ಬ್ರೇಕಿಂಗ್ ನ್ಯೂಸ್
10-03-24 07:46 pm Mangalore Correspondent ಕರಾವಳಿ
ಉಳ್ಳಾಲ, ಮಾ.10: ಪತ್ನಿಯಿಂದ ದೂರವಾಗಿದ್ದ ವ್ಯಕ್ತಿಯೋರ್ವನ ಶವ ಕೊಳೆತು ನೇಣು ಬಿಗಿದ ಸ್ಥಿತಿಯಲ್ಲಿ ಕುಂಪಲದ ಕುಜುಮ ಗದ್ದೆಯ ಒಂಟಿ ಮನೆಯಲ್ಲಿ ಪತ್ತೆಯಾಗಿದೆ. ಕುಂಪಲದ ರೂಪದರ್ಶಿ ಪ್ರೇಕ್ಷಾ ಆತಹತ್ಯೆಗೆ ಇಂದಿಗೆ ಮೂರು ವರ್ಷ ಸಲ್ಲುತ್ತಿದ್ದ ದಿನವೇ ಮತ್ತೊಂದು ಆತ್ಮಹತ್ಯೆ ಪ್ರಕರಣ ವರದಿಯಾಗಿದೆ.
ಕುಂಪಲ, ಕುಜುಮ ಗದ್ದೆ ನಿವಾಸಿ ಕಿರಣ್ ಕುಮಾರ್ (48) ಮೃತ ವ್ಯಕ್ತಿ. ಕಿರಣ್ ವಿವಾಹಿತರಾಗಿದ್ದು 17 ವರ್ಷಗಳಾದರೂ ಮಕ್ಕಳಾಗಿರಲಿಲ್ಲ. ಇದೇ ಕೊರಗಿಂದ ಕಿರಣ್ ವಿಪರೀತ ಮದ್ಯ ಸೇವಿಸಿ ಪತ್ನಿಯಲ್ಲಿ ಜಗಳ ಮಾಡುತ್ತಿದ್ದರಂತೆ. ಪತ್ನಿ ಉದ್ಯೋಗಕ್ಕೆ ತೆರಳಲೂ ತಗಾದೆ ತೆಗೆಯುತ್ತಿದ್ದು ಗಂಡನ ನಡವಳಿಕೆಯಿಂದ ಬೇಸತ್ತ ಪತ್ನಿ ಕಳೆದ ನಾಲ್ಕು ವರುಷಗಳ ಹಿಂದೆಯೇ ಗಂಡನ ತೊರೆದು ತವರು ಸೇರಿದ್ದರು.


ಒಬ್ಬಂಟಿಯಾಗಿ ಮನೆಯಲ್ಲಿ ನೆಲೆಸಿದ್ದ ಕಿರಣ್ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಹೌಸ್ ಕೀಪಿಂಗ್ ಕೆಲಸ ನಿರ್ವಹಿಸುತ್ತಿದ್ದರು. ಕಳೆದ ಆದಿತ್ಯವಾರ ಪಿಲಾರಿನಲ್ಲಿ ನಡೆದಿದ್ದ ಪಂಜಂದಾಯ ದೈವದ ವಾರ್ಷಿಕ ನೇಮೋತ್ಸವದಲ್ಲೂ ಕಿರಣ್ ಭಾಗವಹಿಸಿ ದೈವದ ಗಂಧ ಪಡೆದಿದ್ದರು. ಗುರುವಾರ ರಾತ್ರಿ ಮನೆ ಸೇರಿದ್ದ ಕಿರಣ್ ಮತ್ತೆ ಹೊರ ಬಂದಿರಲಿಲ್ಲ. ಇಂದು ಬೆಳಗ್ಗೆ ಪರಿಸರದ ಜನರಿಗೆ ಗಬ್ಬು ವಾಸನೆ ಬಡಿದಿದ್ದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರ ಸಮಕ್ಷಮದಲ್ಲಿ ಸ್ಥಳೀಯ ಪುರಸಭಾ ಸದಸ್ಯ ದೀಪಕ್ ಪಿಲಾರ್ ಮನೆ ಬಾಗಿಲು ಮುರಿದಾಗ ಮನೆ ಛಾವಣಿಗೆ ನೇಣುಬಿಗಿದ ಸ್ಥಿತಿಯಲ್ಲಿ ಕಿರಣ್ ಅವರ ಕೊಳೆತ ಶವ ಪತ್ತೆಯಾಗಿದೆ. ಉಳ್ಳಾಲ ಪೊಲೀಸರು ಮೃತ ದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಮೂರು ವರ್ಷದ ಹಿಂದೆ ಕುಂಪಲ ಆಶ್ರಯ ಕಾಲನಿ ನಿವಾಸಿ ಪ್ರೇಕ್ಷಾ ತನ್ನ ಪ್ರಿಯಕರನ ಮಾನಸಿಕ ಹಿಂಸೆಯಿಂದ ನೊಂದು ಮಾ.10 ರಂದು ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಳು. ಪ್ರೇಕ್ಷಾ ಆತ್ಮಹತ್ಯೆಗೂ ಹಿಂದಿನ ವಾರ ಪಿಲಾರು ಪಂಜಂದಾಯನ ನೇಮೋತ್ಸವದಲ್ಲಿ ಲವಲವಿಕೆಯಿಂದ ಭಾಗವಹಿಸಿದ್ದಳೆಂಬುದು ಇಲ್ಲಿ ಉಲ್ಲೇಖನೀಯ.
