Accident in Riyadh, four from Mangalore killed: ಸೌದಿಯಲ್ಲಿ ಕಾರು ಅಪಘಾತ ; ಮಂಗಳೂರು ಮೂಲದ ಒಂದೇ ಕುಟುಂಬದ ನಾಲ್ವರು ಸಾವು 

21-03-24 06:10 pm       Mangalore Correspondent   ಕರಾವಳಿ

ಸೌದಿ ಅರೇಬಿಯಾದಲ್ಲಿ ಕಾರು ಅಪಘಾತಕ್ಕೀಡಾಗಿ ಮಂಗಳೂರು ಮೂಲದ ನಾಲ್ವರು ಸಾವನ್ನಪ್ಪಿದ ಘಟನೆ ನಡೆದಿದೆ. 

ಮಂಗಳೂರು, ಮಾ.21: ಸೌದಿ ಅರೇಬಿಯಾದಲ್ಲಿ ಕಾರು ಅಪಘಾತಕ್ಕೀಡಾಗಿ ಮಂಗಳೂರು ಮೂಲದ ನಾಲ್ವರು ಸಾವನ್ನಪ್ಪಿದ ಘಟನೆ ನಡೆದಿದೆ. 

ಸೌದಿ ಅರೇಬಿಯಾದ ತಾಯಿಫ್ ಎಂಬಲ್ಲಿ ಭೀಕರ ಕಾರು ಅಪಘಾತ ಆಗಿದೆ. ಮಂಗಳೂರಿನ ಹಳೆಯಂಗಡಿ ಮೂಲದ ಒಂದೇ ಕುಟುಂಬದ ನಾಲ್ವರು ಸಾವು ಕಂಡಿದ್ದಾರೆ. ಹಳೆಯಂಗಡಿ ತೋಕೂರು ನಿವಾಸಿ ಹಿಬಾ ( 29), ಆಕೆಯ ಪತಿ ಮಹಮ್ಮದ್ ರಮೀಝ್ (34), ಮಕ್ಕಳಾದ ಆರೂಶ್ (3) ಮತ್ತು ಇನ್ನೊಂದು ಹಸುಗೂಸು ಮೃತಪಟ್ಟವರು. ಕಾರಿನಲ್ಲಿದ್ದ ಹಿಬಾ ಅವರ ಸಹೋದರಿಯ ಮಗಳು ಫಾತಿಮಾ (19) ಗಂಭೀರ ಗಾಯಗೊಂಡಿದ್ದಾರೆ. 

ಇವರು ಕತಾರ್ ನಿಂದ ಸೌದಿ ಅರೇಬಿಯಾಕ್ಕೆ ಉಮ್ರಾ ನಿರ್ವಹಿಸಲು ಕಾರಿನಲ್ಲಿ ತೆರಳುತ್ತಿದ್ದರು. ಕಾರಿನಲ್ಲಿದ್ದ ಇನ್ನೊಂದು ಮಗು ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಮಹಮ್ಮದ್ ರಮೀಝ್ ಕಾರು ಚಲಾಯಿಸುತ್ತಿದ್ದರು. ರಿಯಾದ್ ನಿಂದ ತಾಯೀಫ್ ಗೆ ತೆರಳುತ್ತಿದ್ದಾಗ ಅಲ್ಲಿಂದ ಸುಮಾರು 250 ಕಿ.ಮೀ. ದೂರದ ಝುಲ್ಫಾ ಎಂಬಲ್ಲಿ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿಯಾಗಿದೆ. ಕಾರು ರಸ್ತೆಯಿಂದ ಹಲವು ಮೀಟರ್ ಗಳಷ್ಟು ದೂರಕ್ಕೆ ಹಾರಿ ಪಲ್ಟಿಯಾಗಿ ಬಿದ್ದಿದೆ.

A devastating accident has resulted in the loss of four members of a Mangalorean family, including a 3-month-old infant, during their journey from Qatar to Madinah to perform Umrah. The accident occurred on Wednesday night in Zalfa, on the outskirts of Riyadh.