ಬ್ರೇಕಿಂಗ್ ನ್ಯೂಸ್
24-02-24 07:41 pm Mangalore Correspondent ಕರಾವಳಿ
ಮಂಗಳೂರು, ಫೆ.24: ಪಿಎಚ್ ಡಿ ವಿದ್ಯಾರ್ಥಿನಿ ಚೈತ್ರಾ ಹೆಬ್ಬಾರ್(27) ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಪುತ್ತೂರು ಮೂಲದ ಮುಸ್ಲಿಂ ಯುವಕ ಶಾರೂಕ್ ಶೇಕ್ ಎಂಬಾತನ ಜೊತೆಗೆ ತೆರಳಿರುವ ಅನುಮಾನ ದಟ್ಟವಾಗಿದೆ.
ಎಂಎಸ್ಸಿ ಪೂರೈಸಿದ್ದ ಚೈತ್ರಾ ಹೆಬ್ಬಾರ್ ದೇರಳಕಟ್ಟೆಯ ಖಾಸಗಿ ಯುನಿವರ್ಸಿಟಿಯಲ್ಲಿ ಪಿಎಚ್ ಡಿ ಮಾಡುತ್ತಿದ್ದಳು. ಕೋಟೆಕಾರು ಬಳಿಯ ಮಾಡೂರಿನಲ್ಲಿ ಪಿಜಿ ಒಂದರಲ್ಲಿದ್ದ ಯುವತಿಗೆ ಮುಸ್ಲಿಂ ಯುವಕನ ಜೊತೆಗೆ ಸ್ನೇಹ ಇತ್ತು ಎನ್ನಲಾಗಿದೆ. ಫೆ.17ರಂದು ತನ್ನ ಸ್ಕೂಟರಿನಲ್ಲಿ ಹೋದಾಕೆ ಮರಳಿ ಬಂದಿರಲಿಲ್ಲ. ಈಕೆಯ ತಂದೆ ತೀರಿಕೊಂಡಿದ್ದರಿಂದ ಮಂಗಳೂರಿನಲ್ಲಿ ನೆಲೆಸಿದ್ದ ದೊಡ್ಡಪ್ಪನೇ ಶಿಕ್ಷಣ ಮಾಡಿಸುತ್ತಿದ್ದರು. ಯುವತಿ ನಾಪತ್ತೆ ವಿಷಯ ತಿಳಿದು ಮರುದಿನ ಉಳ್ಳಾಲ ಠಾಣೆಗೆ ದೂರು ನೀಡಿದ್ದರು.
ಶಾರೂಕ್ ಶೇಖ್ ಬಂಟ್ವಾಳದ ನೇರಳಕಟ್ಟೆ ನಿವಾಸಿಯಾಗಿದ್ದು, ಪುತ್ತೂರಿನ ಕೂರ್ನಡ್ಕದ ಚಿಕ್ಕಮ್ಮನ ಮನೆಯಲ್ಲಿ ವಾಸವಿದ್ದ. ಈ ಹಿಂದೆ ಸೌದಿ ಅರೇಬಿಯಾ, ಕತಾರಿನಲ್ಲಿ ಕೆಲಸಕ್ಕಿದ್ದು ಆನಂತರ ಊರಿನಲ್ಲಿಯೇ ನೆಲೆಸಿದ್ದ. ಕತಾರಿನಲ್ಲಿದ್ದಾಗ ಪ್ರಕರಣ ಒಂದರಲ್ಲಿ ಸಿಕ್ಕಿಬಿದ್ದು ಜೈಲು ಪಾಲಾಗಿದ್ದ ಎನ್ನುವ ಮಾಹಿತಿಯೂ ಇದೆ. ಆನಂತರ ಊರಿಗೆ ಬಂದು ಗಾಂಜಾ ವಹಿವಾಟಿನಲ್ಲಿ ತೊಡಗಿಸಿಕೊಂಡಿದ್ದ ಎನ್ನಲಾಗುತ್ತಿದ್ದು, ಚೈತ್ರಾಗೂ ಗಾಂಜಾ. ಡ್ರಗ್ಸ್ ಅಮಲು ಹತ್ತಿಸಿದ್ದ ಎನ್ನುವ ಮಾತು ಕೇಳಿಬರುತ್ತಿದೆ.
ಚೈತ್ರಾ ಪುತ್ತೂರು ಮೂಲದ ಯುವತಿಯಾಗಿದ್ದು, ಮಂಗಳೂರಿನಲ್ಲಿಯೇ ಶಿಕ್ಷಣ ಪೂರೈಸಿದ್ದಳು. ಇದೀಗ ಶಾರೂಕ್ ಶೇಖ್ ತೆಕ್ಕೆಗೆ ಬಿದ್ದು ಆತನ ಜೊತೆಗೆ ಪರಾರಿಯಾಗಿದ್ದಾಳೆ ಎನ್ನಲಾಗುತ್ತಿದೆ. ಚೈತ್ರಾಳ ಸ್ಕೂಟರ್ ಎರಡು ದಿನಗಳ ಹಿಂದೆ ಸುರತ್ಕಲ್ ಬಳಿ ಪತ್ತೆಯಾಗಿದ್ದು, ಅದನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆಕೆಯ ಬ್ಯಾಂಕ್ ಖಾತೆಯಿಂದ ಸುರತ್ಕಲ್ ನಲ್ಲಿ ಎಟಿಎಂ ಒಂದರಿಂದ ಎರಡು ಲಕ್ಷ ರೂಪಾಯಿ ಹಣ ಡ್ರಾ ಮಾಡಲಾಗಿದೆ ಎನ್ನುವ ಮಾಹಿತಿಯನ್ನು ಪೊಲೀಸರು ಕಲೆ ಹಾಕಿದ್ದಾರೆ. ಸದ್ಯ ಆಕೆಯ ಬ್ಯಾಂಕ್ ಖಾತೆಯನ್ನು ಬ್ಲಾಕ್ ಮಾಡಿದ್ದಾರೆ. ಇವರು ಬೆಂಗಳೂರಿಗೆ ಪರಾರಿಯಾಗಿದ್ದಾರೆ ಎನ್ನಲಾಗುತ್ತಿದ್ದು, ಪೊಲೀಸರು ಬೆನ್ನು ಹತ್ತಿದ್ದಾರೆ.
