Mangalore News: ಬಸ್ಸಿನಲ್ಲಿ ಬಿಟ್ಟುಹೋಗಿದ್ದ ಚಿನ್ನಾಭರಣಗಳಿದ್ದ ವ್ಯಾನಿಟಿ ಬ್ಯಾಗ್ ; ಮಹಿಳೆಗೆ ಹಿಂತಿರುಗಿಸಿದ ಬಸ್ ನಿರ್ವಾಹಕ  

21-11-23 12:00 pm       Mangalore Correspondent   ಕರಾವಳಿ

50 ಸಾವಿರ ರೂ. ಮೌಲ್ಯದ ಆಭರಣ ಮತ್ತಿತರ ಸೊತ್ತುಗಳಿದ್ದ ಬ್ಯಾಗನ್ನು ಪ್ರಯಾಣಿಕರೋರ್ವರು ಬಸ್ಸಿನಲ್ಲಿ ಬಿಟ್ಟು ಹೋಗಿದ್ದು ಬಸ್ ನಿರ್ವಾಹಕರು ಅದನ್ನು ಮರಳಿ ವಾರೀಸುದಾರರರಿಗೆ ಒಪ್ಪಿಸಿದ ಪ್ರಸಂಗ ಮಂಗಳೂರಿನಲ್ಲಿ ನಡೆದಿದೆ.

ಮಂಗಳೂರು, ನ.21: 50 ಸಾವಿರ ರೂ. ಮೌಲ್ಯದ ಆಭರಣ ಮತ್ತಿತರ ಸೊತ್ತುಗಳಿದ್ದ ಬ್ಯಾಗನ್ನು ಪ್ರಯಾಣಿಕರೋರ್ವರು ಬಸ್ಸಿನಲ್ಲಿ ಬಿಟ್ಟು ಹೋಗಿದ್ದು ಬಸ್ ನಿರ್ವಾಹಕರು ಅದನ್ನು ಮರಳಿ ವಾರೀಸುದಾರರರಿಗೆ ಒಪ್ಪಿಸಿದ ಪ್ರಸಂಗ ಮಂಗಳೂರಿನಲ್ಲಿ ನಡೆದಿದೆ.

ನ.19ರಂದು ಉಡುಪಿಯಿಂದ ಮಂಗಳೂರಿಗೆ ಮೂಕಾಂಬಿಕಾ ಹೆಸರಿನ ಖಾಸಗಿ ಬಸ್ಸಿನಲ್ಲಿ ಮಹಿಳೆಯೊಬ್ಬರು ಮಂಗಳೂರಿಗೆ ಬಂದಿದ್ದರು. ಈ ವೇಳೆ, ತನ್ನ ವ್ಯಾನಿಟಿ ಬ್ಯಾಗನ್ನು ಬಸ್ಸಿನಲ್ಲಿ ಬಿಟ್ಟು ಹೋಗಿದ್ದರು. ಬ್ಯಾಗಿನಲ್ಲಿ ನಗದು ಸೇರಿ ಸುಮಾರು 50 ಸಾವಿರ ಮೌಲ್ಯದ ಚಿನ್ನದ ಆಭರಣಗಳಿದ್ದವು. ಸೊತ್ತು ಕಳಕೊಂಡ ಪ್ರಯಾಣಿಕ ಮಹಿಳೆ ಈ ಬಗ್ಗೆ ಪಾಂಡೇಶ್ವರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ಕೂಡಲೇ ಪಾಂಡೇಶ್ವರ ಎಎಸ್‌ಐ ಶ್ರೀಧರ ಅವರು ಬಸ್‌ ಏಜಂಟ್ ಗಳನ್ನು ಸಂಪರ್ಕಿಸಿ ಕಳಕೊಂಡ ಸೊತ್ತಿನ ಬಗ್ಗೆ ಮಾಹಿತಿ ರವಾನೆ ಮಾಡಿದ್ದಾರೆ. 

ಸೋಮವಾರ ಬಸ್ಸಿನ ನಿರ್ವಾಹಕ ಜಯರಾಜ್ ಅವರು ಪಾಂಡೇಶ್ವರ ಠಾಣೆಗೆ ವ್ಯಾನಿಟಿ ಬ್ಯಾಗ್ ಸಿಕ್ಕಿರುವ ಬಗ್ಗೆ ತಿಳಿಸಿದ್ದರು. ಠಾಣೆ ಎಎಸ್‌ಐ ಶ್ರೀಧರ ಅವರ ನೇತೃತ್ವದಲ್ಲಿ ವ್ಯಾನಿಟಿ ಬ್ಯಾಗನ್ನು ಬಸ್ ನಿರ್ವಾಹಕ ಮಹಿಳೆಗೆ ಹಸ್ತಾಂತರಿಸಿ ಮಾನವೀಯತೆ ಮೆರೆದಿದ್ದಾರೆ.

Bus conductor returns back ladys bag with gold and cash in Mangalore. In a commendable act of honesty, a lady who accidentally left her vanity bag on a bus (KA 20 AA 8296) traveling from Udupi to Mangaluru on November 19 had her belongings, valued at Rs 50,000, returned by the vigilant bus conductor.