ಮಂಗಳೂರು ಸಿಸಿಬಿ ಇನ್ ಸ್ಪೆಕ್ಟರ್ ಶಿವಪ್ರಕಾಶ್ ಕಡೆಗೂ ವರ್ಗ ; ಮಹೇಶ್ ಪ್ರಸಾದ್ ನೇಮಕ 

17-11-20 12:38 pm       Mangaluru Correspondant   ಕರಾವಳಿ

ಕಾಪು ಇನ್ ಸ್ಪೆಕ್ಟರ್ ಆಗಿರುವ ಮಹೇಶ್ ಪ್ರಸಾದ್ ಅವರನ್ನು ಮಂಗಳೂರು ಸಿಸಿಬಿಗೆ ನೇಮಕ ಮಾಡಲಾಗಿದೆ.

ಮಂಗಳೂರು, ನವೆಂಬರ್ 17: ಮಂಗಳೂರಿನಲ್ಲಿ ಡ್ರಗ್ಸ್ ಕೇಸ್ ವಿಚಾರಣೆ ನಡೆಸುತ್ತಿದ್ದ ಸಿಸಿಬಿ ಇನ್ ಸ್ಪೆಕ್ಟರ್ ಶಿವಪ್ರಕಾಶ್ ನಾಯಕ್ ಅವರನ್ನು ಕೊನೆಗೂ ವರ್ಗ ಮಾಡಲಾಗಿದೆ. ಆ ಜಾಗಕ್ಕೆ ಮತ್ತೆ ಕಾಪು ಇನ್ ಸ್ಪೆಕ್ಟರ್ ಆಗಿರುವ ಮಹೇಶ್ ಪ್ರಸಾದ್ ಅವರನ್ನು ನೇಮಕ ಮಾಡಲಾಗಿದೆ.

ಎರಡು ತಿಂಗಳ ಹಿಂದೆ ಸಿಸಿಬಿ ಇನ್ಸ್ ಪೆಕ್ಟರ್ ಶಿವಪ್ರಕಾಶ್ ಆರ್. ನಾಯಕ್ ವರ್ಗಾವಣೆ ಮಾಡಲಾಗಿತ್ತು. ಆದರೆ, ನಟಿ ಅನುಶ್ರೀ ಸೇರಿದಂತೆ ಡ್ರಗ್ಸ್ ಪ್ರಕರಣದ ಆರೋಪಿಗಳ ವಿಚಾರಣೆ ನಡೆಸುತ್ತಿದ್ದ ಅಧಿಕಾರಿಯನ್ನು ದಿಢೀರ್ ಆಗಿ ವರ್ಗಾಯಿಸಿದ್ದು ವಿರೋಧಕ್ಕೆ ಕಾರಣವಾಗಿತ್ತು. ಕಾಣದ ಕೈಗಳ ಒತ್ತಡದ ಕಾರಣ ವರ್ಗ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಹೀಗಾಗಿ ವರ್ಗಾವಣೆಗೆ ತಾತ್ಕಾಲಿಕ ತಡೆ ಹಾಕಿದ್ದ ಸರಕಾರ ಈಗ ಮತ್ತೆ ಜಾರಿ ಮಾಡಿದೆ. 

ಇದೀಗ ಮತ್ತೆ ಮಂಗಳೂರು ಸಿಸಿಬಿಗೆ ಮಹೇಶ್ ಪ್ರಸಾದ್ ನೇಮಕ ಮಾಡಿದೆ. ಅದಲ್ಲದೆ, ಸಿಸಿಬಿ ಎಸ್ಐ ಆಗಿದ್ದ ಕಬ್ಬಾಳ್ ರಾಜ್ ಅವರನ್ನೂ ವರ್ಗ ಮಾಡಲಾಗಿದೆ. ಅವರಿಗೆ ಚಿಕ್ಕಮಗಳೂರು ನಗರ ಠಾಣೆಗೆ ವರ್ಗ ಆಗಿದ್ದರೆ, ಶಿವಪ್ರಕಾಶ್ ಬೆಂಗಳೂರಿಗೆ ವರ್ಗ ಆಗಿದ್ದಾರೆ.

Kapu Inspector Mahesh Prasad has been appointed as the new Inspector of City Crime Branch (CCB) of Mangaluru. The outgoing inspector Shivaprakash Naik has been transferred.