ಕಡಂದಲೆ ; ನದಿಗೆ ಈಜಲು ಹೋದ ಯುವತಿ ಸೇರಿ ನಾಲ್ವರು ನೀರುಪಾಲು !!

24-11-20 06:26 pm       Mangalore Correspondent   ಕರಾವಳಿ

ಶ್ರೀಧರ ಆಚಾರ್ಯ ಎಂಬವರ ಮನೆಗೆ ವಿವಾಹ ಸಮಾರಂಭಕ್ಕೆ ಬಂದಿದ್ದ ಓರ್ವ ಯುವತಿ ಸೇರಿ ನಾಲ್ವರು ನೀರುಪಾಲಾದ ಘಟನೆ ಕಡಂದಲೆ ನಡೆದಿದೆ.

ಮೂಡುಬಿದಿರೆ, ನ. 24: ನದಿಗೆ ನೀರಾಟಕ್ಕೆ ತೆರಳಿದ್ದ ಓರ್ವ ಯುವತಿ ಸೇರಿ ನಾಲ್ವರು ನೀರುಪಾಲಾದ ಘಟನೆ ಕಡಂದಲೆ ಬಳಿಯ ತುಲೆಮುಗೇರ್ ಎಂಬಲ್ಲಿ ನಡೆದಿದೆ.

ವಾಮಂಜೂರು ಮೂಡುಶೆಡ್ಡೆ ನಿವಾಸಿ ನಿಖಿಲ್(18) ಹಾಗೂ ಹರ್ಷಿತಾ( 20), ವೇಣೂರಿನ ಸುಭಾಷ್(19) ಹಾಗೂ ಬಜ್ಪೆ ಪೆರಾರ ನಿವಾಸಿ ರವಿ(30) ನೀರುಪಾಲಾದವರು ಎಂದು ಗುರುತಿಸಲಾಗಿದೆ. ಈ ಪೈಕಿ ಹರ್ಷಿತಾ ಹಾಗೂ ಇನ್ನೊಬ್ಬರ ಮೃತದೇಹ ಪತ್ತೆಯಾಗಿದೆ. ಉಳಿದ ಇಬ್ಬರಿಗಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳೀಯರ ನೆರವಿನಿಂದ ಶೋಧ ಮುಂದುವರಿಸಿದ್ದಾರೆ.

ಕಡಂದಲೆ ಕಡೆಯಿಂದ ಹರಿದು ಬರುವ ಶಾಂಭವಿ ನದಿಯಲ್ಲಿ ಘಟನೆ ನಡೆದಿದೆ. ಕಡಂದಲೆ ಶ್ರೀಧರ ಆಚಾರ್ಯ ಎಂಬವರ ಮನೆಗೆ ವಿವಾಹ ಸಮಾರಂಭಕ್ಕೆ ಬಂದಿದ್ದ ಇವರು ನೀರಿನಲ್ಲಿ ಈಜಾಟಕ್ಕೆಂದು ನದಿಗೆ ಇಳಿದಿದ್ದರು. ಆಳ ಇರುವ ಪ್ರದೇಶದಲ್ಲಿ ಈಜಲು ಹೋಗಿದ್ದ ವೇಳೆ ಮುಳುಗಿದ್ದು ಒಬ್ಬರನ್ನು ರಕ್ಷಿಸಲು ಹೋಗಿ ಉಳಿದ ಮೂವರು ಕೂಡ ನೀರು ಪಾರಾಗಿದ್ದಾರೆ ಎನ್ನಲಾಗುತ್ತಿದೆ.

In a tragic incident Four Including a Girl died after they drowned in the river at Moodbidri while swimming.