ಬ್ರೇಕಿಂಗ್ ನ್ಯೂಸ್
07-02-24 06:25 pm Udupi Correspondent ಕರಾವಳಿ
ಉಡುಪಿ, ಫೆ.7: ಬೈಂದೂರಿನ ಮುದೂರು, ಜಡ್ಕಲ್ ಪರಿಸರದಲ್ಲಿ ನಕ್ಸಲರು ಕಾಣಿಸಿಕೊಂಡಿದ್ದಾರೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಪೊಲೀಸರು ಎಲರ್ಟ್ ಆಗಿದ್ದಾರೆ. ಅಲ್ಲದೆ, ಸ್ಥಳಕ್ಕೆ ಕಾರ್ಕಳ, ಹೆಬ್ರಿಯಲ್ಲಿದ್ದ ಏಂಟಿ ನಕ್ಸಲ್ ಫೋರ್ಸ್ ದಳದವರು ತೆರಳಿದ್ದು ಕೂಂಬಿಂಗ್ ಆರಂಭಿಸಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ.
ಮುದೂರು, ಜಡ್ಕಲ್ ಮತ್ತು ಬೆಳ್ಕಳ್ ಪ್ರದೇಶದ ಕಾಡು ಪರಿಸರದಲ್ಲಿ ಹಸುರು ಯೂನಿಫಾರ್ಮ್ ಹಾಕ್ಕೊಂಡಿದ್ದ ನಾಲ್ಕೈದು ಮಂದಿಯಿದ್ದ ನಕ್ಸಲರು ಕಳೆದ ಒಂದು ತಿಂಗಳಿನಿಂದ ಆಗಿಂದಾಗ್ಗೆ ಜನರಿಗೆ ಕಾಣ ಸಿಕ್ಕಿದ್ದಾರೆ. ಈ ಬಗ್ಗೆ ಅಲ್ಲಿನ ಜನರಿಂದ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ತೆರಳಿದ್ದು ಮಾಹಿತಿ ಕಲೆಹಾಕಿದ್ದಾರೆ. ಕೆಲವರು ಶಸ್ತ್ರ ಹಿಡಿದುಕೊಂಡಿದ್ದವರನ್ನು ಕಂಡಿದ್ದಾಗಿ ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಅದು ನಕ್ಸಲರದ್ದೇ ತಂಡ ಆಗಿರಬಹುದು ಎನ್ನುವ ಶಂಕೆ ಮೂಡಿದೆ.
ಆದರೆ ಕಳೆದ ಹತ್ತು ವರ್ಷಗಳಿಂದ ದಕ್ಷಿಣ ಕನ್ನಡ, ಚಿಕ್ಕಮಗಳೂರು ಮತ್ತು ಉಡುಪಿ ಭಾಗದಲ್ಲಿ ನಕ್ಸಲರು ಕಾಣಿಸಿಕೊಂಡಿರಲಿಲ್ಲ. ಕೇರಳದ ವಯನಾಡು, ಕಣ್ಣೂರು ಭಾಗದ ಕಾಡುಗಳಲ್ಲಿ ನಕ್ಸಲರಿದ್ದರೂ ಇಲ್ಲಿ ಎಎನ್ಎಫ್ ಠಿಕಾಣಿ ಹೂಡಿದ್ದರಿಂದ ಮತ್ತೆ ಪ್ರತ್ಯಕ್ಷ ಆಗಿರಲಿಲ್ಲ. ಕಳೆದ ಎರಡು ತಿಂಗಳಲ್ಲಿ ಕೇರಳ ಭಾಗದಲ್ಲಿ ನಕ್ಸಲರ ವಿರುದ್ಧ ಕಾರ್ಯಾಚರಣೆ ತೀವ್ರಗೊಂಡಿದ್ದರಿಂದ ಆ ಕಡೆಯಿಂದ ಕರ್ನಾಟಕಕ್ಕೆ ನಕ್ಸಲರು ಬಂದಿರಬಹುದು ಎನ್ನುವ ಗುಮಾನಿಯಿದೆ. ಹಾಗೆ ಬಂದಿದ್ದೇ ಆದಲ್ಲಿ ಕೇರಳದಿಂದ ಕೊಡಗಿನ ಮೂಲಕವೇ ಕರ್ನಾಟಕಕ್ಕೆ ಬರಬೇಕಿದೆ. ಇಂಥ ಮಾಹಿತಿ ಅಧಿಕೃತವಾಗಿ ಸಿಕ್ಕಿಲ್ಲವಾದರೂ, ಕೊಡಗು, ದಕ್ಷಿಣ ಕನ್ನಡದ ಪಶ್ಚಿಮ ಘಟ್ಟದ ಕಾಡುಗಳಿಂದಲೇ ಉಡುಪಿ ಸೇರಿರುವ ಸಾಧ್ಯತೆಯಿದೆ. ಅಲ್ಲದೆ, ನಕ್ಸಲರ ತಂಡವನ್ನು ಹಳೆ ನಕ್ಸಲ್ ವಿಕ್ರಂ ಗೌಡ ಅಥವಾ ರಾಯಚೂರು ಮೂಲದ ರಾಜಣ್ಣ ಮುನ್ನಡೆಸುತ್ತಿರುವ ಸಾಧ್ಯತೆ ಬಗ್ಗೆ ಹೇಳಲಾಗುತ್ತಿದೆ.
