ಬ್ರೇಕಿಂಗ್ ನ್ಯೂಸ್
26-02-24 02:15 pm Mangalore Correspondent ಕರಾವಳಿ
ಮಂಗಳೂರು, ಫೆ.26: ಕನ್ನಡಿಗ ಮೀನುಗಾರರ ಮೇಲೆ ತಮಿಳುನಾಡು ಮತ್ತು ಕೇರಳದ ಮೀನುಗಾರರು ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ. ಕಳೆದ ಎರಡು ತಿಂಗಳಲ್ಲಿ ಮಂಗಳೂರಿನಿಂದ ಮೀನುಗಾರಿಕೆ ತೆರಳಿದ್ದ 50ರಷ್ಟು ಬೋಟುಗಳಿಗೆ ಹಾನಿ ಮಾಡಿದ್ದಲ್ಲದೆ, ಮೀನು ಕಾರ್ಮಿಕರ ಮೇಲೆಯೂ ಹಲ್ಲೆ ನಡೆಸಿದ್ದಾರೆಂದು ಮಂಗಳೂರಿನ ಮೀನುಗಾರರು ಹೇಳಿದ್ದಾರೆ.
ಸಾಮಾನ್ಯವಾಗಿ ನವೆಂಬರ್, ಡಿಸೆಂಬರ್ ಬಳಿಕ ಆಳ ಸಮುದ್ರ ಮೀನುಗಾರಿಕೆ ತೆರಳುತ್ತಾರೆ. ಬೆಲೆಬಾಳುವ ರಿಬ್ಬನ್ ಫಿಶ್ ಹಿಡಿಯುವ ಉದ್ದೇಶದಿಂದ ದಕ್ಷಿಣದತ್ತ ತೆರಳಿ, ಆಳ ಸಮುದ್ರದಲ್ಲಿ ಬಲೆ ಹಾಕುತ್ತಾರೆ. ತಮಿಳುನಾಡಿನ ರಾಮೇಶ್ವರಂ ವರೆಗೂ ಮೀನುಗಾರಿಕೆಗೆ ತೆರಳಿ, ಹಿಂತಿರುಗುವುದು ವಾಡಿಕೆ. ಈ ಬಾರಿ ಆಳ ಸಮುದ್ರಕ್ಕೆ ಹೋಗಿದ್ದಾಗ ಕನ್ನಡಿಗರನ್ನು ಟಾರ್ಗೆಟ್ ಮಾಡಿ, ತಮಿಳು ಮತ್ತು ಕೇರಳದ ಮೀನುಗಾರರು ಹಲ್ಲೆ ನಡೆಸಿದ್ದಾರೆ.



ಕರ್ನಾಟಕದ ಬೋಟುಗಳನ್ನು ಸುತ್ತುವರೆದು ಹಲ್ಲೆ ಮತ್ತು ಬೋಟಿಗೆ ಹಾನಿ ಎಸಗಿರುವ ಘಟನೆಯ ವಿಡಿಯೋವನ್ನು ಸೆರೆಹಿಡಿದಿದ್ದಾರೆ. ಮಂಗಳೂರಿನ ಮೀನುಗಾರರು ಇದನ್ನು ಮೊಬೈಲಿನಲ್ಲಿ ಸೆರೆಹಿಡಿದು ಮಾಧ್ಯಮಕ್ಕೆ ನೀಡಿದ್ದಾರೆ. ಅಲ್ಲದೆ, ಮೀನುಗಾರಿಕಾ ಇಲಾಖೆಯ ಗಮನಕ್ಕೂ ತಂದಿದ್ದಾರೆ. ಜನವರಿ, ಫೆಬ್ರವರಿ ತಿಂಗಳಲ್ಲಿ ಈ ರೀತಿ ಆಳ ಸಮುದ್ರ ಮೀನುಗಾರಿಕೆ ತೆರಳುವ ಸಂದರ್ಭದಲ್ಲಿ ಪ್ರತಿ ಬಾರಿಯೂ ಇಂತಹ ಘಟನೆಗಳಾಗುತ್ತವೆ. ಕಳೆದ ಬಾರಿ ಮಂಗಳೂರಿನ ಮೀನುಗಾರರು ಪ್ರತಿ ಹಲ್ಲೆ ನಡೆಸಿದ ಬಗ್ಗೆ ಕೇರಳದ ಕಣ್ಣೂರಿನಲ್ಲಿ ಕೇಸು ದಾಖಲಾಗಿತ್ತಲ್ಲದೆ, ಇಬ್ಬರನ್ನು ಅರೆಸ್ಟ್ ಮಾಡಿದ್ದ ಘಟನೆಯೂ ನಡೆದಿತ್ತು.
