Speaker Ut Khader, kola at Panolibail turns controversy: ಪ್ರಸಾದ ಮೆತ್ತಿಕೊಂಡು ನರಕಕ್ಕೆ ಹೋಗಲಿ ಎಂದ ಮುಸ್ಲಿಂ ಫೈಝಿಗೆ ಸ್ಪೀಕರ್ ಖಾದರ್ ತಿರುಗೇಟು, ಎಲ್ಲ ಧರ್ಮಗಳನ್ನು ಗೌರವಿಸುವುದು ಸಂಸ್ಕೃತಿ, ಫೇಸ್ಬುಕ್ಕಲ್ಲಿ ಗೀಚಿದ ಮಾತ್ರಕ್ಕೆ ಇತಿಹಾಸ ಬದಲಾಗಲ್ಲ !  

06-02-24 02:38 pm       Mangalore Correspondent   ಕರಾವಳಿ

ಯಾರೋ ಒಂದಿಬ್ಬರು ಸೋಶಿಯಲ್ ಮೀಡಿಯಾದಲ್ಲಿ ಏನೋ ಗೀಚಿದ ಮಾತ್ರಕ್ಕೆ ನಮ್ಮ ಸಂಪ್ರದಾಯ ಬದಲಾಗಲ್ಲ. ನನ್ನ ಕೆಲಸವನ್ನು ನೂರಾರು ಮಂದಿ ಸ್ವೀಕಾರ ಮಾಡುತ್ತಾರೆ, ಗೌರವಿಸುತ್ತಾರೆ.

ಮಂಗಳೂರು, ಫೆ.6: ಯಾರೋ ಒಂದಿಬ್ಬರು ಸೋಶಿಯಲ್ ಮೀಡಿಯಾದಲ್ಲಿ ಏನೋ ಗೀಚಿದ ಮಾತ್ರಕ್ಕೆ ನಮ್ಮ ಸಂಪ್ರದಾಯ ಬದಲಾಗಲ್ಲ. ನನ್ನ ಕೆಲಸವನ್ನು ನೂರಾರು ಮಂದಿ ಸ್ವೀಕಾರ ಮಾಡುತ್ತಾರೆ, ಗೌರವಿಸುತ್ತಾರೆ. ನಾವು ಮಾಡೋ ಕೆಲಸಗಳನ್ನು ಮಾತ್ರ ಇತಿಹಾಸ ನೆನಪಿಡುತ್ತದೆ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಅವರ ಇಚ್ಚೆಯಂತೆ ಹರಕೆ ಹೇಳಿಕೊಂಡಿದ್ದರು. ಹರಕೆ, ಕೋಲವನ್ನು ಗೌರವಿಸುವುದು ನಮ್ಮ ಸಂಸ್ಕೃತಿ ಎಂದು ಸ್ಪೀಕರ್ ಯುಟಿ ಖಾದರ್ ಸ್ಪಷ್ಟನೆ ನೀಡಿದ್ದಾರೆ.

ಪಣೋಲಿಬೈಲಿನಲ್ಲಿ ಹರಕೆ ಕೋಲದಲ್ಲಿ ಭಾಗವಹಿಸಿದ ಯುಟಿ ಖಾದರ್ ಬಗ್ಗೆ ಫೇಸ್ಬುಕ್ ನಲ್ಲಿ ಸಾಲೆತ್ತೂರಿನ ಧರ್ಮಗುರು ಫೈಝಿ ಅಲ್ ಹಮ್ದಾನಿ ಎಂಬವರು ಟೀಕಿಸಿ ಬರೆದಿದ್ದರು. ಕೊರಗಜ್ಜನ ಭಕ್ತ ಯುಟಿ ಖಾದರ್ ಅವರನ್ನು ಮುಸ್ಲಿಮರು ಕೇವಲ ರಾಜಕಾರಣಿಯಾಗಿ ಕಂಡರೆ ಸಾಕು. ಧಾರ್ಮಿಕ ಮುಖಂಡರಾಗಿ ಕಾಣುವುದು ಬೇಡ. ಉಲೆಮಾ, ಸಾತ್ವಿಕರು ತುಂಬಿದ ಧಾರ್ಮಿಕ ವೇದಿಕೆಗೆ ಮುಸ್ಲಿಂ ನಾಯಕನಾಗಿ ಹತ್ತಿಸುವುದು ತರವಲ್ಲ. ಅದು ಆತನ ಭೂತಾರಾಧನೆಗೆ ನಾವು ಕೊಡುವ ಅಂಗೀಕಾರವಾಗುತ್ತದೆ. ಖಾದರ್ ಕೊರಗಜ್ಜನಿಗೂ ಕಲ್ಲುರ್ಟಿ ಪಂಜುರ್ಲಿಗೂ ಆರಾಧಿಸಲಿ. ಪ್ರಸಾದ ಪಡೆದು ತಲೆಗೆ ಮೆತ್ತಿಕೊಂಡು ನರಕಕ್ಕೆ ಹೋಗಲಿ. ಅದು ಆತನ ವೈಯಕ್ತಿಕ ಸ್ವಾತಂತ್ರ್ಯ. ಅದನ್ನು ಭಾರತದಲ್ಲಿ ತಡೆಯುವ ಸ್ವಾತಂತ್ರ್ಯ ತನಗೆ ಇಲ್ಲ. ಆದರೆ ಆತನಿಗೆ ಉಲೆಮಾಗಳು ಗೌರವಿಸುವುದು ಕೆಟ್ಟ ಸಂದೇಶ ನೀಡುತ್ತದೆ ಎಂದು ಹೇಳಿದ್ದರು.

ಫೇಸ್ಬುಕ್ ನಲ್ಲಿ ಧರ್ಮಗುರು ಹಾಕಿದ ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಬೆಂಗಳೂರಿನಲ್ಲಿ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದರು. ಅಂತಹ ಟೀಕೆಗಳ ಬಗ್ಗೆ ಮಾಧ್ಯಮದಲ್ಲಿ ಮಹತ್ವ ಕೊಡಬೇಕಿಲ್ಲ. ಎಲ್ಲ ಧರ್ಮಗಳನ್ನು ಗೌರವಿಸುವುದು ನಮ್ಮ ಸಂಸ್ಕೃತಿ. 99 ಶೇಕಡಾ ಜನರು ಎಲ್ಲ ಧರ್ಮಗಳನ್ನು ಗೌರವಿಸುತ್ತಾರೆ ಎಂದು ಹೇಳಿದ್ದಾರೆ.

Speaker Ut Khader attends kola at Panolibail turns controversy, Muslim leader's blast speaker on social media. Khader offered Harake Kola to Karnika Daivas of Tulunadu Kallurti Kalkuda on  Sunday, February 4 in the night to fulfil his desires. However, Muslim leaders have viciously attacked Khader on the social media