Mangalore Three youths drowned at Panambur beach: ಪಣಂಬೂರು ಕಡಲ ತೀರದಲ್ಲಿ ಬಜ್ಪೆಯ ಮೂವರು ಯುವಕರು ನೀರುಪಾಲು

03-03-24 09:59 pm       Mangalore Correspondent   ಕರಾವಳಿ

ಪಣಂಬೂರು ಕಡಲ ತೀರದಲ್ಲಿ ನೀರಾಟವಾಡುತ್ತಿದ್ದ ಮೂವರು ಯುವಕರು ಸಮುದ್ರದ ಅಲೆಯಲ್ಲಿ ಕೊಚ್ಚಿ ಹೋಗಿರುವ ಘಟನೆ ಭಾನುವಾರ ಸಂಜೆ ನಡೆದಿದೆ.

ಮಂಗಳೂರು, ಮಾ.3: ಪಣಂಬೂರು ಕಡಲ ತೀರದಲ್ಲಿ ನೀರಾಟವಾಡುತ್ತಿದ್ದ ಮೂವರು ಯುವಕರು ಸಮುದ್ರದ ಅಲೆಯಲ್ಲಿ ಕೊಚ್ಚಿ ಹೋಗಿರುವ ಘಟನೆ ಭಾನುವಾರ ಸಂಜೆ ನಡೆದಿದೆ.

ಬಜ್ಪೆ ಪೊರ್ಕೋಡಿ ನಿವಾಸಿಗಳಾದ ಮಿಲನ್(20), ಲಿಖಿತ್ (18), ನಾಗರಾಜ್ (24) ನಾಪತ್ತೆಯಾದವರು. ಮಿಲನ್ ಮಂಗಳೂರಿನಲ್ಲಿ ಮೀಶೋ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ. ಲಿಖಿತ್ ಕೈಕಂಬದ ರೋಶಾ ಮಿಸ್ತಿಕಾ ಕಾಲೇಜಿನಲ್ಲಿ ಮೊದಲ ಪಿಯು ಓದುತ್ತಿದ್ದ. ನಾಗರಾಜ್ ಬೈಕಂಪಾಡಿಯಲ್ಲಿ ಎಂಎಂಆರ್ ಕಂಪನಿಯಲ್ಲಿ ಸುಪರ್ ವೈಸರ್ ಆಗಿ ಕೆಲಸ ಮಾಡುತ್ತಿದ್ದ.

ಲೈಫ್ ಗಾರ್ಡ್ ಗಳು ಮುಂದೆ ಹೋಗದಂತೆ ಸೂಚನೆ ನೀಡುತ್ತಿದ್ದರೂ ಅದನ್ನು ಲೆಕ್ಕಿಸದೆ ನೀರಿನ ಅಲೆಯಲ್ಲಿ ಮುಂದೆ ಹೋಗುತ್ತಾ ಆಟವಾಡುತ್ತಿದ್ದರು. ದಿಢೀರ್ ಬಂದ ದೊಡ್ಡದೊಂದು ಅಲೆಯಲ್ಲಿ ಮೂವರೂ ಸಿಲುಕಿದ್ದು, ನೀರಿನಾಳಕ್ಕೆ ಎಳೆದೊಯ್ದಿದೆ. ಕೂಡಲೇ ಲೈಫ್ ಗಾರ್ಡ್ ಸಿಬಂದಿ ಹುಡುಕಾಟ ನಡೆಸಿದ್ದಾರೆ. ಆನಂತರ, ಪಣಂಬೂರು ಪೊಲೀಸರು ಮತ್ತು ಅಗ್ನಿಶಾಮಕ ದಳ ಆಗಮಿಸಿ ಹುಡುಕಾಟ ನಡೆಸಿದೆ. ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Mangalore Three youths drowned at Panambur beach after wave attack. The missing individuals have been identified as Milan (20), Likhith (18), and Nagaraj (24).