ಬ್ರೇಕಿಂಗ್ ನ್ಯೂಸ್
07-12-20 09:11 pm Mangaluru Correspondent ಕರಾವಳಿ
ಮಂಗಳೂರು, ಡಿ.7: ಮಂಗಳೂರು ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯ ಹೆಸರಿಡಲು ಆಗ್ರಹಿಸಿ, ಬಿಲ್ಲವ ಬ್ರಿಗೇಡ್ ವತಿಯಿಂದ ಬೈಕ್ ರ್ಯಾಲಿ ಬದಲಿಗೆ ಪಾದಯಾತ್ರೆ ನಡೆಸಲಾಯಿತು.
ಬೈಕ್ ರ್ಯಾಲಿ ನಡೆಸಲು ಕೊನೆಕ್ಷಣದಲ್ಲಿ ಮಂಗಳೂರು ಪೊಲೀಸರು ಅನುಮತಿ ನಿರಾಕರಿಸಿದ ಹಿನ್ನೆಲೆಯಲ್ಲಿ ರ್ಯಾಲಿಯನ್ನು ಮೊಟಕುಗೊಳಿಸಲಾಗಿತ್ತು. ಕುದ್ರೋಳಿ ಕ್ಷೇತ್ರದಿಂದ ಕೆಂಜಾರಿನ ವರೆಗೆ ನಡೆಯಲಿದ್ದ ರ್ಯಾಲಿಯನ್ನು ಬದಲಿಸಿ, ಮರವೂರಿನಿಂದ ಪಾದಯಾತ್ರೆಗೆ ಸೀಮಿತಗೊಳಿಸಲಾಯ್ತು.
ಬೈಕ್ ರ್ಯಾಲಿ ಬದಲು ತಮ್ಮ ತಮ್ಮ ವಾಹನಗಳಲ್ಲಿ ಮರವೂರಿಗೆ ಬಂದು ಸೇರಿದ ಸಂಘಟನೆಯ ನಾಯಕರು ಅಲ್ಲಿಂದ ಪಾದಯಾತ್ರೆ ಮೂಲಕ ಕೆಂಜಾರಿಗೆ ತೆರಳಿದರು. ಮೆರವಣಿಗೆಯಲ್ಲಿ ಕೋಟಿ ಚೆನ್ನಯರಿಗೆ ಜೈಕಾರ ಹಾಕುತ್ತಾ, ಅವರ ಹೆಸರನ್ನು ವಿಮಾನ ನಿಲ್ದಾಣಕ್ಕೆ ಇಡಲೇಬೇಕೆಂದು ಘೋಷಣೆಯನ್ನೂ ಕೂಗಿದರು.
ಈ ಸಂದರ್ಭದಲ್ಲಿ ಮಾತನಾಡಿದ ರಾಜಶೇಖರ ಕೋಟ್ಯಾನ್, ವಿಮಾನ ನಿಲ್ದಾಣಕ್ಕೆ ಹೆಸರಿಡುವ ವರೆಗೂ ಈ ಹೋರಾಟ ಮುಂದುವರಿಯಲಿದೆ. ಇದನ್ನು ಯಾರೂ ಹತ್ತಿಕ್ಕಲು ಸಾಧ್ಯವಿಲ್ಲ. ಇಂದು ಬೈಕ್ ರ್ಯಾಲಿಗೆ ಅನುಮತಿ ನೀಡದೆ ಹೋರಾಟವನ್ನು ಹತ್ತಿಕ್ಕುವ ಕೆಲಸ ಮಾಡಿದ್ದಾರೆ. ಆದರೆ, ಇದರಿಂದ ನಮ್ಮ ಹೋರಾಟವನ್ನು ನಿಯಂತ್ರಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ನಾಯಕರಾದ ಸತ್ಯಜಿತ್ ಸುರತ್ಕಲ್, ಬಿಲ್ಲವ ಬ್ರಿಗೇಡ್ ಸಂಘಟನೆಯ ಅಧ್ಯಕ್ಷ ಜೀವನ್ ಪೂಜಾರಿ, ಅಕ್ಷಿತ್ ಸುವರ್ಣ, ವಿವೇಕ್ ಪನಾಮಾ, ಪ್ರತಿಭಾ ಕುಳಾಯಿ, ಸೂರಜ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು. ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗಿಯಾಗಿ, ಹೋರಾಟಕ್ಕೆ ಬೆಂಬಲ ಸೂಚಿಸಿದರು.
ಅನುಮತಿ ನಿರಾಕರಿಸಿದ್ದು ಯಾಕೆ ?
