ಅಶ್ವಥ ಎಲೆಯಲ್ಲಿ ಮೂಡಿಬಂದ ಕೋದಂಡಶ್ರೀರಾಮ ; ಗಮನಸೆಳೆದ ಕಲಾವಿದನ ಕೈಚಳಕ 

20-01-24 10:22 pm       Udupi Correspondent   ಕರಾವಳಿ

ಅಯೋಧ್ಯೆ ಶ್ರೀರಾಮ ಜನ್ಮಭೂಮಿಯಲ್ಲಿ ರಾಮ ಮಂದಿರ ಲೋಕಾರ್ಪಣೆಗೆ ಸಿದ್ಧತೆ ನಡೆದಿರುವಾಗಲೇ ದೇಶದಾದ್ಯಂತ ರಾಮನ ಭಜನೆ ಕೇಳಿಬರುತ್ತಿದೆ. ಇಲ್ಲೊಬ್ಬ ಕಲಾವಿದ ಅಶ್ವತ್ಥ ಮರದ ಎಲೆಯಲ್ಲಿ ಅಪೂರ್ವ ರಾಮನ ಚಿತ್ರ ರಚಿಸಿ ಗಮನ ಸೆಳೆದಿದ್ದಾರೆ. 

ಉಡುಪಿ, ಜ.20: ಅಯೋಧ್ಯೆ ಶ್ರೀರಾಮ ಜನ್ಮಭೂಮಿಯಲ್ಲಿ ರಾಮ ಮಂದಿರ ಲೋಕಾರ್ಪಣೆಗೆ ಸಿದ್ಧತೆ ನಡೆದಿರುವಾಗಲೇ ದೇಶದಾದ್ಯಂತ ರಾಮನ ಭಜನೆ ಕೇಳಿಬರುತ್ತಿದೆ. ಇಲ್ಲೊಬ್ಬ ಕಲಾವಿದ ಅಶ್ವತ್ಥ ಮರದ ಎಲೆಯಲ್ಲಿ ಅಪೂರ್ವ ರಾಮನ ಚಿತ್ರ ರಚಿಸಿ ಗಮನ ಸೆಳೆದಿದ್ದಾರೆ. 

ರಾಮ ಮಂದಿರ ಲೋಕಾರ್ಪಣೆ ಹಿನ್ನೆಲೆಯಲ್ಲಿ ಕಲಾವಿದ ಗಣೇಶ್ ರಾಜ್ ಸರಳೇಬೆಟ್ಟು ಅವರು ಪ್ರಭು ಶ್ರೀಕೋದಂಡರಾಮನ ಚಿತ್ರವನ್ನು ಅಶ್ವಥ ಎಲೆಯಲ್ಲಿ ರಚಿಸಿದ್ದಾರೆ. ಇವರು ಬಾರ್ಕೂರಿನ ಶ್ರೀಕುಲಮಾಸ್ತ್ರಿ ಅಮ್ಮನ ದೇವಸ್ಥಾನದ ಆವರಣದಲ್ಲಿರುವ ಅಶ್ವಥಮರದ ಎಲೆಯನ್ನು ಬಳಸಿಕೊಂಡು ಕಲಾಕೃತಿ ರಚಿಸಿದ್ದಾರೆ. 

ಜನವರಿ 22ರಂದು ಪರ್ಕಳದಲ್ಲಿ ಆಯೋಜಿಸಲಾಗಿರುವ ಅಯೋಧ್ಯೆ ರಾಮ ಮಂದಿರದ ವಿಗ್ರಹ ಪ್ರತಿಷ್ಠಾಪನಾ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಈ ಚಿತ್ರವನ್ನು ಪ್ರದರ್ಶನಕ್ಕೆ ಇಡಲಾಗುವುದು ಎಂದು ಗಣೇಶರಾಜ್ ಸರಳೇಬೆಟ್ಟು ತಿಳಿಸಿದ್ದಾರೆ.

As preparations are underway for the inauguration of ram temple at Ram Janmabhoomi in Ayodhya, bhajans of Lord Ram are being heard across the country. Here is an artist who has created a picture of Apoorva Rama on the leaf of ashwattha tree.