ಉಳ್ಳಾಲ: ಬಹುಮಹಡಿ ಕಟ್ಟಡದ ಮೇಲಿಂದ ಬಿದ್ದು ಕಾರ್ಮಿಕ ಸಾವು, ದೇಹ ಛಿದ್ರ !! 

22-11-20 10:19 pm       Mangaluru Correspondent   ಕರಾವಳಿ

ಕಟ್ಟಡದ ಮೇಲಿನಿಂದ ಕಾರ್ಮಿಕನೊಬ್ಬ ಕೆಳಗೆ ಬಿದ್ದು ದಾರುಣವಾಗಿ ಮೃತಪಟ್ಟ ಘಟನೆ ನಡೆದಿದೆ. 

ಉಳ್ಳಾಲ, ನವೆಂಬರ್, 22: ಉಳ್ಳಾಲ ನಗರಸಭೆ ಕಟ್ಟಡದ ಮುಂಭಾಗದಲ್ಲಿರುವ ಬಹುಮಹಡಿ ವಾಣಿಜ್ಯ ಮತ್ತು ವಸತಿ ಸಂಕೀರ್ಣ ಇನ್ ಲ್ಯಾಂಡ್ ಇಂಪಾಲ ಕಟ್ಟಡದ ಮೇಲಿನಿಂದ ಕಾರ್ಮಿಕನೊಬ್ಬ ಕೆಳಗೆ ಬಿದ್ದು ದಾರುಣವಾಗಿ ಮೃತಪಟ್ಟ ಘಟನೆ ನಡೆದಿದೆ. 

ಮೃತರನ್ನು ತೊಕ್ಕೊಟ್ಟು ಚೆಂಬುಗುಡ್ಡೆ ನಿವಾಸಿ ಮುತ್ತುರಾಜ್(45) ಎಂದು ಗುರುತಿಸಲಾಗಿದೆ. ಮುತ್ತುರಾಜ್ ಅವರು ಬಹುಮಹಡಿ ಕಟ್ಟಡದ ಮೇಲ್ಮಹಡಿಯ ನೀರಿನ ಟ್ಯಾಂಕ್ ಕ್ಲೀನ್ ಮಾಡಲೆಂದು ಟೆರೇಸ್ ಹೋಗಿದ್ದರು. ಈ ವೇಳೆ ಆಯತಪ್ಪಿ ಕೆಳಗೆ ಬಿದ್ದಿದ್ದಾರೆ ಎನ್ನಲಾಗುತ್ತಿದೆ. ಬಿದ್ದ ರಭಸಕ್ಕೆ ದೇಹ ಛಿದ್ರಗೊಂಡಿತ್ತು. ರಾತ್ರಿ 9 ಗಂಟೆ ಸುಮಾರಿಗೆ ಘಟನೆ ನಡೆದಿದೆ.  

ಉಳ್ಳಾಲ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಕಟ್ಟಡ ಮಾಲಕರ ಅಜಾಗರೂಕತೆಯೇ ಘಟನೆಗೆ ಕಾರಣ ಎಂದು ಹೇಳಲಾಗುತ್ತಿದೆ.

45 Year old man falls frrom high storied building while he was cleaning the tank. The dead has been identified as Muthuraj resident of Chembugudde, Mangalore.