Mudipu Mangalore Accident, Death: ಮುಡಿಪು ; ಚಾಲಕನ ಧಾವಂತಕ್ಕೆ ಪಾದಚಾರಿಗೆ ಕಾರು ಡಿಕ್ಕಿ, ಆಸ್ಪತ್ರೆ ಸಾಗಿಸುವ ದಾರಿಯಲ್ಲಿ ಕನ್ಯಾನದ ವ್ಯಕ್ತಿ ಸಾವು 

09-03-24 12:42 pm       Mangalore Correspondent   ಕರಾವಳಿ

ಮುಡಿಪುವಿನಿಂದ ಬಂಟ್ವಾಳಕ್ಕೆ ತೆರಳುತ್ತಿದ್ದ ಕಾರು ಚಾಲಕನ ಧಾವಂತಕ್ಕೆ ರಸ್ತೆ ದಾಟುತ್ತಿದ್ದ ಪಾದಾಚಾರಿಯೋರ್ವರು ಅಸುನೀಗಿದ ಘಟನೆ ಮುಡಿಪು ಸರಕಾರಿ ಪದವಿ ಪೂರ್ವ ಕಾಲೇಜಿನ ಬಳಿ ಶುಕ್ರವಾರ ಸಂಜೆ ನಡೆದಿದೆ. 

ಉಳ್ಳಾಲ, ಮಾ.9: ಮುಡಿಪುವಿನಿಂದ ಬಂಟ್ವಾಳಕ್ಕೆ ತೆರಳುತ್ತಿದ್ದ ಕಾರು ಚಾಲಕನ ಧಾವಂತಕ್ಕೆ ರಸ್ತೆ ದಾಟುತ್ತಿದ್ದ ಪಾದಾಚಾರಿಯೋರ್ವರು ಅಸುನೀಗಿದ ಘಟನೆ ಮುಡಿಪು ಸರಕಾರಿ ಪದವಿ ಪೂರ್ವ ಕಾಲೇಜಿನ ಬಳಿ ಶುಕ್ರವಾರ ಸಂಜೆ ನಡೆದಿದೆ. 

ಕನ್ಯಾನ, ಕರೋಪಾಡಿ ಸಮೀಪದ ಮುಡಿಂಜಿಮಾರ್ ನಿವಾಸಿ ಸಿದ್ಧೀಕ್ (45) ಮೃತಪಟ್ಟ ವ್ಯಕ್ತಿ. ಸಿದ್ದೀಕ್ ಅವರು ಶುಕ್ರವಾರ ಸಂಜೆ ಮುಡಿಪುವಿನ ಸರಕಾರಿ ಕಾಲೇಜಿನ ಮುಂಭಾಗದಲ್ಲಿ ರಸ್ತೆ ದಾಟುತ್ತಿದ್ದ ವೇಳೆ ಮುಡಿಪುವಿನಿಂದ ಬಂಟ್ವಾಳಕ್ಕೆ ಧಾವಿಸುತ್ತಿದ್ದ ಕಾರು ಡಿಕ್ಕಿ ಹೊಡೆದ ಪರಿಣಾಮ ರಸ್ತೆಗೆಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದಾರೆ. ಸಿದ್ಧೀಕ್ ಅವರನ್ನ ತಕ್ಷಣವೇ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದರೂ ಅವರು ಸಾವನ್ನಪ್ಪಿದ್ದಾರೆ.

ಮೃತ ಸಿದ್ಧೀಕ್ ಅವರು ವಿವಾಹಿತರಾಗಿದ್ದು ಪುಟ್ಟ ಮಗುವನ್ನ ಹೊಂದಿದ್ದಾರೆಂದು ತಿಳಿದು ಬಂದಿದೆ. ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Mangalore Mudipu accident, 45 year old man dies after taxi car rams pedestrian. The deceased has been identified as Siddik.