ಬ್ರೇಕಿಂಗ್ ನ್ಯೂಸ್
18-09-24 10:29 pm Mangalore Correspondent ಕರಾವಳಿ
ಮಂಗಳೂರು, ಸೆ.18: ಎಸ್ಇಝೆಡ್ ವ್ಯಾಪ್ತಿಯ ಜೆಬಿಎಫ್ ಕಂಪನಿಯನ್ನು ಕೇಂದ್ರ ಸರಕಾರದ ಗೈಲ್ ಕಂಪನಿ ಸ್ವಾಧೀನಕ್ಕೆ ಪಡೆದಿದ್ದು, ಇದಕ್ಕಾಗಿ ಭೂಮಿ ಕಳಕೊಂಡಿದ್ದ 115 ಮಂದಿ ಕುಟುಂಬಸ್ಥರಿಗೆ ಉದ್ಯೋಗ ಭದ್ರತೆ ಇರಲಿಲ್ಲ. ಈ ಬಗ್ಗೆ ಕಾಂಗ್ರೆಸ್ ಜಿಲ್ಲಾ ಕಾರ್ಮಿಕ ಘಟಕದಿಂದ ಹೋರಾಟ ಕೈಗೆತ್ತಿಕೊಂಡು ಗೈಲ್ ಕಂಪನಿಯ ಅಧಿಕಾರಿಗಳಿಗೆ ಒತ್ತಡ ಹೇರಿದ್ದು ಮತ್ತು ಎಂಎಲ್ಸಿ ಮಂಜುನಾಥ ಭಂಡಾರಿಯವರು ಪರಿಷತ್ ಅಧಿವೇಶನದಲ್ಲಿ ಪ್ರಸ್ತಾಪಿಸಿ ರಾಜ್ಯ ಸರಕಾರ ಮತ್ತು ಜಿಲ್ಲಾಧಿಕಾರಿಗಳಿಗೆ ಒತ್ತಡ ಹೇರಿದ್ದರಿಂದ ಗೈಲ್ ಕಂಪನಿಯು 115 ಮಂದಿಗೆ ಉದ್ಯೋಗ ನೀಡುವುದಕ್ಕೆ ಒಪ್ಪಿಗೆ ನೀಡಿದೆ ಎಂದು ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷ ಲಾರೆನ್ಸ್ ಡಿಸೋಜ ಹೇಳಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಕಳೆದ ಒಂದು ವರ್ಷದ ಅವಧಿಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಎಸ್ಇಝೆಡ್ ಮತ್ತು ಗೈಲ್ ಕಂಪನಿಯ ಅಧಿಕಾರಿಗಳ ಸಭೆಯನ್ನು ಹಲವು ಬಾರಿ ನಡೆಸಲಾಗಿದೆ. ಇದಲ್ಲದೆ, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಸದನದಲ್ಲಿ ಪ್ರಸ್ತಾಪಿಸಿದ್ದರು. ಕೈಗಾರಿಕೆಗಾಗಿ ಭೂಮಿ ಕಳಕೊಂಡವರಿಗೆ ಉದ್ಯೋಗ ನೀಡಬೇಕೆಂಬುದು ರಾಜ್ಯ ಸರಕಾರದ ಕಾನೂನು. ಈ ವಿಚಾರವನ್ನು ಜಿಲ್ಲಾ ಕಾನೂನು ಘಟಕದ ಅಧ್ಯಕ್ಷ ಮನೋರಾಜ್ ರಾಜೀವ ಅವರು ಗೈಲ್ ಕಂಪನಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದರು. ಇದಲ್ಲದೆ, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರೂ ಒತ್ತಡ ಹೇರಿದ್ದಲ್ಲದೆ, ಉದ್ಯೋಗ ನೀಡದಿದ್ದರೆ ಲೈಸನ್ಸ್ ನವೀಕರಣ ಮಾಡುವುದಿಲ್ಲ ಎಂದು ಬೆದರಿಕೆ ಹಾಕಿದ್ದರು.
ಸದನದಲ್ಲಿ ಪ್ರಸ್ತಾಪಿಸಿದ್ದಾಗ, ಕೈಗಾರಿಕೆ ಸಚಿವ ಎಂಬಿ ಪಾಟೀಲ್ ಕೂಡ 115 ಮಂದಿಗೆ ಉದ್ಯೋಗ ನೀಡಬೇಕು ಎನ್ನುವ ಬಗ್ಗೆ ಕೇಂದ್ರ ಸರಕಾರಕ್ಕೆ ಒತ್ತಡ ಹೇರುವುದಾಗಿ ತಿಳಿಸಿದ್ದರು. ಒಂದು ತಿಂಗಳ ಮೊದಲೇ ಆಗಸ್ಟ್ ಅಂತ್ಯದಲ್ಲಿ ಉದ್ಯೋಗ ನೀಡುವ ಬಗ್ಗೆ ಗೈಲ್ ಕಂಪನಿ ಚೇರ್ಮನ್ ಆಯುಷ್ ಗುಪ್ತಾ ತಿಳಿಸಿದ್ದರು. ಆದರೆ, ಉದ್ಯೋಗ ಖಾಯಮಾತಿ ಮಾಡಿದ ಬಗ್ಗೆ ಆದೇಶ ಪತ್ರ ನೀಡುವಂತೆ ಕೇಳಿಕೊಂಡಿದ್ದೆವು. ಇದೀಗ ಜಿಲ್ಲಾಧಿಕಾರಿಗಳಿಗೆ ಸ್ವತಃ ಪತ್ರ ಬರೆದು ಆಯುಷ್ ಗುಪ್ತಾ ಸೆ.30ರ ಒಳಗೆ ಉದ್ಯೋಗಿಗಳಿಗೆ ಆದೇಶ ಪತ್ರ ನೀಡುವುದಾಗಿ ತಿಳಿಸಿದ್ದಾರೆ. ಇದು ಕಾಂಗ್ರೆಸ್ ಕಾರ್ಮಿಕ ಘಟಕದ ಮತ್ತು ಇದಕ್ಕಾಗಿ ಶ್ರಮಿಸಿದ ಎಲ್ಲರ ಗೆಲುವು ಎಂದು ಹೇಳಿದರು.
