Harish poonja, Tax, Hindus: ಹಿಂದುಗಳ ತೆರಿಗೆ ಹಿಂದುಗಳಿಗೆ ಸಲ್ಲಬೇಕು, ಬೇರೆ ಧರ್ಮದವರಿಗೆ ನೀಡುವುದು ಅನ್ಯಾಯ ; ವಿವಾದಾತ್ಮಕ ಪೋಸ್ಟ್ ಹಾಕಿದ ಶಾಸಕ ಹರೀಶ್ ಪೂಂಜ 

09-02-24 01:57 pm       Mangalore Correspondent   ಕರಾವಳಿ

ಕೇಂದ್ರ ಸರ್ಕಾರದ ಅನುದಾನ ತಾರತಮ್ಯ ಹೆಸರಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ವಿವಾದಾತ್ಮಕ ಪೋಸ್ಟ್ ಹಾಕಿದ್ದಾರೆ. ಹಿಂದುಗಳ ತೆರಿಗೆ ಹಣ ಹಿಂದುಗಳ ಅಭಿವೃದ್ಧಿಗಷ್ಟೆ ವಿನಿಯೋಗ ಆಗಬೇಕು.‌

ಮಂಗಳೂರು, ಫೆ.9: ಕೇಂದ್ರ ಸರ್ಕಾರದ ಅನುದಾನ ತಾರತಮ್ಯ ಹೆಸರಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ವಿವಾದಾತ್ಮಕ ಪೋಸ್ಟ್ ಹಾಕಿದ್ದಾರೆ. ಹಿಂದುಗಳ ತೆರಿಗೆ ಹಣ ಹಿಂದುಗಳ ಅಭಿವೃದ್ಧಿಗಷ್ಟೆ ವಿನಿಯೋಗ ಆಗಬೇಕು.‌ ಹಿಂದುಗಳ ತೆರಿಗೆ ಹಣ ಬೇರೆ ಧರ್ಮದ ಜನರಿಗೆ ಸೇರುವುದು ಅನ್ಯಾಯ ಎಂದು ಫೇಸ್ಬುಕ್ ಜಾಲತಾಣದಲ್ಲಿ ಪೋಸ್ಟ್ ಹಾಕಿರುವುದು ಪರ- ವಿರೋಧ ಚರ್ಚೆಗೆ ಕಾರಣವಾಗಿದೆ. 

ದೇಶದಲ್ಲಿರುವ ತೆರಿಗೆ ಹಣದಲ್ಲಿ ಹಿಂದುಗಳ ಪಾಲು ಎಷ್ಟು? ಇದರಲ್ಲಿ ಹಿಂದುಗಳ ಅಭಿವೃದ್ಧಿಗೆ ಉಪಯೋಗ ಆಗುತ್ತಿರುವುದೆಷ್ಟು ? ಹಿಂದುಗಳ ತೆರಿಗೆ ಹಿಂದುಗಳಿಗೆ ಸಲ್ಲಬೇಕು ಎಂದು ಪೋಸ್ಟ್ ಹಾಕಿದ್ದಾರೆ. ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್ ಪೂಂಜ ಹಾಕಿರುವ ಪೋಸ್ಟ್ ಬಗ್ಗೆ ಭಾರೀ ವಿರೋಧ ವ್ಯಕ್ತವಾಗಿದೆ. 

ಶಾಸಕನ ಪೋಸ್ಟ್ ಬಗ್ಗೆ ಫೇಸ್ಬುಕ್ ನಲ್ಲಿ ಪರ - ವಿರೋಧ ಚರ್ಚೆಯಾಗಿದೆ.‌ ಅಲ್ಲದೆ, ನೀವು ಯಾರ ತೆರಿಗೆಯಲ್ಲಿ ಖರ್ಚು ಮಾಡುತ್ತಿದ್ದೀರಿ, ಕೇವಲ ಹಿಂದುಗಳದ್ದಾ ? ಎಂದೊಬ್ಬರು ಪ್ರಶ್ನೆ ಮಾಡಿದ್ದಾರೆ. ‌ಅಲ್ಲದೆ, ಈ ರೀತಿ ಹಿಂದು - ಮುಸ್ಲಿಂ ಅಂತ ಯಾಕೆ ವಿಭಜನೆ ಮಾಡುತ್ತೀರಿ ಎಂದು ಟೀಕೆ ಮಾಡಿದ್ದಾರೆ.

Tax money of Hindus should be given to Hindus not to any other community, MLA Harish Poonja sparks controversy by stating that that the tax money should be used only for the development of Hindus.