Brijesh Chowta mp ticket, BJP Mangalore, pays tribute to martyrs: ಹುತಾತ್ಮ ಯೋಧರ ಸ್ಮಾರಕ್ಕೆ ಬೃಜೇಶ್ ಚೌಟ ನಮನ ; ಪಕ್ಷದ ಕಾರ್ಯಕರ್ತರಿಗೆ ಋಣಿಯಾಗಿದ್ದೇನೆ, ಹಿಂದುತ್ವ ನನ್ನ ಬದ್ಧತೆ, ಅಭಿವೃದ್ಧಿಯೇ ಆದ್ಯತೆ

13-03-24 09:36 pm       Mangaluru Correspondent   ಕರಾವಳಿ

ಬಿಜೆಪಿ ಟಿಕೆಟ್ ಘೋಷಣೆಯಾದ ಬೆನ್ನಲ್ಲೇ ಕ್ಯಾ. ಬೃಜೇಶ್ ಚೌಟ ಕದ್ರಿಯಲ್ಲಿರುವ ಹುತಾತ್ಮ ವೀರ ಯೋಧರ ಸ್ಮಾರಕಕ್ಕೆ ಬಂದು ನಮನ ಸಲ್ಲಿಸಿದ್ದಾರೆ. ವೀರ ಯೋಧರ ಸ್ಮಾರಕದಲ್ಲಿ ಮೊಂಬತ್ತಿ ಉರಿಸಿ ಮಂಡಿಯೂರಿ ನಮಿಸಿದ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

ಮಂಗಳೂರು, ಮಾ.13: ಬಿಜೆಪಿ ಟಿಕೆಟ್ ಘೋಷಣೆಯಾದ ಬೆನ್ನಲ್ಲೇ ಕ್ಯಾ. ಬೃಜೇಶ್ ಚೌಟ ಕದ್ರಿಯಲ್ಲಿರುವ ಹುತಾತ್ಮ ವೀರ ಯೋಧರ ಸ್ಮಾರಕಕ್ಕೆ ಬಂದು ನಮನ ಸಲ್ಲಿಸಿದ್ದಾರೆ. ವೀರ ಯೋಧರ ಸ್ಮಾರಕದಲ್ಲಿ ಮೊಂಬತ್ತಿ ಉರಿಸಿ ಮಂಡಿಯೂರಿ ನಮಿಸಿದ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯಿಂದ ಹಿಡಿದು ರಾಜ್ಯ, ದೇಶದ ಎಲ್ಲ ನಾಯಕರನ್ನು ಉಲ್ಲೇಖಿಸಿ ಅಭಿನಂದನೆ ಹೇಳಿದ ಬೃಜೇಶ್ ಚೌಟ, ಈ ಮಣ್ಣಿಗೆ, ದೈವ ದೇವರ ತುಳುನಾಡಿಗೆ ವಿಶೇಷ ಶಕ್ತಿಯಿದೆ. ದಕ್ಷಿಣ ಕನ್ನಡ ಎಂಬ ಅದ್ಭುತ ನೆಲದಲ್ಲಿ ಬಿಜೆಪಿ ಟಿಕೆಟ್ ಕೊಟ್ಟಿರುವುದಕ್ಕೆ ಋಣಿಯಾಗಿದ್ದೇನೆ. ಅಸಂಖ್ಯಾತ ದೇವ ದುರ್ಲಭ ಕಾರ್ಯಕರ್ತರಿಗೆ ಋಣಿಯಾಗಿದ್ದೇನೆ ಎಂದರು.

ಸೈನಿಕನಾಗಿ ದೇಶ ಸೇವೆಗೈದು ದೇಶದ ಹಲವು ಕಡೆಗಳಲ್ಲಿ ಸಂಚರಿಸಿ ನೈಜ ಭಾರತವನ್ನು ಕಂಡಿದ್ದೇನೆ. ನಮ್ಮ ಮಣ್ಣಿನ ಮಕ್ಕಳ ಸಾಮರ್ಥ್ಯವನ್ನು ತಿಳಿದಿದ್ದೇನೆ. ಈ ದೇಶಕ್ಕಾಗಿ ಅಸಂಖ್ಯಾತ ಯೋಧರು ಬಲಿದಾನ ಮಾಡಿದ್ದಾರೆ. ಅವರ ಸ್ಮಾರಕಕ್ಕೆ ಬಂದು ಈಗ ನಮನ ಸಲ್ಲಿಸಿದ್ದೇನೆ. ಹಿಂದುತ್ವ ನನ್ನ ಬದ್ಧತೆ, ಅಭಿವೃದ್ಧಿಯೇ ಆದ್ಯತೆ ಎಂದು ಹೇಳಿದರು. ಕದ್ರಿ ಯುದ್ಧ ಸ್ಮಾರಕದ ಬಳಿ ನೂರಾರು ಕಾರ್ಯಕರ್ತರು ಸೇರಿ ಜೈಕಾರ ಘೋಷಣೆ ಕೂಗಿದ್ದಾರೆ.

Captain Brijesh Chowta mp ticket from BJP in Mangalore, pays tribute to martyrs at kadri seeks blessings. Chowta, a graduate of St. Aloysius College Mangaluru, obtained a Bachelor of Science degree in 2002, and later went on to obtain an Executive Business Management Programme from the Indian Institute of Management Indore in 2011.