ಬ್ರೇಕಿಂಗ್ ನ್ಯೂಸ್
11-11-20 05:49 pm Mangalore Correspondent ಕರಾವಳಿ
ಮಂಗಳೂರು, ನವೆಂಬರ್ 11 : ಪೊಲೀಸ್, ಆರೋಗ್ಯ, ಅಗ್ನಿಶಾಮಕ ಸೇರಿದಂತೆ ಯಾವುದೇ ತುರ್ತು ಸೇವೆಗಳಿಗೆ ದೇಶಕ್ಕೊಂದೇ ನಂಬರ್ ಜಾರಿಗೆ ಬಂದಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ವಿನೂತನ ಸೇವೆ ಇನ್ನೆರಡೇ ದಿನದಲ್ಲಿ ಜಾರಿಗೆ ಬರಲಿದೆ. ಈ ಯೋಜನೆಗೆ ಸಾರ್ವಜನಿಕರಿಂದ ಉತ್ತಮ ಪ್ರಶಂಸೆ ವ್ಯಕ್ತವಾಗಿದೆ.
ಪ್ರಧಾನಿ ನರೇಂದ್ರ ಮೋದಿಯವರ ದೇಶಕ್ಕೊಂದೇ ನಂಬರ್ ಪರಿಕಲ್ಪನೆ ಇದಾಗಿದ್ದು, ಬೆಂಕಿ ಅವಘಡ, ಅನಾರೋಗ್ಯ, ನೀರಿಗೆ ಬಿದ್ದಿರುವುದು, ಕಾನೂನು ಸುವ್ಯವಸ್ಥೆ, ಮಹಿಳಾ, ಮಕ್ಕಳ, ಹಿರಿಯ ನಾಗರಿಕರ ಹಾಗೂ ಇನ್ನಿತರ ಯಾವುದೇ ತುರ್ತು ಸಮಸ್ಯೆಗಳಿದ್ದರೂ ಸಾರ್ವಜನಿಕರು 112 ನಂಬರ್ಗೆ ಡಯಲ್ ಮಾಡಬಹುದಾಗಿದೆ. ಹಿಂದೆ ಪೊಲೀಸ್, ಅಗ್ನಿಶಾಮಕ, ಆಂಬುಲೆನ್ಸ್ಗೆ ಪ್ರತ್ಯೇಕ ನಂಬರ್ಗಳಿದ್ದು ಈಗ ಎಲ್ಲವೂ ಒಂದೇ ನಂಬರಿನಡಿ ಬರಲಿದೆ.
ಸೆಂಟ್ರಲೈಝ್ ಸಿಸ್ಟಮ್
112 ನಂಬರಿಗೆ ಕರೆ ಮಾಡಿದಾಗ ಬೆಂಗಳೂರಿನಲ್ಲಿ ಕಂಟ್ರೋಲ್ ರೂಮ್ಗೆ ಸಂದೇಶ ರವಾನೆಯಾಗುತ್ತದೆ. ಬೆಂಗಳೂರಿನಲ್ಲಿ ಪರಿಣತ, ತರಬೇತಿ ಪಡೆದ ಕಾಲ್ಸೆಂಟರ್ ಸಿಬ್ಬಂದಿ ಕರೆಯ ಮಾಹಿತಿಯನ್ನು ಕಲೆ ಹಾಕುತ್ತಾರೆ. ಬಳಿಕ ಕರೆ ಮಾಡಿದವರ ಲೊಕೇಷನ್ ಟ್ರ್ಯಾಪ್ ಮಾಡಿ ಮ್ಯಾಪ್ ಸಂಗ್ರಹಿಸಲಾಗುತ್ತದೆ. ಕರೆ ಮಾಡಿದ ವ್ಯಕ್ತಿ ಹೇಳಿದ ಸಮಸ್ಯೆಯ ಸಂಪೂರ್ಣ ಮಾಹಿತಿ ಪಡೆದ ಬಳಿಕ ಸಂಬಂಧಪಟ್ಟ ಕಂಟ್ರೋಲ್ ರೂಂ, ಪೊಲೀಸ್, ಅಂಬುಲೆನ್ಸ್, ಅಗ್ನಿಶಾಮಕ ಸಿಬ್ಬಂದಿಗೆ ವಿಷಯ ರವಾನಿಸಲಾಗುತ್ತದೆ.
