ಬ್ರೇಕಿಂಗ್ ನ್ಯೂಸ್
17-11-20 11:09 pm Mangaluru Correspondent ಕರಾವಳಿ
ಮಂಗಳೂರು, ನವೆಂಬರ್ 17: ಪ್ರಸಿದ್ಧ ವ್ಯಕ್ತಿಗಳ ಹೆಸರಲ್ಲಿ ನಕಲಿ ಐಡಿ ಕ್ರಿಯೇಟ್ ಮಾಡಿ ಹಣ ಪೀಕಿಸುವ ಖದೀಮರು ಹೆಚ್ಚುತ್ತಿದ್ದಾರೆ. ಮಂಗಳೂರು ಮಹಾನಗರ ಪಾಲಿಕೆ ಉಪಾಯುಕ್ತರಾಗಿರುವ ಐಎಎಸ್ ಅಧಿಕಾರಿ ಡಾ.ಸಂತೋಷ್ ಕುಮಾರ್ ಹೆಸರಲ್ಲಿ ನಕಲಿ ಐಡಿ ಸೃಷ್ಟಿಸಿ ಹಲವರಿಂದ ಹಣ ಪೀಕಿಸ್ತಿರುವ ವಿಚಾರ ಬೆಳಕಿಗೆ ಬಂದಿದೆ.
ಸಂತೋಷ್ ಕುಮಾರ್ ಹೆಸರಿನಲ್ಲಿ ಅವರದೇ ಒರಿಜಿನಲ್ ಐಡಿಯಲ್ಲಿರುವ ಫೋಟೊ ಮತ್ತು ಹೆಸರು, ಹುದ್ದೆಯನ್ನು ಬಳಸಿಕೊಂಡು ಮತ್ತೊಂದು ಫೇಸ್ಬುಕ್ ಐಡಿ ಕ್ರಿಯೇಟ್ ಮಾಡಲಾಗಿದೆ. ಅಲ್ಲದೆ, ಅವರ ಸ್ನೇಹಿತರ ಲಿಸ್ಟ್ ಸಂಗ್ರಹಿಸಿ, ಹಣದ ಅಗತ್ಯ ಇರುವುದನ್ನು ಮನವರಿಕೆ ಮಾಡಿ ಹಣ ಕೇಳುತ್ತಿರುವುದು ಬಯಲಾಗಿದೆ.

ಸ್ನೇಹಿತನ ಮಗುವಿಗೆ ಹುಷಾರಿಲ್ಲ , ಸೀರಿಯಸ್ ಆಗಿದೆ. ಹತ್ತಿರದ ಸಂಬಂಧಿಕರು ಅನಾರೋಗ್ಯದಿಂದ ಚಿಂತಾಜನಕ ಸ್ಥಿತಿಯಲ್ಲಿದ್ದಾರೆ. ತುರ್ತು ಹಣದ ಅಗತ್ಯ ಇದೆ. ಗೂಗಲ್ ಪೇ ಇದ್ದರೆ ಆದಷ್ಟು ಬೇಗ ಹಣ ರವಾನಿಸಿ. ಬೆಳಗ್ಗೆ ಹಿಂತಿರುಗಿಸುತ್ತೇನೆ... ಹೀಗೆಂದು ಸ್ನೇಹಿತರಿಗೆ ಮೆಸೆಂಜರ್ ಮೂಲಕ ಸಂದೇಶ ಕಳಿಸುವ ನಕಲಿ ವ್ಯಕ್ತಿ ಹಲವರ ಬಳಿಯಿಂದ ಹಣ ಲಪಟಾಯಿಸಿರುವ ಮಾಹಿತಿಯಿದೆ.

ಆಯುಕ್ತರಿಗೆ ಫೇಸ್ಬುಕ್ ಫ್ರೆಂಡ್ ಆಗಿರುವ ಮಾಧ್ಯಮದ ವ್ಯಕ್ತಿಯೊಬ್ಬರಿಗೆ ಇದೇ ರೀತಿಯ ಮೆಸೇಜ್ ಬಂದಿತ್ತು. ಹಣದ ಅಗತ್ಯ ಇರುವುದಾಗಿ ಹೇಳಿಕೊಂಡಿದ್ದನ್ನು ಅರಿತ ಮಾಧ್ಯಮ ಕ್ಷೇತ್ರದ ವ್ಯಕ್ತಿ ಕೂಡಲೇ ಉಪಾಯುಕ್ತ ಸಂತೋಷ್ ಕುಮಾರ್ ಅವರಿಗೆ ಫೋನಾಯಿಸಿದ್ದಾರೆ. ಅದಾಗಲೇ ಹಲವರಿಂದ ಫೋನ್ ಬಂದಿದ್ದರಿಂದ ಎಚ್ಚತ್ತುಕೊಂಡಿದ್ದ ಆಯುಕ್ತರು ತನ್ನ ಒರಿಜಿನಲ್ ಐಡಿಯಲ್ಲಿ ಮನವಿ ಕೂಡ ಮಾಡಿಕೊಂಡಿದ್ದರು. ಯಾರು ಕೂಡ ನನ್ನ ಹೆಸರಲ್ಲಿ ಹಣ ಕೇಳಿ, ಪೀಡಿಸಿದರೆ ಮೋಸ ಹೋಗಬೇಡಿ. ಈ ಬಗ್ಗೆ ಪೊಲೀಸ್ ದೂರು ಕೊಟ್ಟಿದ್ದಾಗಿ ಮಾಹಿತಿ ನೀಡಿದ್ದರು.
