ಕೊರೊನಾ ಎಫೆಕ್ಟ್ ; ಸಾಲದ ಚಿಂತೆಯಲ್ಲಿ ಆಟೋ ಚಾಲಕ ಆತ್ಮಹತ್ಯೆ

30-10-20 12:49 pm       Mangalore Reporter   ಕರಾವಳಿ

ಕೊರೊನಾ ಕಾರಣ ಸಾಲ ಮರು ಪಾವತಿಸಲು ಆಗದ ಚಿಂತೆಯಲ್ಲಿ ಪಡುಬಿದ್ರಿಯ ಆಟೋ ಚಾಲಕರೋರ್ವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

ಪಡುಬಿದ್ರಿ, ಅಕ್ಟೋಬರ್ 30 : ಕೊರೊನಾ ಕಾರಣ ಸಾಲ ಮರು ಪಾವತಿಸಲು ಆಗದ ಚಿಂತೆಯಲ್ಲಿ ಪಡುಬಿದ್ರಿಯ ಆಟೋ ಚಾಲಕರೋರ್ವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

ಆತ್ಮಹತ್ಯೆ ಮಾಡಿಕೊಂಡ ರಿಕ್ಷಾ ಚಾಲಕ ಎಂ. ಸತೀಶ್ ಪೂಜಾರಿ (58) ಎಂಬವರಾಗಿದ್ದು ಈ ಹಿಂದೆ ಬಸ್ ಚಾಲಕರಾಗಿದ್ದರು. ಬಳಿಕ  ಪಡುಬಿದ್ರಿಯಲ್ಲಿ ಆಟೋ ರಿಕ್ಷಾ ಚಾಲಕರಾಗಿ ತೊಡಗಿಸಿದ್ದರು. ಸ್ವಂತ ರಿಕ್ಷಾ ಹೊಂದಲು ಹಾಗೂ ಅನಾರೋಗ್ಯಕ್ಕಾಗಿ ಈ ಹಿಂದೆ ವಿವಿಧೆಡೆ ಸಾಲ ಪಡೆದಿದ್ದ ಅವರು, ಪಡುಬಿದ್ರಿ ಪೆಟ್ರೋಲ್ ಬಂಕ್‍ ಬಳಿ ಅ.27ರಂದು ವಿಷ ಸೇವಿಸಿದ್ದರು. ವಿಷ ಸೇವನೆ ಬಗ್ಗೆ ತಿಳಿದ ಇನ್ನೊಬ್ಬ ಆಟೋ ಚಾಲಕ, ತಕ್ಷಣ ಅವರನ್ನು ಚಿಕಿತ್ಸೆಗಾಗಿ ಉಡುಪಿ ಜಿಲ್ಲಾಸ್ಪತ್ರೆಗೆ ಸಾಗಿಸಿದ್ದರು. ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Coronavirus lockdown effect Auto driver from Padubidri commits suicide due to financial crises.