ಇದೇ ವೇಳೆ ಮಾತನಾಡಿದ ಮನೋರಾಜ್ ರಾಜೀವ, 115 ಮಂದಿ ಭೂಮಿ ಕಳಕೊಂಡವರಿಗೆ ಉದ್ಯೋಗ ನೀಡುವುದು ಖಚಿತವಾಗಿದೆ. ಆದರೆ, ಜೆಬಿಎಫ್ ನಲ್ಲಿ ಉದ್ಯೋಗದಲ್ಲಿದ್ದ ಇನ್ನೂ 80 ಮಂದಿಯಷ್ಟು ಜನ ಗೈಲ್ ಕಂಪನಿಯಲ್ಲಿ ಉದ್ಯೋಗ ವಂಚಿತರಾಗಿದ್ದಾರೆ. ಕೌಶಲ್ಯ ಇದ್ದರೂ, ಗೈಲ್ ಕಂಪನಿಯವರು ಕೆಲಸಕ್ಕೆ ನಿರಾಕರಣೆ ಮಾಡುತ್ತಿದ್ದಾರೆ. ಇದನ್ನು ನಾವು ಖಂಡಿಸುತ್ತೇವೆ, ದಕ್ಷಿಣ ಕನ್ನಡ ಆಸುಪಾಸಿನ ಜಿಲ್ಲೆಯವರು ಈ ರೀತಿ ಉದ್ಯೋಗ ಕಳಕೊಂಡವರಿದ್ದಾರೆ. ಗೈಲ್ ಕಂಪನಿಯಲ್ಲಿ ಇನ್ನೂ ನೂರಕ್ಕೂ ಹೆಚ್ಚು ಉದ್ಯೋಗಗಳಿದ್ದು, ಭರ್ತಿ ಮಾಡುವ ಸಂದರ್ಭದಲ್ಲಿ ಜೆಬಿಎಫ್ ನಲ್ಲಿ ಕೆಲಸಕ್ಕಿದ್ದವರನ್ನು ಪರಿಗಣಿಸಬೇಕು ಎಂದು ಆಗ್ರಹಿಸಿದರು.
SEZ land GAIL company employment is the victory of congress labourers says Lawrence D’Souza, District President of the Labour Cell.
19-09-24 06:48 pm
HK News Desk
BJP MLA Munirathna, Rape Case; ಜಾತಿ ನಿಂದನೆ ಕೇ...
19-09-24 11:37 am
MLA Suresh Gowda, Nagamangala: ನಾಗಮಂಗಲದಲ್ಲಿ ಎ...
18-09-24 07:16 pm
Parameshwar, drugs, Bangalore crime: ರಾಜ್ಯದಲ್...
18-09-24 04:46 pm
Palestinian Flag: ಚಿಕ್ಕಮಗಳೂರಿನಲ್ಲಿ ಪ್ಯಾಲೆಸ್ತೀ...
16-09-24 07:49 pm
19-09-24 11:42 am
HK News Desk
ಸ್ಮಾರ್ಟ್ ಫೋನ್ ಹ್ಯಾಕ್ ಆಗುತ್ತೆ ಎಂದು ಪೇಜರ್ ಬಳಸುತ...
18-09-24 02:52 pm
ಹೆದ್ದಾರಿ ವೆಚ್ಚಕ್ಕಿಂತ ಹೆಚ್ಚು ಟೋಲ್ ವಸೂಲಿ ಯಾಕೆ ?...
18-09-24 02:46 pm
ಜಿಂಬಾಬ್ವೆಯಲ್ಲಿ ಭೀಕರ ಬರ ; ಜನರ ಹಸಿವು ನೀಗಿಸಲು ನ...
18-09-24 11:03 am
ಬುಲ್ಡೋಜರ್ ನ್ಯಾಯವನ್ನು ವೈಭವೀಕರಿಸುವುದು ತಪ್ಪು, ಅತ...
17-09-24 07:28 pm
19-09-24 04:53 pm
HK News Desk
Mcc elections, Manoj Kumar mayor: ಮಂಗಳೂರು ಪಾಲ...
19-09-24 03:39 pm
Mangalore Mayor elections 2024: ಮಂಗಳೂರು ಮಹಾನಗ...
18-09-24 10:45 pm
Mangalore, Lawrence D’Souza, congress Labour...
18-09-24 10:29 pm
Satish Kumpala, Mangalore: ಉಸ್ತುವಾರಿ ಸಚಿವರು ಎ...
17-09-24 10:11 pm
18-09-24 10:08 pm
Mangalore Correspondent
Bangalore fraud, Siddalingaiah Hiremath, Scam...
15-09-24 01:21 pm
MLA Munirathna Arrest: ತಿಂಗಳಿಗೆ 30 ಲಕ್ಷ ಲಂಚಕ್...
14-09-24 06:54 pm
Srimathi Shetty murder case, Mangalore Court...
14-09-24 11:52 am
Kristina Joksimovic, Miss Switzerland finalis...
13-09-24 10:50 pm