ಪ್ರೇಕ್ಷಾ ಸಾವಿನ ನಂತರ ಕುಂಪಲ ಪ್ರದೇಶದಲ್ಲಿ ಸಾಲು ಸಾಲಾಗಿ ಯುವಕ, ಯುವತಿಯರ ಸರಣಿ ಆತ್ಮಹತ್ಯೆಗಳೇ ನಡೆದು ಹೋಗಿವೆ. ಕಳೆದ ವರ್ಷ ಮೇ 10 ರಂದು ಪ್ರೇಕ್ಷಾ ಸಾವಿಗೆ ಪ್ರಚೋದನೆ ನೀಡಿದ್ದ ಯತಿರಾಜ್ ಗಟ್ಟಿ(20) ಕೂಡ ಖಿನ್ನತೆಯಿಂದ ನೇಣು ಬಿಗಿದು ಸಾವನ್ನಪ್ಪಿದ್ದ. ವಾರದ ಹಿಂದಷ್ಟೆ ಆಶ್ರಯ ಕಾಲನಿಯ ಧನರಾಜ್ ಪೂಜಾರಿ(32)ಎಂಬ ಯುವಕನೂ ನೇಣು ಬಿಗಿದು ಸಾವನ್ನಪ್ಪಿದ್ದ.
Mangalore 48 year old commits suicide in kumpala on the day roopshree committed suicide. The deceased has been identified as Kiran kumar. It is said he was far from his wife and was staying alone at the house. Reason for this extreme step is yet to be know.
17-12-25 10:30 pm
HK News Desk
ಯಶವಂತಪುರ - ಕಾರವಾರ ಗೋಮಟೇಶ್ವರ ಎಕ್ಸ್ ಪ್ರೆಸ್ ರೈಲು...
17-12-25 12:45 pm
ಶೃಂಗೇರಿ ; ಬಿಕಾಂ ಓದುತ್ತಿದ್ದ ವಿದ್ಯಾರ್ಥಿನಿ ಹಠಾತ್...
17-12-25 12:42 pm
ಶಿವಮೊಗ್ಗ, ಧಾರವಾಡ ಸೇರಿ ಹಲವೆಡೆ ಲೋಕಾಯುಕ್ತ ದಾಳಿ ;...
16-12-25 03:08 pm
ಮಂಗಳೂರು ಬೆನ್ನಲ್ಲೇ ತುಮಕೂರು ಜಿಲ್ಲಾಧಿಕಾರಿ ಕಚೇರಿಗ...
16-12-25 12:57 pm
17-12-25 10:27 pm
HK News Desk
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
ಪಾಕಿಸ್ತಾನದ ಎರಡು ವಿವಿಗಳಲ್ಲಿ ಸಂಸ್ಕೃತ ಕಲಿಯಲು ಕೋರ...
15-12-25 08:12 pm
17-12-25 08:54 pm
Mangalore Correspondent
New year 2026, Mangalore Rules: ಹೊಸ ವರ್ಷಾಚರಣೆ...
17-12-25 08:19 pm
Udupi, Baby death: ಉಡುಪಿ ; ತಾಯಿ ಕೈಯಿಂದ ಜಾರಿ ಬ...
17-12-25 05:23 pm
Mangalore Jail, Fight, Ccb Police: ಮಂಗಳೂರು ಜೈ...
17-12-25 05:05 pm
Mangalore Landslide, Death: ಗುಡ್ಡ ಕುಸಿದು ಕಾರ್...
16-12-25 10:25 pm
17-12-25 11:14 am
Bangalore Correspondent
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm
Brahmavar Murder, Udupi Crime: ಎಣ್ಣೆ ಪಾರ್ಟಿಯಲ...
15-12-25 12:19 pm