Puttur Vinay Bidappa, Daiva, Kantara 2: ಕಾಂತಾರ-2 ಶೂಟಿಂಗ್ ; ಪುತ್ತೂರಿನಲ್ಲಿ ಕಲ್ಲುರ್ಟಿ ದೈವದ ಅಭಯ ಪಡೆದ 'ರಾಜ'ನ ಪಾತ್ರಧಾರಿ ವಿನಯ್ ಬಿದ್ದಪ್ಪ 

24-02-24 12:18 pm       Mangalore Correspondent   ಕರಾವಳಿ

ರಿಷಬ್ ಶೆಟ್ಟಿ ನಟನೆ, ನಿರ್ದೇಶನದ ಕಾಂತಾರ-2 ಸಿನಿಮಾ ಶೂಟಿಂಗ್ ಭರದಿಂದ ಸಾಗುತ್ತಿದೆ. ಇದರ ನಡುವೆ, ಕಾಂತಾರ ಸಿನಿಮಾದಲ್ಲಿ ರಾಜನ ಪಾತ್ರದಲ್ಲಿ ಮಿಂಚಿದ್ದ ನಟ ವಿನಯ್ ಬಿದ್ದಪ್ಪ ಪುತ್ತೂರಿಗೆ ಬಂದಿದ್ದು ಕಲ್ಲುರ್ಟಿ  ದೈವದ ಆಶೀರ್ವಾದ ಪಡೆದಿದ್ದಾರೆ. 

ಪುತ್ತೂರು, ಫೆ.24 : ರಿಷಬ್ ಶೆಟ್ಟಿ ನಟನೆ, ನಿರ್ದೇಶನದ ಕಾಂತಾರ-2 ಸಿನಿಮಾ ಶೂಟಿಂಗ್ ಭರದಿಂದ ಸಾಗುತ್ತಿದೆ. ಇದರ ನಡುವೆ, ಕಾಂತಾರ ಸಿನಿಮಾದಲ್ಲಿ ರಾಜನ ಪಾತ್ರದಲ್ಲಿ ಮಿಂಚಿದ್ದ ನಟ ವಿನಯ್ ಬಿದ್ದಪ್ಪ ಪುತ್ತೂರಿಗೆ ಬಂದಿದ್ದು ಕಲ್ಲುರ್ಟಿ  ದೈವದ ಆಶೀರ್ವಾದ ಪಡೆದಿದ್ದಾರೆ. 

ಕಾಂತಾರ-೨ರಲ್ಲಿ ಪ್ರಮುಖ ಪಾತ್ರ ವಹಿಸಲಿರುವ ವಿನಯ್ ಬಿದ್ದಪ್ಪ ಪುತ್ತೂರಿನ ಪನಡ್ಕದಲ್ಲಿ ನಡೆದ ದೈವದ ನೇಮದಲ್ಲಿ ಕಲ್ಲುರ್ಟಿ ದೈವದ ಬಳಿ ಸಿನಿಮಾ ಶೂಟಿಂಗ್ ಬಗ್ಗೆ ಬೇಡಿಕೊಂಡಿದ್ದಾರೆ.  ಆಗ ಧರ್ಮಕ್ಕೆ ಅಪಚಾರ ಆಗದ ರೀತಿ ಸಿನಿಮಾ ಮಾಡಿ, ನಿಮಗೆ ಯಶಸ್ಸಾಗ್ತದೆ ಎಂದು ದೈವ ಅಭಯ ನೀಡಿದೆ ಎಂದು ತಿಳಿದುಬಂದಿದೆ. 

ಬಿಝಿ ನಟರಾಗಿರುವ ವಿನಯ್ ಬಿದ್ದಪ್ಪ ಕೆಜಿಎಫ್ ನಂತಹ ಸಿನಿಮಾದಲ್ಲಿ ನಟಿಸಿದ್ದಾರೆ. ಎಲ್ಲಾ ಸಿನಿಮಾಗಳನ್ನು ತ್ಯಾಗ ಮಾಡಿ ಎರಡು ವರ್ಷಗಳ ಕಾಲ್ ಶೀಟನ್ನು ರಿಷಬ್ ಶೆಟ್ಟಿ ಪಡೆದಿದ್ದಾರೆ ಎನ್ನಲಾಗಿದೆ. ಕಾಂತಾರ-2 ಶೂಟಿಂಗ್ ಉದ್ದೇಶಕ್ಕೆ ವಿನಯ್ ಬಿದ್ದಪ್ಪ, ರಿಷಬ್ ಜೊತೆಗಿದ್ದಾರೆ. 

ಈಗಾಗಲೇ ದೈವಾರಾಧನೆ ಸಿನಿಮಾದಲ್ಲಿ ಬಳಸಬಾರದೆಂದು ಪ್ರಬಲ ವಿರೋಧ ಎದುರಾಗಿರುವಾಗಲೇ ಕಾಂತಾರ-2 ಶೂಟಿಂಗ್ ನಡೆಯುತ್ತಿದೆ. ಸಿನಿಮಾದಲ್ಲಿ ದೈವದ ಪಾತ್ರ ಇಲ್ಲ ಎನ್ನಲಾಗುತ್ತಿದ್ದರೂ, ಮೊದಲ ಭಾಗದಲ್ಲಿ ಪಂಜುರ್ಲಿ ದೈವದ ಕಾರಣಿಕ ತೋರಿಸುವ ಚಿತ್ರಣವೇ ಮುಖ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರಮುಖ ಪಾತ್ರಧಾರಿ ವಿನಯ್ ಬಿದ್ದಪ್ಪ ಇದೀಗ ಕಲ್ಲುರ್ಟಿ ದೈವದ ಮೊರೆ ಹೋಗಿದ್ದಾರೆ.

Puttur Vinay Bidappa offers prayers with Daiva for the movie shooting of Kantara 2.