನೆ ಮರಿ ತೋಟದಲ್ಲಿ ಇರುವುದನ್ನು ಗಮನಿಸಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಕುತೂಲಹಲದಿಂದ ಜನರೂ ಭೇಟಿ ನೀಡುತ್ತಿದ್ದಾರೆ.

A wild baby elephant was found inside farmland in Belthanagady after its mother destroys the farm and leaving its baby abandoned.