ಮಂಗಳೂರಿನಲ್ಲಿ ಕೇಸರಿ ರಂಗವಲ್ಲಿ ; ಬರುತ್ತಿದ್ದಾರೆ ಸಿಎಂ ಸೇರಿ ಬಿಜೆಪಿ ದಂಡು

04-11-20 04:11 pm       Mangalore Correspondent   ಕರಾವಳಿ

ಕೇಸರಿ ಪಾಳಯದ ಶಕ್ತಿಕೇಂದ್ರ ಎಂದೇ ಹೆಸರಾಗಿರುವ ಮಂಗಳೂರು ನಗರ ಕೇಸರಿಯಿಂದ ಕಂಗೊಳಿಸಿದೆ.

ಮಂಗಳೂರು, ನವೆಂಬರ್ 04: ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ ನಡೆಯುವ ಹಿನ್ನೆಲೆಯಲ್ಲಿ ಕೇಸರಿ ಪಾಳಯದ ಶಕ್ತಿಕೇಂದ್ರ ಎಂದೇ ಹೆಸರಾಗಿರುವ ಮಂಗಳೂರು ನಗರ ಕೇಸರಿಯಿಂದ ಕಂಗೊಳಿಸಿದೆ.

ಮಂಗಳೂರು ನಗರದ ಪ್ರಮುಖ ವೃತ್ತಗಳಲ್ಲಿ ಕೇಸರಿ ಬಂಟಿಂಗ್ಸ್ ಗಳು, ಬಿಜೆಪಿ ಬಾವುಟಗಳು ಹಾರಾಡ ತೊಡಗಿವೆ. ಪ್ರಮುಖ ವೃತ್ತಗಳಾದ ನವಭಾರತ್ ಸರ್ಕಲ್, ಪಿವಿಎಸ್, ಮಲ್ಲಿಕಟ್ಟೆ ವೃತ್ತಗಳಲ್ಲಿ ಬಿಜೆಪಿ ಪತಾಕೆಗಳು, ತೋರಣಗಳು ರಾರಾಜಿಸುತ್ತಿವೆ. ಅಲ್ಲದೆ, ಪಿವಿಎಸ್ ವೃತ್ತದ ಬಳಿಯಿರುವ ಬಿಜೆಪಿ ಜಿಲ್ಲಾ ಕಚೇರಿ ವಿದ್ಯುತ್ ದೀಪಗಳಿಂದ ಅಲಂಕಾರಗೊಂಡಿದ್ದು ಸಂಜೆಯಾಗುತ್ತಲೇ ಝಗಮಗಿಸುತ್ತಿದೆ.

ಪಿವಿಎಸ್ ವೃತ್ತದ ಬಳಿಯಿಂದ ಕಾರ್ಯಕಾರಿಣಿ ಸಭೆ ನಡೆಯುವ ರಮಣ್ ಪೈ ಸಭಾಂಗಣದ ಬಳಿಯ ನವಭಾರತ ವೃತ್ತದ ವರೆಗೆ ಪ್ರಧಾನಿ ಮೋದಿ, ಯಡಿಯೂರಪ್ಪ, ಸಿ.ಟಿ. ರವಿ, ನಳಿನ್ ಕುಮಾರ್ ಸೇರಿ ಬಿಜೆಪಿ ನಾಯಕರ ಕಟೌಟ್ ಗಳನ್ನು ಹಾಕಲಾಗಿದ್ದು, ಕೇಸರಿ ಕಾರ್ಯಕರ್ತರು ಮ್ತತು ನಾಯಕರು ಭಾರೀ ಸಿದ್ಧತೆಯಲ್ಲಿ ತೊಡಗಿದ್ದಾರೆ.

ಇಂದು ರಾತ್ರಿಯೇ ಸಿಎಂ ಯಡಿಯೂರಪ್ಪ, ಕೇಂದ್ರ ಸಚಿವ ಪ್ರಹ್ಲಾದ ಜೋಷಿ, ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ.ರವಿ ಸೇರಿದಂತೆ ರಾಜ್ಯದ ಆಯ್ದ ಸಚಿವರು, ಪ್ರಮುಖ ನಾಯಕರು ಮಂಗಳೂರಿಗೆ ಬರಲಿದ್ದಾರೆ.

State executive meeting of the BJP is slated to be organized in the city on November 5. The city has been extensively decorated for extending a warm welcome to the chief minister (CM) and other dignitaries who would be taking part in these events.