Mangalore Puttur News, Jayanand Bangera: ಪುತ್ತೂರು ಶಾಸಕರ 1400 ಕೋಟಿ ಅನುದಾನ ಪ್ರಶ್ನಿಸಿದ್ದ ಬಿಜೆಪಿ ಕಾರ್ಯಕರ್ತ ; ಫ್ಲೆಕ್ಸ್ ಪ್ರಿಂಟ್ ಮಾಡಿಸಿ, ಮನೆಯವರನ್ನೇ ದಬಾಯಿಸಿದ ಕಾಂಗ್ರೆಸ್ ಕಾರ್ಯಕರ್ತರು !  

17-03-24 11:01 pm       Mangalore Correspondent   ಕರಾವಳಿ

ಪುತ್ತೂರಿನ ಕಾಂಗ್ರೆಸ್ ಶಾಸಕ ಅಶೋಕ್ ರೈ 1400 ಕೋಟಿ ಅನುದಾನ ತಂದಿದ್ದೇನೆಂದು ಹೇಳಿದ್ದನ್ನು ಪ್ರಶ್ನಿಸಿ ಬಿಜೆಪಿ ಕಾರ್ಯಕರ್ತ ಜಯಾನಂದ ಬಂಗೇರ ತನ್ನ ಫೇಸ್ಬುಕ್ ನಲ್ಲಿ ಪೋಸ್ಟ್ ಹಾಕಿದ್ದರು. ಫೇಸ್ಬುಕ್ ಪೋಸ್ಟ್ ಹಾಕಿದ್ದರಿಂದ ಕೆರಳಿದ ಕಾಂಗ್ರೆಸ್ ಕಾರ್ಯಕರ್ತರು ಪುತ್ತೂರಿನ ಜಯಾನಂದ ಬಂಗೇರ ಮನೆಗೆ ತೆರಳಿ ಗೂಂಡಾ ವರ್ತನೆ ತೋರಿದ್ದಾರೆ.

ಪುತ್ತೂರು, ಮಾ.17: ಪುತ್ತೂರಿನ ಕಾಂಗ್ರೆಸ್ ಶಾಸಕ ಅಶೋಕ್ ರೈ 1400 ಕೋಟಿ ಅನುದಾನ ತಂದಿದ್ದೇನೆಂದು ಹೇಳಿದ್ದನ್ನು ಪ್ರಶ್ನಿಸಿ ಬಿಜೆಪಿ ಕಾರ್ಯಕರ್ತ ಜಯಾನಂದ ಬಂಗೇರ ತನ್ನ ಫೇಸ್ಬುಕ್ ನಲ್ಲಿ ಪೋಸ್ಟ್ ಹಾಕಿದ್ದರು. ಫೇಸ್ಬುಕ್ ಪೋಸ್ಟ್ ಹಾಕಿದ್ದರಿಂದ ಕೆರಳಿದ ಕಾಂಗ್ರೆಸ್ ಕಾರ್ಯಕರ್ತರು ಪುತ್ತೂರಿನ ಜಯಾನಂದ ಬಂಗೇರ ಮನೆಗೆ ತೆರಳಿ ಗೂಂಡಾ ವರ್ತನೆ ತೋರಿದ್ದಾರೆ.

ಕಾಂಗ್ರೆಸ್ ಕಾರ್ಯಕರ್ತರು ದೊಡ್ಡ ಫ್ಲೆಕ್ಸ್ ರೆಡಿ ಮಾಡಿಸಿ, ಅದರಲ್ಲಿ ಅನುದಾನದ ಬಗ್ಗೆ ಬರೆದು ಜಯಾನಂದ ಬಂಗೇರ ಮನೆಯ ಮುಂದೆ ತಂದಿದ್ದರು. ಅಲ್ಲದೆ, ಅದರಲ್ಲಿ ಒಬ್ಬಾತ ಜಯಾನಂದ ಬಂಗೇರ ಮತ್ತು ಮನೆಯವರನ್ನು ಅವಾಚ್ಯ ಪದಗಳಲ್ಲಿ ನಿಂದಿಸಿದ್ದಾನೆ. ಫೇಸ್ಬುಕ್ ನಲ್ಲಿ ಪ್ರಶ್ನೆ ಮಾಡಿದ್ದೀಯಲ್ಲಾ.. 1400 ಕೋಟಿ ಅನುದಾನ ಏನೆಲ್ಲ ಅನ್ನುವುದು ಇಲ್ಲಿ ಇದೆ, ಬಾ ನೋಡು ಅಂತ ಹೇಳಿ ನಿಂದಿಸಿದ್ದಾರೆ.

ಈ ವೇಳೆ, ಮನೆಯವರು ನೀವು ಮನೆಗೆ ಬಂದು ಯಾಕೆ ಪ್ರಶ್ನೆ ಮಾಡಬೇಕು. ಫೇಸ್ಬುಕ್ ನಲ್ಲಿ ಪ್ರಶ್ನೆ ಮಾಡಿದ್ದರೆ, ಅದರಲ್ಲೇ ಉತ್ತರ ನೀಡಬಹುದಿತ್ತಲ್ಲಾ ಎಂದು ಮರು ಪ್ರಶ್ನೆ ಹಾಕಿದ್ದಾರೆ. ಇದೇ ವಿಚಾರದಲ್ಲಿ ಎರಡೂ ಕಡೆಯವರು ಪರಸ್ಪರ ಮಾತಿನ ಚಕಮಕಿ ನಡೆಸಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರ ಗೂಂಡಾ ವರ್ತನೆಯನ್ನು ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದು, ಅದರ ವಿಡಿಯೋವನ್ನು ಬಿಜೆಪಿ ಕಾರ್ಯಕರ್ತರು ಫೇಸ್ಬುಕ್ ನಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ ವೈರಲ್ ಆಗಿದ್ದು, ಕಾಂಗ್ರೆಸ್ ಕಾರ್ಯಕರ್ತರ ನಡೆಯ ಬಗ್ಗೆ ಭಾರೀ ಟೀಕೆ ಕೇಳಿಬಂದಿದೆ.

Mangalore Congress leaders threaten Puttur BJP member for questioning MLA Ahok Rai 1400 fund.