BJP MLA Somashekar, Dk Shivakumar, Mangalore: ಡಿಸಿಎಂ ಡಿಕೆಶಿ ಜೊತೆ ಜೊತೆಯಲಿ ಸೋಮಶೇಖರ್ ; ವಿಶೇಷ ವಿಮಾನದಲ್ಲಿ ಒಟ್ಟಿಗೆ ಮಂಗಳೂರು ಬಂದಿದ್ದ ನಡೆ ಬಗ್ಗೆ ಕುತೂಹಲ, ಬಿಜೆಪಿ ತೊರೆಯುವ ಸಾಧ್ಯತೆ 

19-02-24 01:09 pm       Mangalore Correspondent   ಕರಾವಳಿ

ಬಿಜೆಪಿಯಲ್ಲಿ ಮುನಿಸಿನಲ್ಲಿರುವ ಮಾಜಿ ಸಚಿವ ಎಸ್.ಟಿ ಸೋಮಶೇಖರ್, ಡಿಸಿಎಂ ಡಿ.ಕೆ. ಶಿವಕುಮಾರ್ ಅವರೊಂದಿಗೆ ಜೊತೆ ಜೊತೆಯಾಗೇ ಕಾಣಿಸಿಕೊಂಡಿದ್ದಾರೆ‌.

ಮಂಗಳೂರು, ಫೆ.19: ಬಿಜೆಪಿಯಲ್ಲಿ ಮುನಿಸಿನಲ್ಲಿರುವ ಮಾಜಿ ಸಚಿವ ಎಸ್.ಟಿ ಸೋಮಶೇಖರ್, ಡಿಸಿಎಂ ಡಿ.ಕೆ. ಶಿವಕುಮಾರ್ ಅವರೊಂದಿಗೆ ಜೊತೆ ಜೊತೆಯಾಗೇ ಕಾಣಿಸಿಕೊಂಡಿದ್ದಾರೆ‌. ಭಾನುವಾರ ಜೊತೆಯಾಗಿ ವಿಮಾನದಲ್ಲಿ ಬೆಂಗಳೂರಿನಿಂದ ಮಂಗಳೂರಿಗೆ ಆಗಮಿಸಿದ್ದ ಸೋಮಶೇಖರ್, ಕರ್ಣಾಟಕ ಬ್ಯಾಂಕ್ ಶತಮಾನೋತ್ಸವ ಅಚರಣೆ ಸಮಾರಂಭದಲ್ಲಿ ಪಾಲ್ಗೊಂಡಿದ್ದಾರೆ. 

ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಕರ್ಣಾಟಕ ಬ್ಯಾಂಕ್ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದರು. ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಬರುತ್ತಾರೆ ಎಂದಿದ್ದರೂ ಅವರು ಬರೋದು ಕ್ಯಾನ್ಸಲ್ ಆಗಿತ್ತು. ಆದರೆ ಸೋಮಶೇಖರ್ ಅವರಿಗೆ ಕಾರ್ಯಕ್ರಮಕ್ಕೆ ಆಹ್ವಾನ ಇರಲಿಲ್ಲ. ಆದರೆ ಡಿಕೆಶಿ ಜತೆಯಲ್ಲೇ ಬಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. 

ಎಸ್.ಟಿ‌.ಸೋಮಶೇಖರ್ ಬಿಜೆಪಿ ಶಾಸಕರಾಗಿದ್ದರೂ, ಕಾಂಗ್ರೆಸ್ ಜೊತೆಗೆ ಹಲವು ಬಾರಿ ಗುರುತಿಸಿಕೊಂಡಿದ್ದು ಚರ್ಚೆಗೆ ಗ್ರಾಸವಾಗಿತ್ತು. ಬಿಜೆಪಿ ಜೊತೆಗೆ ವಿರಸ ಹೊಂದಿರುವ ಅವರು ಕಾಂಗ್ರೆಸ್ ಸೇರುತ್ತಾರೆ ಎಂದು‌ ಹಲವು ಸಂದರ್ಭಗಳಲ್ಲಿ ಸುದ್ದಿಗಳು ಹರಿದಾಡಿದ್ದವು. ಇದೀಗ ಮಂಗಳೂರಿನ ಕಾರ್ಯಕ್ರಮಕ್ಕೆ ಬಂದಿದ್ದ ಡಿಕೆಶಿ ಜೊತೆಗೆ ವಿಶೇಷ ವಿಮಾನದಲ್ಲಿ ಕಾಣಿಸಿಕೊಂಡು ಚರ್ಚೆಗೆ ಕಾರಣವಾಗಿದ್ದಾರೆ. ಈ ಮೂಲಕ ಎಸ್.ಟಿ‌ ಸೋಮಶೇಖರ್ ನಡೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರುತ್ತಾರೆಯೇ ಎಂಬ ಶಂಕೆ ಮೂಡುವಂತೆ ಮಾಡಿದೆ.

BJP MLA Somashekar and Dcm Dk Shivakumar come together in special flight to Mangalore.