ಎಸ್ಪಿ ವ್ಯಾಪ್ತಿಯಲ್ಲಿ 10 ವಾಹನ
ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ವ್ಯಾಪ್ತಿಯಲ್ಲಿ 10 ಪೊಲೀಸ್ ವಾಹನಗಳನ್ನು ಇದಕ್ಕಾಗಿ ನಿಯೋಜಿಸಲಾಗಿದ್ದು, ಈ ವಾಹನಗಳಲ್ಲಿ ಅತ್ಯಾಧುನಿಕ ವ್ಯವಸ್ಥೆಯ ಟ್ಯಾಬ್ ಅಳವಡಿಕೆ ಮಾಡಲಾಗುತ್ತದೆ. ವೋಲಾ, ಉಬರ್ ಮಾದರಿಯಲ್ಲೇ ಕಂಟ್ರೋಲ್ ರೂಂನಿಂದ 112 ನಂಬರಿನಲ್ಲಿ ಬಂದ ದೂರಿನ ಸಂದೇಶ, ರೂಟ್ ಮ್ಯಾಪ್ ಸಂಬಂಧಪಟ್ಟ ಎಲ್ಲ ಮಾಹಿತಿ ಲೋಕೇಷನ್ಗೆ ಹತ್ತಿರವಿರುವ ವಾಹನಕ್ಕೆ ರವಾನೆಯಾಗುತ್ತದೆ.
ಕ್ಷಿಪ್ರ ಕಾರ್ಯಾಚರಣೆ
ಮಾಹಿತಿ ಪಡೆದ ಕೂಡಲೇ ವಾಹನ ಘಟನಾ ಸ್ಥಳಕ್ಕೆ ತೆರಳಬೇಕು. ಆ ಮೇಲೆ ದೂರಿಗೆ ಸಂಬಂಧಿಸಿ ತಕ್ಷಣ ಪರಿಹಾರ ಕಾರ್ಯದ ಬಗ್ಗೆ ಸ್ಥಳೀಯ ಸ್ಟೇಷನ್, ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ದಿನದ 24 ಗಂಟೆಯೂ ಈ ಸೇವೆ ಲಭ್ಯವಿದೆ. ಯಾವುದೇ ಇಲಾಖೆಯ ತುರ್ತು ಸೇವೆಯಾದರೂ ಪೊಲೀಸರು ಮಾತ್ರ ಅಲ್ಲಿಗೆ ಹಾಜರಾಗಲೇಬೇಕು.
ತುರ್ತು ಕರೆಗೆ ಸೀಮಿತ
112 ಕರೆಯ ದೂರಿಗೆ ಸ್ಪಂದಿಸಲು ನಿಗದಿಪಡಿಸಿದ ವಾಹನವನ್ನು ಬೇರೆ ಯಾವುದಕ್ಕೂ ಬಳಕೆ ಮಾಡುವಂತಿಲ್ಲ. ಈ ವಾಹನಗಳು ಯಾವಾಗಲೂ ಹೈ-ಅಲರ್ಟ್ ಸ್ಥಿತಿಯಲ್ಲಿರಬೇಕು. ಬಂಟ್ವಾಳ ಸಬ್ಡಿವಿಷನ್ (ಬಂಟ್ವಾಳ, ವಿಟ್ಲ, ಬೆಳ್ತಂಗಡಿ) 5 ಹಾಗೂ ಪುತ್ತೂರು ಸಬ್ಡಿವಿಷನ್ (ಪುತ್ತೂರು, ಸುಳ್ಯ, ಕಡಬ) 5 ವಾಹನ ನಿಯೋಜಿಸಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.
