ಬ್ರೇಕಿಂಗ್ ನ್ಯೂಸ್
31-03-24 12:53 pm Mangaluru Correspondent ಕರಾವಳಿ
ಪುತ್ತೂರು, ಮಾ.31: ಅಕ್ರಮವಾಗಿ ದನ ಸಾಗಿಸುತ್ತಿದ್ದ ಕಾರು ಡಿಕ್ಕಿಯಾಗಿ ಪಾದಚಾರಿ ಸಾವನ್ನಪ್ಪಿದ ಘಟನೆ ಕಡಬ ತಾಲೂಕಿನ ಮರ್ಧಾಳ ಜಂಕ್ಷನ್ನಲ್ಲಿ ಶನಿವಾರ ಸಂಜೆ ನಡೆದಿದೆ, ಹಿಂದು ಸಂಘಟನೆಗಳ ಕಾರ್ಯಕರ್ತರು ರಾತ್ರೋರಾತ್ರಿ ಪ್ರತಿಭಟನೆ ನಡೆಸಿದ್ದು ಪೊಲೀಸರಿಗೆ ಆರೋಪಿಗಳನ್ನು ಬಂಧಿಸಲು ಗಡುವು ವಿಧಿಸಿದ್ದಾರೆ.
ಮರ್ಧಾಳ ನೆಕ್ಕಿತ್ತಡ್ಕ ನಿವಾಸಿ ವಿಠಲ ರೈ ಮೃತ ವ್ಯಕ್ತಿ. ಮರ್ದಾಳ ಪೇಟೆಯಲ್ಲಿ ವಿಠಲ ರೈ ಯವರು ತನ್ನ ಕಾರನ್ನು ನಿಲ್ಲಿಸಿ ರಸ್ತೆ ದಾಟುತ್ತಿದ್ದ ವೇಳೆ ಸುಬ್ರಹ್ಮಣ್ಯ ಕಡೆಯಿಂದ ಬರುತ್ತಿದ್ದ ಕಾರು ಡಿಕ್ಕಿ ಹೊಡೆದಿದ್ದು ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. 800 ಕಾರನ್ನು ನಿಲ್ಲಿಸದೆ ಚಾಲಕ ಪರಾರಿಯಾಗಿದ್ದು ಆರೋಪಿಗಳು ಮರ್ಧಾಳದ ರಶೀದ್ ಎಂಬವರ ಮನೆಯ ಮುಂದೆ ಕಾರು ನಿಲ್ಲಿಸಿ, ಕಾರಿನಲ್ಲಿದ್ದ ಎರಡು ದನಗಳನ್ನು ಪಕ್ಕದ ತೋಟದಲ್ಲಿ ಕಟ್ಟಿ ಹಾಕಿ ಪರಾರಿಯಾಗಿದ್ದಾರೆ.
ಕಾರಿನ ಬಗ್ಗೆ ಮಾಹಿತಿ ಪಡೆದ ಸ್ಥಳೀಯ ಹಿಂದು ಸಂಘಟನೆ ಕಾರ್ಯಕರ್ತರು ಆರೋಪಿ ಬಂಧನಕ್ಕೆ ಒತ್ತಾಯಿಸಿ ಮತ್ತು ಘಟನೆಯನ್ನು ಖಂಡಿಸಿ ರಾಜ್ಯ ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿದರು. ಬಳಿಕ ಕಡಬ ಆಸ್ಪತ್ರೆ ಮುಂಭಾಗದಲ್ಲಿಯೂ ಆಕ್ರೋಶ ವ್ಯಕ್ತಪಡಿಸಿದರು. ಕಡಬ ಸರಕಾರಿ ಆಸ್ಪತ್ರೆಯ ಮುಂಭಾಗದಲ್ಲಿ ಕುಳಿತು ರಾತ್ರಿ ಧರಣಿ ನಡೆಸಿದ್ದು, ರಾತ್ರಿಯಾಗುತ್ತಿದ್ದಂತೆ ಸ್ಥಳಕ್ಕೆ ಸುಳ್ಯ ಶಾಸಕಿ ಭಾಗೀರಥಿ ಮತ್ತು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಆಗಮಿಸಿದ್ದು ಪ್ರತಿಭಟನೆಗೆ ಕೈಜೋಡಿಸಿದ್ದಾರೆ. ಆರೋಪಿಗಳನ್ನು ಕೂಡಲೇ ಬಂಧಿಸಬೇಕೆಂದು ಪಟ್ಟು ಹಿಡಿದಿದ್ದಾರೆ. ಮಧ್ಯರಾತ್ರಿ ಸ್ಥಳಕ್ಕೆ ಆಗಮಿಸಿದ ಎಸ್ಪಿ ರಿಷ್ಯಂತ್ ಸಿಂಗ್, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಪ್ರತಿಭಟನೆ ನಿರತರು ಭಾನುವಾರದ ಒಳಗೆ ಆರೋಪಿಯನ್ನು ಬಂಧಿಸುವಂತೆ ಗಡುವು ವಿಧಿಸಿದ್ದಾರೆ.