ಈ ಬಗ್ಗೆ ಆಯುಕ್ತರನ್ನು ಸಂಪರ್ಕಿಸಿದಾಗ, ಫೇಕ್ ಅಕೌಂಟ್ ಮೂಲಕ ಖದೀಮರು ಹಣ ಕೇಳಿರುವುದನ್ನು ದೃಢಪಡಿಸಿದ್ದಾರೆ. ಈ ಬಗ್ಗೆ ಈಗಾಗಲೇ ಸೈಬರ್ ಕ್ರೈಮ್ ಮತ್ತು ಮಂಗಳೂರು ಪೊಲೀಸ್ ಕಮಿಷನರ್ ಗೆ ತಿಳಿಸಿದ್ದಾಗಿ ಮಾಹಿತಿ ನೀಡಿದ್ದಾರೆ.
Fraudsters create fake facebook id of Revenue Assistant Commissioner Santosh Kumar, Mangalore and have looted money through online. A case has been registered to the cyber crime and also the issue has been brought to the notice of Commissioner of police said Santosh Kumar to Headline Karnataka.
19-12-25 01:41 pm
Bangalore Correspondent
ಡಿಸಿಎಂ ಡಿಕೆಶಿ ಆಪ್ತ ಕಾರ್ಯದರ್ಶಿ ಕಾರು ಅಪಘಾತ ; ಬೈ...
18-12-25 11:05 pm
Byrathi Suresh, Mangalore, Karavali: 'ಕರಾವಳಿಗ...
18-12-25 08:40 pm
ಪರಮೇಶ್ವರ್ ಸಿಎಂ ಆಗಲೆಂದು ಒಕ್ಕಲಿಗ, ಲಿಂಗಾಯತ, ದಲಿತ...
18-12-25 04:31 pm
Shivamogga, Gold Chain Robbery, Police: ಕಾಂಗ್...
18-12-25 02:26 pm
19-12-25 02:40 pm
HK News Desk
ಜೆಡ್ಡಾದಿಂದ ಕೋಝಿಕ್ಕೋಡ್ ತೆರಳುತ್ತಿದ್ದ ಏರ್ ಇಂಡಿಯ...
18-12-25 04:34 pm
ಸಮವಸ್ತ್ರ ಕಳಪೆಯೆಂದು ಸಹಪಾಠಿಗಳ ಅಣಕ ; ನೊಂದ ನಾಲ್ಕನ...
17-12-25 10:27 pm
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
19-12-25 04:43 pm
Mangalore Correspondent
11 ವರ್ಷ ಹಿಂದಿನ ಅಪಘಾತ ಕೇಸಿನಲ್ಲಿ ಆರೋಪಿಗೆ ಸಜೆ, 2...
18-12-25 10:51 pm
ಬಜ್ಪೆ ಪೊಲೀಸರ ಬಗ್ಗೆ ಅವಹೇಳನ, ಆರೋಪಿಗಳಿಗೆ ರಾಜಾತಿಥ...
18-12-25 10:24 pm
ಮಹೇಶ್ ಶೆಟ್ಟಿ ತಿಮರೋಡಿ ಮತ್ತೆ ರಾಯಚೂರಿಗೆ ಗಡೀಪಾರು...
18-12-25 10:52 am
Dharmasthala case, Chinnayya: ಜಾಮೀನು ಸಿಕ್ಕರೂ...
17-12-25 08:54 pm
18-12-25 04:53 pm
Mangaluru Correspondent
ಫ್ಲಾಟ್, ಜಾಗವನ್ನು ಮಾರಾಟ ಮಾಡಿ ಸೈಬರ್ ವಂಚಕರಿಗೆ 2...
17-12-25 11:14 am
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm