ಬಂಟ್ವಾಳ ; ಪುತ್ತೂರಿನ ಯುವಕ ನೇತ್ರಾವತಿ ನದಿಗೆ ಹಾರಿದ ಶಂಕೆ, ಪೊಲೀಸರ ಹುಡುಕಾಟ

08-11-20 11:27 am       Mangaluru Correspondent   ಕರಾವಳಿ

ಯುವಕನೊಬ್ಬ ಪಾಣೆಮಂಗಳೂರು ಬಳಿಯ ನೇತ್ರಾವತಿ ಸೇತುವೆಯಿಂದ ನದಿಗೆ ಹಾರಿದ ಘಟನೆ ನಡೆದಿದೆ.

ಬಂಟ್ವಾಳ, ನವೆಂಬರ್ 8: ಯುವಕನೊಬ್ಬ ಪಾಣೆಮಂಗಳೂರು ಬಳಿಯ ನೇತ್ರಾವತಿ ಸೇತುವೆಯಿಂದ ನದಿಗೆ ಹಾರಿದ ಘಟನೆ ನಡೆದಿದೆ.

ಬಿ.ಸಿ.ರೋಡಿನಿಂದ ಮುಂದೆ ಸಿಗುವ ಹೊಸ ಸೇತುವೆಯಿಂದ‌ ಯುವಕ ನದಿಗೆ ಹಾರಿರುವುದನ್ನು ವಾಹನ ಪ್ರಯಾಣಿಕರು ಗಮನಿಸಿದ್ದಾರೆ. ಬ್ಯಾಗ್ ಹಾಕಿಕೊಂಡು ನಡೆದುಕೊಂಡು ಬರುತ್ತಿದ್ದ ವ್ಯಕ್ತಿ ಬ್ಯಾಗನ್ನು ಸೇತುವೆಯಲ್ಲಿ ಬಿಟ್ಟು ನದಿಗೆ ಹಾರಿದ್ದಾನೆ. ಯುವಕ ನದಿಗೆ ಹಾರುತ್ತಿರುವುದನ್ನು ಬೆಂಗಳೂರು ಕಡೆಗೆ ಪ್ರಯಾಣ ಮಾಡುತ್ತಿದ್ದ ಕಾರಿನಲ್ಲಿದ್ದ ಪ್ರಯಾಣಿಕರು ನೋಡಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂಟ್ವಾಳ ನಗರ ಠಾಣಾ ಪೊಲೀಸರು ಭೇಟಿ ನೀಡಿದ್ದಾರೆ. 

ಬ್ಯಾಗ್ ಗಮನಿಸಿದಾಗ ಅದರಲ್ಲಿ ಆಧಾರ್ ಕಾರ್ಟ್, ವೋಟರ್ ಐಡಿ ಸೇರಿ ಕೆಲವು ದಾಖಲೆ ಪತ್ರಗಳು ದೊರೆತಿವೆ. ಆಧಾರ್ ಕಾರ್ಡ್ ನಲ್ಲಿ ಪುತ್ತೂರು ತಾಲೂಕಿನ ಬಲ್ನಾಡು ನಿವಾಸಿ ಸುಚೇತನ್ (27) ಎಂದು ಇದೆ. ಇದೇ ಆಧಾರ್ ಕಾರ್ಡ್ ಹೊಂದಿರುವ ಯುವಕನೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆಯೇ ಎಂದು ದೃಢಪಟ್ಟಿಲ್ಲ. ಬಂಟ್ವಾಳ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಬ್ಯಾಗನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

A man jumped into Netravati River at Bantwal over-bridge on the early hours of Sunday, November 07. The dead has been identified as Suchethan from Puttur. His Bag and documents were found near the bridge in which police and rescue team have started the search operations.