ಸದ್ಯಕ್ಕೆ ಕಾರ್ಕಳ, ಹೆಬ್ರಿ ಮತ್ತು ಅಮಾಸೆಬೈಲು ಪರಿಸರದಲ್ಲಿ ಕ್ಯಾಂಪ್ ಹಾಕಿದ್ದ ಎಎನ್ಎಫ್ ಪಡೆ ಅಲರ್ಟ್ ಆಗಿದ್ದು, ಕುಂದಾಪುರ, ಬೈಂದೂರಿನತ್ತ ತೆರಳಿದೆ. ಕಾಡು ಪ್ರದೇಶದಲ್ಲಿ ಕೂಂಬಿಂಗ್ ಕಾರ್ಯಾಚರಣೆಗೆ ಮುಂದಾಗಿದೆ ಎನ್ನುವ ಮಾಹಿತಿ ಇದೆ. ಆದರೆ ಈ ಬಗ್ಗೆ ಪೊಲೀಸ್ ಅಧಿಕಾರಿಗಳು ಅಧಿಕೃತವಾಗಿ ದೃಢಪಡಿಸಿಲ್ಲ.
The Anti-Naxal Force (ANF) has been put on high alert after movement of Naxals was reported in parts of Chikkamagalur and Udupi. It is suspected that the Naxals, led by Vikram Gowda, are preparing to organise a ‘Martyr’s Day’ to honour Naxal leader Saket Rajan who was killed in an early morning encounter on February 6, 2005 near Menasinahadya in Koppa taluk.
17-09-25 06:02 pm
Bangalore Correspondent
Sadananda Gowda, Cyber Fraud: ಮಾಜಿ ಸಿಎಂ ಡಿವಿಎ...
17-09-25 05:45 pm
Lokayukta, Dinesh Gundu Rao: ಜಮೀರ್ ಅಹ್ಮದ್ ಅಕ್...
16-09-25 11:00 pm
Nanjegowda MLA, Malur: ಮಾಲೂರು ಕಾಂಗ್ರೆಸ್ ಶಾಸಕ...
16-09-25 10:54 pm
Bangalore Suicide, Air force: ಸಹೋದರಿ ಜೊತೆ ಜಗಳ...
15-09-25 08:53 pm
16-09-25 10:11 pm
HK News Desk
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
17-09-25 11:05 pm
Mangalore Correspondent
Mahesh Shetty Timarodi, Arms, FIR: ಮಹೇಶ್ ಶೆಟ್...
17-09-25 10:37 pm
Poonja International Hotel, Prabhakar Poonja...
17-09-25 10:06 pm
Mangalore, Heart Attack, Puttur: ಕೊಣಾಜೆಕಲ್ಲು...
17-09-25 06:54 pm
Dharmasthala Case. Vittal Gowda: ಧರ್ಮಸ್ಥಳ ಕೇಸ...
17-09-25 03:19 pm
17-09-25 09:44 pm
HK News Desk
Mangalore Crime, Cattle Theft: ಅಡ್ಯಾರ್ ನಲ್ಲಿ...
17-09-25 06:04 pm
Udupi, Job Fraud, Scam: ವಿದೇಶದಲ್ಲಿ ಕೆಲಸ ಕೊಡಿಸ...
17-09-25 02:46 pm
ಫುಡ್ ಡೆಲಿವರಿ ನೆಪದಲ್ಲಿ ಬಾಗಿಲು ತಟ್ಟಿದ ಕಳ್ಳ ; ವೃ...
17-09-25 12:25 pm
Vijayapura Bank Robbery: ಮಹಾರಾಷ್ಟ್ರ ಗಡಿಭಾಗದ ವ...
16-09-25 10:40 pm