In Kadaba, Sangh Parivar workers blocked the highway late on Saturday night, demanding the arrest of the accused in a fatal car collision. The car was allegedly being used for illegal transportation of cattle. The incident resulted in the death of Vithala Rai, a resident of Acchila Patte, who was hit by a car while crossing the road. The accused fled the scene, but two persons have been arrested in connection with the accident.
03-05-24 10:19 pm
Bangalore Correspondent
Jai Shri Ram Congress leader Basheeruddin: ಜೈ...
03-05-24 09:43 pm
Prajwal Revanna, sex scandal, rape: ಗನ್ ತೋರಿಸ...
03-05-24 09:06 pm
AC blast in Kalyan jewellers Bellary: ಬಳ್ಳಾರಿ...
03-05-24 07:41 pm
Raju Gowda, Siddaramaiah, DK Shivakumar: ಡಿಕೆ...
03-05-24 05:15 pm
03-05-24 10:58 pm
HK News Desk
ಸಿಸೇರಿಯನ್ ಮಾಡುವಾಗ ಕೈಕೊಟ್ಟ ಕರೆಂಟ್ ; ಮೊಬೈಲ್ ಟಾ...
03-05-24 10:28 am
Dubai Rain: ದುಬೈನಲ್ಲಿ ಮತ್ತೆ ಭಾರಿ ಮಳೆ ; ಶಾಲೆ,...
03-05-24 10:20 am
Narendra Modi, Rahul Gandhi: ರಾಹುಲ್ ಬಗ್ಗೆ ಪಾಕ...
02-05-24 10:07 pm
Hindu Marriage, Supreme court: ಹಿಂದು ವಿವಾಹ ಎನ...
02-05-24 09:25 pm
03-05-24 08:32 pm
Mangalore Correspondent
Mullai Muhilan Dc Mangalore: ಕುಡಿಯುವ ನೀರು ಪೂರ...
03-05-24 06:31 pm
Lakshadweep to Mangalore Speed boat ship: ಲಕ್...
02-05-24 07:52 pm
Mangalore Yesuraj, AEO, Kukke Subrahmanya Tem...
02-05-24 02:24 pm
Mangalore News, Konaje, Baby: ಐದು ತಿಂಗಳ ಹಸುಗೂ...
01-05-24 08:55 pm
03-05-24 09:57 pm
Mangalore Correspondent
House fire, Lover: ಮೂವರು ಮಕ್ಕಳ ತಾಯಿಯನ್ನ ಮದುವ...
03-05-24 03:21 pm
Mumbai crime, Minor pregnant: ಮದುವೆ ಮುನ್ನವೇ 2...
03-05-24 10:24 am
Mangalore Crime, Drugs Arrest; ಕೋಟೆಕಾರ್ ಬೀರಿಯ...
01-05-24 10:18 pm
Mangalore crime, Court: ಮೆಲ್ಕಾರ್ ಬಳಿ ಕೋಮು ದ್ವ...
01-05-24 06:44 pm