ಮಣಿಪಾಲ ; ಪರೀಕ್ಷೆ ಭಯದಲ್ಲಿ ಕಾಲೇಜು ಕಟ್ಟಡದಿಂದ ಜಿಗಿದು ವಿದ್ಯಾರ್ಥಿ ಆತ್ಮಹತ್ಯೆ 

17-02-24 02:22 pm       Udupi Correspondent   ಕರಾವಳಿ

ಪರೀಕ್ಷೆ ನಡೆಯುತ್ತಿದ್ದಾಗಲೇ ಫಲಿತಾಂಶದ ಬಗ್ಗೆ ಭೀತಿಗೊಳಗಾಗಿ ಕಾಲೇಜು ಕಟ್ಟಡದಿಂದ ಹೊರಕ್ಕೆ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಣಿಪಾಲದಲ್ಲಿ ನಡೆದಿದೆ. 

ಉಡುಪಿ, ಫೆ.17: ಪರೀಕ್ಷೆ ನಡೆಯುತ್ತಿದ್ದಾಗಲೇ ಫಲಿತಾಂಶದ ಬಗ್ಗೆ ಭೀತಿಗೊಳಗಾಗಿ ಕಾಲೇಜು ಕಟ್ಟಡದಿಂದ ಹೊರಕ್ಕೆ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಣಿಪಾಲದಲ್ಲಿ ನಡೆದಿದೆ. 

ಮಣಿಪಾಲ್ ಯುನಿವರ್ಸಿಟಿಯ ಎಂಸಿಎಚ್ ಪಿ ವಿಭಾಗದಲ್ಲಿ ಕಲಿಯುತ್ತಿದ್ದ ಬಿಹಾರ ಮೂಲದ ವಿದ್ಯಾರ್ಥಿ ಸತ್ಯಂ ಸುಮನ್ (19) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಇತರೇ ವಿದ್ಯಾರ್ಥಿಗಳು ನೋಡುತ್ತಿದ್ದಂತೆಯೇ ಸುಮನ್ ಕಟ್ಟಡದಿಂದ ಹೊರಕ್ಕೆ ಹಾರಿದ್ದಾನೆ. ಆನಂತರ, ವಿದ್ಯಾರ್ಥಿಯ ರಕ್ಷಣೆಗಾಗಿ ಪರೀಕ್ಷೆ ಬಿಟ್ಟು ಅತ್ತಿತ್ತ ಓಡಾಡಿದ್ದಾರೆ. 

ಯುವಕ ಪರೀಕ್ಷೆ ಬರೆಯಲೆಂದು ಕೋಣೆಗೆ ಬಂದಿದ್ದ. ಆದರೆ ಪ್ರಶ್ನೆ ಪತ್ರಿಕೆ ನೋಡಿದ ಮೇಲೆ ಆತಂಕಗೊಂಡವನಂತೆ ಕಂಡಿದ್ದು ಹೊರಗೆ ಬಂದು ಕಟ್ಟಡದಿಂದ ಜಿಗಿದು ಪ್ರಾಣ ಕಳೆದುಕೊಂಡಿದ್ದಾರೆ. ಆತ ಕಟ್ಟಡದಿಂದ ಜಿಗಿಯುತ್ತಿದ್ದಂತೆಯೇ ಇತರ ವಿದ್ಯಾರ್ಥಿಗಳು ಗಾಬರಿಯಾಗಿ ಓಡುವ ದೃಶ್ಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಬಗ್ಗೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Manipal 19 year old Student commits suicide due to exam fear at Udupi.