ಚೈತ್ರಾಗೆ ಪಿಎಚ್ ಡಿ ಫೆಲೋಶಿಪ್ ಹೆಸರಲ್ಲಿ ತಿಂಗಳಿಗೆ 40 ಸಾವಿರ ರೂ.ನಷ್ಟು ಸ್ಟೈಪಂಡ್ ಬರುತ್ತಿತ್ತು. ಹೀಗಾಗಿ ಬೇಕಾಬಿಟ್ಟಿ ಖರ್ಚು ಮಾಡುತ್ತಿದ್ದಳು. ಅತ್ತ ಶಾರೂಕ್ ಶೇಖ್ ಕೈಯಲ್ಲಿ ಏನೂ ಇಲ್ಲದಿದ್ದರೂ, ಆಕೆಯ ದುಡ್ಡನ್ನೇ ಪಡೆದು ಖರ್ಚು ಮಾಡುತ್ತಿದ್ದಾರೆ ಎನ್ನುವ ಶಂಕೆಯಿದೆ. ಇತ್ತ ಸುಶಿಕ್ಷಿತ ಬ್ರಾಹ್ಮಣ ಯುವತಿ ಮುಸ್ಲಿಂ ಯುವಕನ ಜೊತೆ ಹೋಗಿದ್ದಾಳೆ ಎನ್ನುವುದು ಕುಟುಂಬಸ್ಥರನ್ನು ಕಂಗಾಲಾಗಿಸಿದೆ.
Mangalore phd student chaitra Hebbar missing case, two wheeler found at Surathkal. It is alleged that Chaitra has ran away with a Muslim Drug Addict youth from Mangalore on Feb 17th.
07-03-25 09:21 pm
Bangalore Correspondent
CM Budget, Minorities: ಅಲ್ಪಸಂಖ್ಯಾತರ ಕಲ್ಯಾಣಕ್...
07-03-25 09:08 pm
Baby Killed, Gangavathi, Koppal: ಅಗರಬತ್ತಿ ಪವಾ...
07-03-25 07:54 pm
Karnataka Budget News Live: 4.9 ಲಕ್ಷ ಕೋಟಿ ಮೊತ...
07-03-25 02:54 pm
Cm Siddaramaiah, Budget 2025, Puttur: ಸಿದ್ದರಾ...
07-03-25 01:53 pm
08-03-25 04:03 pm
HK News Desk
James Harrison, Golden Arm, Death: ಲಕ್ಷಾಂತರ ಮ...
05-03-25 05:38 pm
14ನೇ ಮಗುವಿಗೆ ತಂದೆಯಾದ ಉದ್ಯಮಿ ಎಲಾನ್ ಮಸ್ಕ್ ! ನಾಲ...
01-03-25 10:39 pm
Trump Vs Zelenskyy, Talk fight: ಶ್ವೇತ ಭವನದಲ್ಲ...
01-03-25 05:35 pm
Pope Francis: ಪೋಪ್ ಫ್ರಾನ್ಸಿಸ್ ಆರೋಗ್ಯ ಸ್ಥಿತಿ ಗ...
01-03-25 01:20 pm
08-03-25 11:05 pm
Mangalore Correspondent
Mangalore Laveena Vegas, PhD Catalytic Syste...
08-03-25 10:54 pm
Mangalore Nellidadi Guthu Controversy: ನೆಲ್ಲಿ...
08-03-25 09:35 pm
Diganth missing case, Found in Udupi: 'ನನ್ನನ್...
08-03-25 06:37 pm
SEZ, Kuttethur, Permude, Fishmeal Company: ಎಸ...
08-03-25 05:14 pm
08-03-25 10:44 pm
HK News Desk
Mangalore, Kasaragod Crime, Robbery: ಕ್ರಶರ್ ಮ...
07-03-25 05:51 pm
Belagavi Couple Murder, Crime: ಬೆಳಗಾವಿಯಲ್ಲಿ ಪ...
05-03-25 10:24 am
ಆನ್ಲೈನ್ ಗೇಮ್ ಚಟ ; ಆಡದಂತೆ ವಿರೋಧಿಸಿದ್ದಕ್ಕೆ ತಂದ...
04-03-25 03:12 pm
ಹರ್ಯಾಣದಲ್ಲಿ ಕಾಂಗ್ರೆಸ್ ಕಾರ್ಯಕರ್ತೆ ಕೊಲೆಗೈದು ಸೂಟ...
03-03-25 01:51 pm