Mangalore lawyer Geetha civil judge: ಮಂಗಳೂರಿನ ಮಹಿಳಾ ವಕೀಲೆ ಗೀತಾ ಸಿವಿಲ್ ಜಡ್ಜ್ ಹುದ್ದೆಗೆ ಆಯ್ಕೆ

23-02-24 10:29 pm       Mangalore Correspondent   ಕರಾವಳಿ

ಮಂಗಳೂರಿನಲ್ಲಿ ವಕೀಲರಾಗಿ ಪ್ರಾಕ್ಟೀಸ್ ಮಾಡುತ್ತಿದ್ದ ಗೀತಾ ಡಿ. ಅವರು ಕೂಡ 2023ನೇ ಸಾಲಿನ ಕರ್ನಾಟಕ ಸಿವಿಲ್ ಜಡ್ಜ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದು, ಜಡ್ಜ್ ಹುದ್ದೆಗೇರಿದ್ದಾರೆ.

ಮಂಗಳೂರು, ಫೆ.23: ಮಂಗಳೂರಿನಲ್ಲಿ ವಕೀಲರಾಗಿ ಪ್ರಾಕ್ಟೀಸ್ ಮಾಡುತ್ತಿದ್ದ ಗೀತಾ ಡಿ. ಅವರು ಕೂಡ 2023ನೇ ಸಾಲಿನ ಕರ್ನಾಟಕ ಸಿವಿಲ್ ಜಡ್ಜ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದು, ಜಡ್ಜ್ ಹುದ್ದೆಗೇರಿದ್ದಾರೆ.

ಮೂಲತಃ ತುಮಕೂರು ಜಿಲ್ಲೆಯ ನಿವಾಸಿಯಾದ ಗೀತಾ ಅವರು, ಚಿಕ್ಕಮಗಳೂರಿನಲ್ಲಿ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಲಯದಲ್ಲಿ ಜಡ್ಜ್ ಆಗಿ ನಿವೃತ್ತರಾಗಿದ್ದ ಡಿ. ಕಂಬೇಗೌಡ ಅವರ ಪುತ್ರಿ. ಮೂಡುಬಿದ್ರೆ ಆಳ್ವಾಸ್ ಕಾಲೇಜಿನಲ್ಲಿ ಪಿಯು ಮತ್ತು ಬಿಎಸ್ಸಿ ಪದವಿ ಪೂರೈಸಿದ್ದ ಗೀತಾ ಅವರು, ಮಂಗಳೂರಿನ ಎಸ್ ಡಿಎಂ ಕಾನೂನು ಕಾಲೇಜಿನಲ್ಲಿ ಎಲ್ ಎಲ್ ಬಿ ಪದವಿ ಗಳಿಸಿದ್ದರು. ಬಳಿಕ ಮಂಗಳೂರಿನ ವಕೀಲರಾದ ಮಯೂರ ಕೀರ್ತಿ ಮತ್ತು ಶರತ್ ಕುಮಾರ್ ಬಿ ಅವರ ಜೊತೆ ಜೂನಿಯರ್ ಆಗಿ ಕೆಲಸ ಮಾಡುತ್ತಿದ್ದರು.

ಒಂದು ವರ್ಷದ ಹಿಂದೆ ಪುತ್ತೂರು ತಾಲೂಕಿನ ಚಾರ್ವಾಕ ಮೂಲದ ವಕೀಲ ಕಾರ್ತಿಕ್ ಮಾಚಿಲ ಅವರನ್ನು ಮದುವೆಯಾಗಿದ್ದು ಬಳಿಕ ಮಂಗಳೂರಿನಲ್ಲಿ ವಕೀಲ ದಂಪತಿಯಾಗಿ ಸ್ವಂತ ಕಚೇರಿ ಆರಂಭಿಸಿ ಪ್ರಾಕ್ಟೀಸ್ ಮಾಡುತ್ತಿದ್ದರು. 2020ರಲ್ಲಿ ಎಲ್ ಎಲ್ ಬಿ ಪೂರೈಸಿದ್ದ ಗೀತಾ ಸತತ ಮೂರು ವರ್ಷದಿಂದ ಸಿವಿಲ್ ಜಡ್ಜ್ ಪರೀಕ್ಷೆ ಬರೆಯುತ್ತಿದ್ದರು. ಮೂರನೇ ಪ್ರಯತ್ನದಲ್ಲಿ ತೇರ್ಗಡೆಯಾಗಿದ್ದು, ಜಡ್ಜ್ ಹುದ್ದೆಗೆ ಸೆಲೆಕ್ಟ್ ಆಗಿದ್ದಾರೆ.

Mangalore lawyer Geetha appointed as civil judge. She is a native of Tumkur, she was a junior working under Sharath Kumar.