ತುರ್ತು ಸೇವೆಗೆ 112 ಸಂಖ್ಯೆಗೆ ಡಯಲ್ ಮಾಡಿ, ಪ್ಯಾನಿಕ್ ಅಲರ್ಟ್ಗಾಗಿ ಸಾಮಾನ್ಯ ಫೋನಿನಲ್ಲಿ 5 ಅಥವಾ 9 ಸಂಖ್ಯೆಯನ್ನು ದೀರ್ಘ ಪ್ರೆಸ್ ಮಾಡಬೇಕು. ಮೊಬೈಲ್ನಲ್ಲಾದರೆ ಪವರ್ ಬಟನನ್ನು ಮೂರು ಬಾರಿ ವೇಗವಾಗಿ ಪ್ರೆಸ್ ಮಾಡುವುದು Emergency Response Support System (ERSS) ವೆಬ್ಸೈಟ್ ಮೂಲಕ ವಿನಂತಿ ಕಳುಹಿಸಬಹುದು. Emergency Report Centre (ERC)ಗೆ ಇಮೇಲ್ ಕಳುಹಿಸಬಹುದು. ''112" India mobile app, ಮೊಬೈಲ್ ಆಪ್ ಮೂಲಕ ವಿನಂತಿ ಕಳುಹಿಸಬಹುದು ಎಂದು ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.
112 Single Emergency helpline number to be launched in Dakshina Kannada in a period of two days. Single emergency helpline number '112' for immediate assistance services from the police (100), fire (101), health (108) and women (1090).
20-09-24 11:59 am
HK News Desk
Dinesh Gundu Rao: ವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕೆ...
19-09-24 10:42 pm
BJP MLA Munirathna, honeytrap, Blackmail: ಏಡ್...
19-09-24 08:42 pm
N Santosh Hegde: ಭ್ರಷ್ಟಾಚಾರ ಮಿತಿಮೀರಿದರೆ ದೇಶದಲ...
19-09-24 08:07 pm
Zameer Ahmed, Palestinian flag: ಪ್ಯಾಲೆಸ್ತೀನ್...
19-09-24 08:03 pm
20-09-24 04:42 pm
HK News Desk
CM Chandrababu Naidu, Tirupati laddoos: ತಿರುಪ...
19-09-24 09:51 pm
Lebanon blast, Pager; ಪೇಜರ್ ಸ್ಫೋಟ ಬೆನ್ನಲ್ಲೇ ವ...
19-09-24 11:42 am
ಸ್ಮಾರ್ಟ್ ಫೋನ್ ಹ್ಯಾಕ್ ಆಗುತ್ತೆ ಎಂದು ಪೇಜರ್ ಬಳಸುತ...
18-09-24 02:52 pm
ಹೆದ್ದಾರಿ ವೆಚ್ಚಕ್ಕಿಂತ ಹೆಚ್ಚು ಟೋಲ್ ವಸೂಲಿ ಯಾಕೆ ?...
18-09-24 02:46 pm
20-09-24 05:18 pm
Mangalore Correspondent
Mangalore suicide, Doctor: ಎಂಬಿಬಿಎಸ್ ಮುಗಿಸಿದ್...
20-09-24 02:27 pm
ಅಮೃತ ನಗರೋತ್ಥಾನ ಯೋಜನೆ ಕಾಮಗಾರಿ ಮಾಹಿತಿ ನೀಡದ ಅಧಿಕ...
19-09-24 11:12 pm
Lokayukta, Kinnigoli, Crime: ಗುತ್ತಿಗೆದಾರರಿಂದ...
19-09-24 10:38 pm
Mangalore, Off roading, Car: 20-21ರಂದು ಮುಡಿಪಿ...
19-09-24 09:08 pm
20-09-24 11:55 am
HK News Desk
Mangalore crime, police, Gold: ಕ್ರಿಸ್ತಿಯನ್ ಅಂ...
18-09-24 10:08 pm
Bangalore fraud, Siddalingaiah Hiremath, Scam...
15-09-24 01:21 pm
MLA Munirathna Arrest: ತಿಂಗಳಿಗೆ 30 ಲಕ್ಷ ಲಂಚಕ್...
14-09-24 06:54 pm
Srimathi Shetty murder case, Mangalore Court...
14-09-24 11:52 am