CM Siddaramaiah, MLA Sunil Kumar: ಸುಳ್ಳು ಆರೋಪಗಳಿಗೆ ಪೂರ್ಣ ವಿರಾಮ ಹಾಕಲು ಸಿಓಡಿ ತನಿಖೆ ಬೇಕಿತ್ತು ; ಪರೋಕ್ಷವಾಗಿ ಪ್ರಕರಣ ಮುಚ್ಚಿ ಹಾಕಲು ತನಿಖೆಯೆಂದ ಶಾಸಕ ಸುನಿಲ್ ! 

08-02-24 10:39 pm       Udupi Correspondent   ಕರಾವಳಿ

ಪರಶುರಾಮ ಥೀಂ ಪಾರ್ಕ್ ಹೆಸರಲ್ಲಿ ಆಗಿರುವ ಅವ್ಯವಹಾರದ ಬಗ್ಗೆ ಸಿಎಂ ಸಿದ್ದರಾಮಯ್ಯ ಸಿಓಡಿ ತನಿಖೆಗೆ ಆದೇಶ ಮಾಡಿರುವುದನ್ನು ಮಾಜಿ ಸಚಿವ, ಭ್ರಷ್ಟಾಚಾರದ ಆರೋಪಕ್ಕೀಡಾದ ಕಾರ್ಕಳ ಶಾಸಕ ಸುನಿಲ್ ಕುಮಾರ್ ಸ್ವಾಗತಿಸಿದ್ದಾರೆ. 

ಉಡುಪಿ, ಫೆ.8: ಪರಶುರಾಮ ಥೀಂ ಪಾರ್ಕ್ ಹೆಸರಲ್ಲಿ ಆಗಿರುವ ಅವ್ಯವಹಾರದ ಬಗ್ಗೆ ಸಿಎಂ ಸಿದ್ದರಾಮಯ್ಯ ಸಿಓಡಿ ತನಿಖೆಗೆ ಆದೇಶ ಮಾಡಿರುವುದನ್ನು ಮಾಜಿ ಸಚಿವ, ಭ್ರಷ್ಟಾಚಾರದ ಆರೋಪಕ್ಕೀಡಾದ ಕಾರ್ಕಳ ಶಾಸಕ ಸುನಿಲ್ ಕುಮಾರ್ ಸ್ವಾಗತಿಸಿದ್ದಾರೆ. 

ಈ ಬಗ್ಗೆ ಫೇಸ್ಬುಕ್ ನಲ್ಲಿ ಪೋಸ್ಟ್ ಹಾಕಿರುವ ಸುನಿಲ್ ಕುಮಾರ್, ಥೀಮ್ ಪಾರ್ಕ್ ಬಗ್ಗೆ ಅನಗತ್ಯವಾಗಿ ಎಬ್ಬಿಸುತ್ತಿದ್ದ ಊಹಾಪೋಹ ಹಾಗೂ ಸುಳ್ಳು ಆರೋಪಗಳಿಗೆ ಒಂದು ಪೂರ್ಣ ವಿರಾಮ ಬೇಕಿತ್ತು. ಸುಳ್ಳು ಆರೋಪಗಳ ತನಿಖೆಗಾಗಿ ರಾಜ್ಯ ಸರ್ಕಾರ ಕೊನೆಗೂ ಸಿಐಡಿ ತನಿಖೆ ನಡೆಸಲು ಮುಂದಾಗಿರುವುದನ್ನು ನಾನು ಸ್ವಾಗತಿಸುತ್ತೇನೆ” ಎಂದು ಹೇಳಿದ್ದಾರೆ.

"ಈ ಬಗ್ಗೆ ತನಿಖೆ ನಡೆಯಬೇಕೆಂದು ಆರು ತಿಂಗಳ ಹಿಂದೆಯೇ ನಾನು ಆಗ್ರಹಿಸಿದ್ದೆ. ಸರಕಾರ ಆದಷ್ಟು ಬೇಗ ತನಿಖೆ ಪೂರ್ಣಗೊಳಿಸುವ ಜತೆಗೆ ಥೀಂ ಪಾರ್ಕ್ ಅಭಿವೃದ್ಧಿಗೆ ಹಿಂದಿನ ಸರ್ಕಾರದ ಅವಧಿಯಲ್ಲಿ ತಾತ್ವಿಕ ಒಪ್ಪಿಗೆ ನೀಡಿದ ಬಾಕಿ ಹಣವನ್ನೂ ಬಿಡುಗಡೆ ಮಾಡಿ ಕಾಮಗಾರಿ ಪೂರ್ಣಗೊಳಿಸಬೇಕು. ಆದಷ್ಟು ಬೇಗ ಥೀಂ ಪಾರ್ಕ್ ಪ್ರವಾಸಿಗಳ ವೀಕ್ಷಣೆಗೆ ಮುಕ್ತಗೊಳ್ಳುವಂತಾಗಬೇಕೆಂದು ಒತ್ತಾಯಿಸುತ್ತೇನೆ” ಎಂದು ಬರೆದಿದ್ದಾರೆ.

ಕಳೆದ ಆರು ತಿಂಗಳಿನಿಂದ ಪರಶುರಾಮ ಥೀಮ್ ಪಾರ್ಕ್ ಸಾರ್ವಜನಿಕ ಪ್ರವೇಶಕ್ಕೆ ನಿಷೇಧವಿದ್ದು ಪರಶುರಾಮನ ಮೂರ್ತಿಯನ್ನೇ ಅರ್ಧಕ್ಕೆ ಕೆಡವಿ ಸ್ಥಳಾಂತರ ಮಾಡಲಾಗಿದೆ.‌ ಕಾಮಗಾರಿ ನಿರ್ವಹಿಸಿದ್ದ ನಿರ್ಮಿತಿ ಕೇಂದ್ರ ಕಾಮಗಾರಿ ಪೂರ್ತಿಗೊಳಿಸಲು ಎಂದು ಹೇಳಿದ್ದರೂ, ಮೇಲ್ನೋಟಕ್ಕೆ ಕಂಚಿನದ್ದೆಂದು ಹೇಳಿ ಫೈಬರ್ ಮೂರ್ತಿ ಸ್ಥಾಪಿಸಿರುವುದು ಪತ್ತೆಯಾಗಿತ್ತು. ಇದೇ ವಿಚಾರ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ಜಟಾಪಟಿಗೂ ಕಾರಣವಾಗಿತ್ತು. ಇದೀಗ ಮುಖ ಮುಚ್ಚಿಕೊಳ್ಳಲು ಸುನಿಲ್ ಕುಮಾರ್ ಸಿಓಡಿ ತನಿಖೆಯನ್ನು ಸ್ವಾಗತಿಸಿದ್ದಲ್ಲದೆ, ಸುಳ್ಳು ಆರೋಪಗಳಿಗೆ ವಿರಾಮ ಹಾಕಲು ತನಿಖೆ ನಡೆಸಬೇಕೆಂದು ಹೇಳಿ ಸರ್ಕಾರದ ತನಿಖೆಯನ್ನೇ ಅಣಕಿಸಿದ್ದಾರೆ.

CM Siddaramaiah orders CID probe into Parashuram Theme Park issue, MLA Sunil Kumar welcomes decision. Chief Minister Siddaramaiah has ordered a probe by the Criminal Investigation Department (CID) into the alleged corruption charges in the implementation of the Parashurama Theme Park Project at Bailoor in Karkala taluk of Udupi district.