ಸಮುದ್ರ ಮೀನುಗಾರಿಕೆಗೆ ಗಡಿಯ ಭೇದ ಇರುವುದಿಲ್ಲ. ತಮಿಳುನಾಡು ಮೀನುಗಾರರು ಉತ್ತರದತ್ತ ಬಂದು ಕರ್ನಾಟಕದ ಕರಾವಳಿಯಲ್ಲೂ ಮೀನುಗಾರಿಕೆ ನಡೆಸುತ್ತಾರೆ. ಹಾಗೆಂದು ಅವರ ಮೇಲೆ ನಾವೆಂದೂ ಹಲ್ಲೆ ನಡೆಸಿದ್ದಿಲ್ಲ. ನಾವು ಬ್ಯಾಂಕ್ ಸಾಲ ಮಾಡಿ, ಕಾರ್ಮಿಕರನ್ನು ಗುತ್ತಿಗೆ ಪಡೆದು ಆಳಸಮುದ್ರಕ್ಕೆ ಬೋಟ್ ಕಳಿಸುತ್ತೇವೆ. ಅಂಥದ್ದರಲ್ಲಿ ಈ ರೀತಿ ಹಲ್ಲೆಗಳಾದರೆ ನಾವೇನು ಮಾಡೋದು ಎಂದು ಬೋಟ್ ಮಾಲೀಕ ಅರುಣ್ ಪ್ರಶ್ನಿಸುತ್ತಾರೆ. ಈ ಬಾರಿಯೂ ಕರಾವಳಿಯಲ್ಲಿ ಮೀನು ಸಿಗುತ್ತಾ ಇಲ್ಲ. ಮೀನು ಕಡಿಮೆ ಇರುವುದರಿಂದ ಮಂಗಳೂರಿನ ಸಾವಿರ ಬೋಟುಗಳ ಪೈಕಿ 50-60 ಬೋಟುಗಳಷ್ಟೇ ತಮಿಳುನಾಡು ಕಡೆಗೆ ಹೋಗುತ್ತವೆ. ಅಂತಹ ಸಂದರ್ಭದಲ್ಲಿ ಇವರು ಗುಂಪು ಕಟ್ಟಿ ಕಲ್ಲು ಬಿಸಾಕಿ ಹಲ್ಲೆ ನಡೆಸಿದರೆ ನಾವು ಬದುಕೋದು ಹೇಗೆ ಎಂದು ಪ್ರಶ್ನಿಸುತ್ತಾರೆ.
ವಿಡಿಯೋದಲ್ಲಿ ಕನ್ನಡಿಗರ ಮೀನುಗಾರಿಕಾ ಬೋಟನ್ನು ವಶಕ್ಕೆ ಪಡೆದು ಅದರಲ್ಲಿದ್ದ ಬಲೆ ಇನ್ನಿತರ ಪರಿಕರಗಳನ್ನು ಸಮುದ್ರಕ್ಕೆ ಎಸೆಯುವ ಚಿತ್ರಣ ಇದೆ. ಆಮೂಲಕ ಸಮುದ್ರದಲ್ಲಿಯೂ ಮೀನುಗಾರರು ರಾಜ್ಯ, ಭಾಷೆಯ ಆಧಾರದಲ್ಲಿ ಹಕ್ಕು ಸ್ಥಾಪನೆ ಮಾಡುವುದಕ್ಕೆ ಹೊರಟಂತಿದೆ. ಭಾರತೀಯ ಜಲರೇಖೆ ಎಂದ ಮೇಲೆ ಅಲ್ಲಿ ದೇಶದ ಯಾವ ರಾಜ್ಯದವರೂ ಕೂಡ ಮೀನುಗಾರಿಕೆ ನಡೆಸಬಹುದು. ಈ ರೀತಿ ಗಡಿ, ಭಾಷೆ ಮುಂದಿಟ್ಟು ಹಲ್ಲೆ ನಡೆಸಿದರೆ, ಮೀನುಗಾರರು ಮುಯ್ಯಿಗೆ ಮುಯ್ಯಿ ಮಾಡೋಕೆ ಹೋದರೆ ಮುಂದೆ ಎಲ್ಲರಿಗೂ ತೊಂದರೆಯಾದೀತು. ಮೀನುಗಾರಿಕೆ ಸಂದರ್ಭದಲ್ಲಿ ಸಮುದ್ರವನ್ನು ಮಾಲಿನ್ಯ ಮಾಡದಂತೆ ಎಚ್ಚರಿಕೆ ವಹಿಸಬೇಕಾದ ಕರ್ತವ್ಯ ಮೀನುಗಾರರಿಗೆ ಇರಬೇಕು. ಪ್ಲಾಸ್ಟಿಕ್ ವಸ್ತುಗಳನ್ನು ಸಮುದ್ರಕ್ಕೆ ಎಸೆಯುವುದು ಮೀನುಗಳಿಗೆ ಅಪಾಯಕಾರಿಯಾಗಿದ್ದರಿಂದ ಮೀನಿನ ಕ್ಷಾಮಕ್ಕೆ ಇವರೇ ಕೊಡುಗೆ ಕೊಟ್ಟಂತಾಗುತ್ತದೆ.