ಬೈಕ್ ರ್ಯಾಲಿ ನಡೆಸಲು ಟ್ರಾಫಿಕ್ ಸಮಸ್ಯೆ ಮತ್ತು ಕೋಮು ಸಂಘರ್ಷಕ್ಕೆ ನಾಂದಿಯಾಗುತ್ತೆ ಅಂತ ಪೊಲೀಸ್ ಕಮಿಷನರ್ ನಿರಾಕರಿಸಿದ್ದಾಗಿ ಮಾಹಿತಿ ಲಭಿಸಿದೆ. ಬೈಕ್ ರ್ಯಾಲಿ ನಡೆಸಲು ಒಂದು ಸಂಘಟನೆಗೆ ಅವಕಾಶ ಕೊಟ್ಟರೆ, ನಾಳೆ ಇನ್ನೊಬ್ಬರಿಗೂ ಅವಕಾಶ ಕೊಡಬೇಕಾಗುತ್ತದೆ. ಕೊಡದೇ ಇದ್ದರೆ ಪೊಲೀಸರು ಮತ್ತು ಸಂಘಟನೆಗಳ ನಡುವೆ ಸಂಘರ್ಷ, ಘರ್ಷಣೆಗೆ ಅವಕಾಶ ನೀಡಿದಂತಾಗುತ್ತದೆ. ಅದಕ್ಕಾಗಿ ಪ್ರತಿಭಟನೆ ಮಾಡಿ, ಬೈಕ್ ರ್ಯಾಲಿ ಬೇಡ ಎಂದಿದ್ದರಂತೆ ಕಮಿಷನರ್. ಆದರೆ, ಸೂಚನೆ ನೀಡಿದ್ದರೂ, ರ್ಯಾಲಿಯನ್ನು ಬದಲಿಸದೇ ಇದ್ದುದರಿಂದ ಮುನ್ನಾ ದಿನ ಟ್ರಾಫಿಕ್ ಡಿಸಿಪಿ ಮೂಲಕ ನೋಟೀಸ್ ನೀಡಲಾಗಿತ್ತು ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.
ಬಿಜೆಪಿ ನಾಯಕರು ತಪ್ಪಿಸಿದ್ದು ಹೌದೇ..?
ಆದರೆ, ಕೊನೆಕ್ಷಣದಲ್ಲಿ ಪೊಲೀಸ್ ಇಲಾಖೆ ಅನುಮತಿ ನಿರಾಕರಿಸಿದ ವಿಚಾರ ಮಾತ್ರ ಸಂಘಟನೆ ಪ್ರಮುಖರಲ್ಲಿ ಬೇರೆಯದ್ದೇ ಸಂದೇಶ ಹೋಗಿತ್ತು. ಬಿಜೆಪಿ ಆಡಳಿತ ಉದ್ದೇಶಪೂರ್ವಕ ನಮ್ಮ ಹೋರಾಟವನ್ನು ಹತ್ತಿಕ್ಕಲು ಇಂಥ ಕೆಲಸ ಮಾಡಿದೆ ಎನ್ನುವ ಮಾತು ಕೇಳಿಬರುತ್ತಿತ್ತು. ಬಿಜೆಪಿ ರಾಜ್ಯಾಧ್ಯಕ್ಷರ ಕೈವಾಡ ಇದ್ದಿರಲೂಬಹುದು ಎನ್ನುವ ಮಾತೂ ಕೇಳಿಬಂದಿತ್ತು. ಕಳೆದ ಬಾರಿ ಟಿಕೆಟ್ ಆಕಾಂಕ್ಷಿಯಾಗಿದ್ದ ಸತ್ಯಜಿತ್ ಸುರತ್ಕಲ್, ಕೋಟಿ ಚೆನ್ನಯ ಹೋರಾಟದಲ್ಲಿ ಮುಂಚೂಣಿ ಇರುವುದರಿಂದ ಹೈಲೈಟ್ ಆಗಬಾರದೆಂದು ಬಿಜೆಪಿ ನಾಯಕರು ರ್ಯಾಲಿಗೆ ಅವಕಾಶ ತಪ್ಪಿಸಿದ್ದಾರೆ ಎಂಬ ಮಾತು ಬಂದಿತ್ತು. ಆದರೆ, ಅಂಥ ಪಿತೂರಿ ಏನೂ ನಡೆದಿರಲಿಲ್ಲ ಎನ್ನುತ್ತದೆ ಪೊಲೀಸ್ ಮೂಲಗಳು.
Video:
Billava Brigade took out a mammoth bike rally on Monday December 7 urging the administration to name Mangaluru International Airport after Tulu bravehearts Koti Chennaya. But police intervened and stopped the rally. The bikers were confused by the obstruction of the police force.
10-05-25 12:40 pm
Bangalore Correspondent
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
U T Khader, Dinesh Gundurao, Suhas Shetty Mur...
08-05-25 07:50 pm
Karwar high alert: ಕಾರವಾರದಲ್ಲಿ ಹೈ ಎಲರ್ಟ್ ; ಸಮ...
08-05-25 12:23 pm
10-05-25 01:58 pm
HK News Desk
ಯುದ್ಧ ಸಮಸ್ಯೆಗೆ ಪರಿಹಾರ ಅಲ್ಲ, ಮಾತುಕತೆಯಿಂದ ಬಗೆಹರ...
09-05-25 06:49 pm
India Pak War: ಭಾರತ ವಾಯುಪಡೆಯಿಂದ ಭೀಕರ ಪ್ರತಿದಾಳ...
09-05-25 12:33 pm
India - Pak War update: ಪಾಕಿಸ್ತಾನದ ಎಫ್ -16, ಎ...
09-05-25 12:00 am
New Pope, Robert Francis Prevost;140 ಕೋಟಿ ಸದಸ...
08-05-25 11:44 pm
09-05-25 11:07 pm
Mangalore Correspondent
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
Ullal accident, Mangalore: ರಸ್ತೆ ದಾಟುತ್ತಿದ್ದ...
08-05-25 10:54 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm