Akshay Kallega murder case, revenge: ಅಕ್ಷಯ್ ಕಲ್ಲೇಗ ಕೊಲೆಗೆ ಪ್ರತೀಕಾರ ; ಆರೋಪಿ ಸೋದರನ ಹತ್ಯೆಗೆ ಸ್ಕೆಚ್ ಹಾಕಿದ್ದ ನಾಲ್ವರನ್ನು ಬಂಧಿಸಿದ ಪೊಲೀಸರು 

21-02-24 04:30 pm       Mangalore Correspondent   ಕರಾವಳಿ

ಅಕ್ಷಯ್ ಕಲ್ಲೇಗ ಕೊಲೆಗೆ ಪ್ರತೀಕಾರ ತೀರಿಸಲು ಹೊಂಚು ಹಾಕುತ್ತಿದ್ದ ನಾಲ್ವರನ್ನು ಪುತ್ತೂರು ಪೊಲೀಸರು ಬಂಧಿಸಿದ್ದಾರೆ. ಆಮೂಲಕ ಆಗಬಹುದಾಗಿದ್ದ ಮತ್ತೊ‌ಂದು ರಕ್ತಪಾತ ಕೃತ್ಯವನ್ನು ಪೊಲೀಸರು ತಡೆದಿದ್ದಾರೆ.

ಪುತ್ತೂರು, ಫೆ.21: ಅಕ್ಷಯ್ ಕಲ್ಲೇಗ ಕೊಲೆಗೆ ಪ್ರತೀಕಾರ ತೀರಿಸಲು ಹೊಂಚು ಹಾಕುತ್ತಿದ್ದ ನಾಲ್ವರನ್ನು ಪುತ್ತೂರು ಪೊಲೀಸರು ಬಂಧಿಸಿದ್ದಾರೆ. ಆಮೂಲಕ ಆಗಬಹುದಾಗಿದ್ದ ಮತ್ತೊ‌ಂದು ರಕ್ತಪಾತ ಕೃತ್ಯವನ್ನು ಪೊಲೀಸರು ತಡೆದಿದ್ದಾರೆ. ಬಂಧಿತರನ್ನು ಬಂಟ್ವಾಳ ನಿವಾಸಿ ಕಿಶೋರ್‌ ಕಲ್ಲಡ್ಕ (36), ಪುತ್ತೂರಿನ ಮನೋಜ್‌ (23), ಆಶಿಕ್‌ (28), ಸನತ್‌ ಕುಮಾರ್‌ (24) ಎಂದು ಗುರುತಿಸಲಾಗಿದೆ. 

ಅಕ್ಷಯ್ ಕಲ್ಲೆಗ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದು ಸದ್ಯ ಜೈಲಿನಲ್ಲಿರುವ ಮನೀಶ್ ಎಂಬಾತನ ಸಹೋದರ ಮನೋಜ್ ಮೇಲೆ ಸೇಡು ತೀರಿಸಲು ಸ್ಕೆಚ್ ಹಾಕಿದ್ದರು. ಇದಕ್ಕೂ ಮೊದಲು ಮನೋಜ್ ಗೆ ಬೆದರಿಕೆ ಕರೆ ಮಾಡಿದ್ದ ಆರೋಪಿಗಳು, ನಿನ್ನ ತಮ್ಮ ಮನೀಶ್ ಹಾಗೂ ಉಳಿದ ಆರೋಪಿಗಳು ಜೈಲಿನಲ್ಲಿದ್ದಾರೆ, ಅವರನ್ನೂ ಬಿಡೋದಿಲ್ಲ. ಆದ್ರೆ ನಿನ್ನನ್ನ ಜೀವ ಸಹಿತ ಬಿಡಲ್ಲ ಎಂದು ಬೆದರಿಕೆ ಹಾಕಿದ್ದರು. 

ಈ ಬಗ್ಗೆ ಮನೋಜ್ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ನಡುವೆ ಮನೋಜ್ ಚಲನವಲನ ಗಮನಿಸುತ್ತಿದ್ದ ದುಷ್ಕರ್ಮಿಗಳ ತಂಡ, ಪುತ್ತೂರಿನ ಮುಕ್ರಂಪಾಡಿಯಲ್ಲಿ ಹೊಂಚು ಹಾಕಿತ್ತು. ಕಾರಿನಲ್ಲಿ ತಲ್ವಾರ್ ಇಟ್ಟುಕೊಂಡು ಮನೋಜ್ ಮೇಲೆ ರಿವೇಂಜ್ ತೀರಿಸಿಕೊಳ್ಳಲು ರೆಡಿಯಾಗಿದ್ದರು. ಇದೇ ವೇಳೆ ಖಚಿತ ಮಾಹಿತಿ ಪಡೆದು ದಾಳಿ ನಡೆಸಿದ ಪೊಲೀಸರು ಕಾರಿನಲ್ಲಿದ್ದ ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ.  

ಕಳೆದ ನವೆಂಬರ್‌ ತಿಂಗಳಲ್ಲಿ ಕಲ್ಲೇಗ ಟೈಗರ್ಸ್ ತಂಡದ ರೂವಾರಿ ಅಕ್ಷಯ್ ಕಲ್ಲೇಗನನ್ನು ನಡುರಾತ್ರಿಯಲ್ಲಿ ಮಾತುಕತೆಗೆ ಕರೆದು ಅಟ್ಟಾಡಿಸಿ ಕೊಲೆ ಮಾಡಿದ್ದರು.

Akshay Kallega murder case, plot for revenge murder, four arrested by Dk Police in Puttur. Kallega was 26 years old and a resident of Puttur. The murder occurred at Nehru Nagar Stadium around 11:30 PM when Kallega was attacked with swords and killed on the spot. The incident is believed to have been prompted by a minor altercation between Kallega and the accused. Manish and Chethan have been arrested in connection with the murder.