Mangalore Fishermen and boats attacked by Tamil Fishermen in deep see fishing, more than 50 boats damaged in the last two months.
23-07-26 08:05 pm
HK News Desk
Soujanya case: ಸೌಜನ್ಯ ಪ್ರಕರಣದಲ್ಲಿ ಸಿಬಿಐಗೆ ತರಾ...
22-07-26 06:00 pm
ಸಚಿವ ಸಂಪುಟಕ್ಕೆ ಖರ್ಗೆ, ಡಿಕೆ, ಸಿದ್ದರಾಮಯ್ಯ ಪ್ರತ್...
19-07-26 08:34 pm
ಡಿಕೆಶಿ ಸಂಪುಟ ವಿಸ್ತರಣೆಗೆ ಮತ್ತೆ ಬ್ರೇಕ್ ; 55ರ ಒಳ...
17-07-26 02:55 pm
ನಾಲ್ಕು ತಿಂಗಳಲ್ಲೇ ಅಂತ್ಯಗೊಂಡ ನವಜೀವನ! ಅನಾರೋಗ್ಯದ...
13-07-26 10:21 pm
24-07-26 11:18 am
HK News Staffer
ಮತ್ತೆ ಪ್ರತಿಭಟನೆಗೆ ಬಂದ್ರೆ ಜೇಬಿನಲ್ಲಿ 50 ಗ್ರಾಂ ಡ...
23-07-26 06:26 pm
ಮೋದಿ ಮೌನ ಹೊಸದೇನಲ್ಲ, 'ನಾವು ತಪ್ಪು ಮಾಡಿದ್ದೇವೆ' ಎ...
23-07-26 05:57 pm
ರಾಜಧಾನಿ ದೆಹಲಿಯಲ್ಲಿ ಹೆಚ್ಚಿದ ಪ್ರತಿಭಟನೆ ಕಿಚ್ಚು ;...
23-07-26 05:48 pm
ಅಯೋಧ್ಯೆ ದೇಣಿಗೆ ಕಳವು ದೇಶದ ಆತ್ಮಸಾಕ್ಷಿಗೆ ಬಿದ್ದ ಪ...
23-07-26 01:51 pm
23-07-26 10:27 pm
Mangaluru Staffer
ವಿದ್ಯಾರ್ಥಿಗಳಿಗೆ ಲಾಠಿಚಾರ್ಜ್ ದೇಶದ ಭವಿಷ್ಯದ ಮೇಲಿನ...
22-07-26 09:18 pm
2,000 ರೂ. ಆಸೆಗೆ ಬಿದ್ದು ಬ್ಯಾಂಕ್ ಅಕೌಂಟ್ ಹಸ್ತಾಂತ...
21-07-26 11:02 pm
ಸಾಣೂರು-ಬಿಕರ್ನಕಟ್ಟೆ ಚತುಷ್ಪಥ ರಸ್ತೆ ಕಾಮಗಾರಿ; ಬನ್...
21-07-26 09:41 pm
ನೀಟ್ ಪರೀಕ್ಷೆ ಅಕ್ರಮ ; ಸೋನಂ ವಾಂಗ್ಚುಕ್ ಹೋರಾಟಕ್ಕೆ...
20-07-26 09:32 pm
24-07-26 03:03 pm
HK News Staffer
14 ವರ್ಷಗಳ ಹಿಂದೆ ಕುಂಬಳೆಯಲ್ಲಿ ಮನೆ ಮಂದಿಯನ್ನು ಕಟ್...
24-07-26 02:18 pm
ಸುಳ್ಯದಲ್ಲಿ ವಿವಾಹಿತ ಮಹಿಳೆ ಶಂಕಾಸ್ಪದ ಸಾವು ಪ್ರಕರಣ...
22-07-26 10:24 pm
ಎಸ್ಐಆರ್ ಪರಿಷ್ಕರಣೆ ನೆಪದಲ್ಲಿ ಎಪಿಕೆ ಫೈಲ್ ಕಳುಹಿಸಿ...
22-07-26 09:03 pm
ಬಂಟ್ವಾಳ ; ಮಳೆ-ಗಾಳಿಗೆ ಶಾಲಾ ಬಸ್ಸಿಗೆ ಉರುಳಿ ಬಿದ್ದ...
22-07-26 07:37 pm